ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 26-07-2020

ನಿತ್ಯಭವಿಷ್ಯ : 26-07-2020

- Advertisement -

ಮೇಷರಾಶಿ
ಗುರುಗಳು, ಧಾರ್ಮಿಕ ವರಿಷ್ಠರ ಭೇಟಿ, ಆರ್ಥಿಕವಾಗಿ ಸಮಸ್ಯೆಗಳ ಪರಿಹಾರ, ಪ್ರಮಾಣಿಕತೆಯಿಂದ ಗೆಲುವು. ವಾಹನ, ಯಂತ್ರೋಪಕರಣಗಳಿಂದ ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರಗಳಿಂದ ಯಶಸ್ಸು. ಸಾಂಸಾರಿಕವಾಗಿ ಸಮಸ್ಯೆಗಳಿದ್ದರೂ ಹೊಂದಾಣಿಕೆಯಿರಲಿ. ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದುನೋಡುವ ನೀತಿ ಉತ್ತಮ.

ವೃಷಭರಾಶಿ
ಕುಟುಂಬ ವರ್ಗದವರಿಂದ ಸಂತಸ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಸಂಸಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ, ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಮನೆ ನಿರ್ಮಾಣ, ಶುಭಮಂಗಲ ಕಾರ್ಯಕ್ಕೆ ಮುನ್ನುಡಿ, ವಾಹನ, ಭೂಖರೀದಿಯಿಂದ ಲಾಭ.

ಮಿಥುನರಾಶಿ
ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಕಾರ್ಯದೊತ್ತಡದಿಂದ ಮನೆಯಿಂದ ದೂರ ಉಳಿಯಬೇಕಾಗುತ್ತದೆ. ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕ ಚಿಂತೆ ಕಾಡಲಿದೆ. ಧನಾರ್ಜನೆ ಪ್ರಗತಿಯಿದ್ದರೂ ಖರ್ಚು ವೆಚ್ಚಗಳು ಅಧಿಕ ರೂಪದಲ್ಲಿ ತೋರಿಬರಲಿದೆ. ಅಧಿಕಾರಿ ವರ್ಗಕ್ಕೆ ಸಹಕಾರ ಲಭಿಸಲಿದೆ.

ಕಟಕರಾಶಿ
ಕಾಡುತ್ತಿದ್ದ ಆರೋಗ್ಯ ಭಯ ನಿವಾರಣೆ. ಹಣಕಾಸಿನ ವಿಚಾರದಲ್ಲಿ ವಿವಾದ ಎದುರಾಗಲಿದೆ. ಕಾರ್ಯದೊತ್ತಡಿಂದ ಮಾನಸಿಕ ಅಶಾಂತಿ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹವು ಲಭಿಸಲಿದೆ. ವಿದ್ಯಾರ್ಥಿಗಳು ಹೆಚ್ಚು ಪ್ರಯತ್ನ ಬಲದಿಂದ ಮುಂದುವರಿದರೆ ಯಶಸ್ಸು.

ಸಿಂಹರಾಶಿ
ಭೂ ನಿವೇಷನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಓಡಾಟ, ಧರ್ಮಗುರುಗಳ ಭೇಟಿಯ ಅವಕಾಶ, ದೈವಾನುಗ್ರಹವಿದ್ದರೂ ಮಾನಸಿಕ ಚಿಂತೆ ಕಾಡಲಿದೆ. ಧನಾರ್ಜನೆಯಲ್ಲಿ ಪ್ರಗತಿ. ಶುಭ ಕಾರ್ಯಗಳ ಚಿಂತನೆ ಕಾರ್ಯರೂಪಕ್ಕೆ ಬರಲಿದೆ. ವಿದ್ಯಾರ್ಥಿಗಳು ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ.

ಕನ್ಯಾರಾಶಿ
ಕೌಟುಂಬಿಕ ವಾದ-ವಿವಾದ, ಕಲಹಗಳು ಬಗೆಹರಿಯಲಿವೆ. ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆಯೊಂದು ಅನುಭವಕ್ಕೆ ಬರಲಿದೆ. ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳಿಂದ ಬೇಸರ. ವಿದ್ಯಾಭ್ಯಾಸದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನ ಅಗತ್ಯ. ರಾಜಕಾರಣಿಗಳಿಗೆ ಆತಂಕ ಉಂಟಾಗಲಿದೆ.

ತುಲಾರಾಶಿ
ಗೃಹದಲ್ಲಿ ನೆಮ್ಮದಿ, ಮನೆಯಿಂದ ದೂರ ಇರುವಿರಿ. ನಿರೀಕ್ಷಿತ ರೂಪದಲ್ಲಿ ಲಾಭ. ಸ್ಥಗಿತ ಕಾರ್ಯವೊಂದು ಪುನರಾರಂಭ. ವೃತ್ತಿ ಕ್ಷೇತ್ರದಲ್ಲಿ ಮನೋದೃಢತೆಯಿಂದ ಯಶಸ್ಸು. ವ್ಯವಹಾರ ಕ್ಷೇತ್ರವೂ ನಿಧಾನಗತಿಯಲ್ಲಿ ಸಾಗಲಿದೆ. ಅನಿರೀಕ್ಷಿತ ರೂಪದಲ್ಲಿ ಧನಲಾಭವಾಗಲಿದೆ.

ವೃಶ್ಚಿಕರಾಶಿ
ಸಾಮಾಜಿಕವಾಗಿ ಕಾರ್ಯದೊತ್ತಡಕ್ಕೆ ಸಿಲುಕುವಿರಿ. ವೃತ್ತಿರಂಗದಲ್ಲಿ ಕಲಹ ಉಂಟಾದರೂ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಬಂಧುಗಳು ಹಾಗೂ ಮಿತ್ರರ ಸಹಕಾರದಿಂದ ಇಚ್ಚಿತ ಕಾರ್ಯಗಳಲ್ಲಿ ಯಶಸ್ಸು. ಧನಾರ್ಜನೆಗೆ ವಿಫುಲ ಅವಕಾಶದ ದಾರಿಗಳು ಗೋಚರಿಸಲಿವೆ. ಪೂರ್ವ ನಿಯೋಜಿತ ಕೆಲಸ ಕಾರ್ಯಗಳಲ್ಲಿ ಯಶಸ್ಸು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲದಿಂದ ಯಶಸ್ಸು ಲಭಿಸಲಿದೆ.

ಧನುರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರಿಂದ ನೆರವು. ಗೃಹ ನಿರ್ಮಾಣ, ನಿವೇಶನ ಖರೀದಿಗೆ ಸಕಾಲವಲ್ಲ. ಒತ್ತಡದ ನಡುವೆಯೂ ಕಾರ್ಯ ನಿರ್ವಹಣೆಯಿಂದ ಯಶಸ್ಸು. ಸಾಲ ಮರುಪಾವತಿಗಾಗಿ ಒತ್ತಡ. ಕಠಿಣ ಪರಿಶ್ರಮ ಹಾಗೂ ಸತತ ಶ್ರಮದಿಂದ ಕಾರ್ಯಸಾಧನೆ ಆದೀತು.

ಮಕರರಾಶಿ
ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಯೋಗವು ಒದಗಿಬರಲಿದೆ. ಅಪೂರ್ವ ಅವಕಾಶವೊಂದು ಎದುರಾಗಲಿರುವ ಸೂಚನೆ ನೀಡಲಿದೆ. ಸಾಂಸಾರಿಕ ಸಮಸ್ಯೆಯೊಂದರ ಮೇಲೆ ಹತೋಟಿ ಸಾಧಿಸುವ ಅವಕಾಶ ತಂದೀತು. ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿಮ್ಮ ಕಾರ್ಯ ಸಾಧನೆ ಗುರುತಿಸಲ್ಪಡುತ್ತದೆ. ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರಾಗಲಿದ್ದೀರಿ.

ಕುಂಭರಾಶಿ
ವೃತ್ತಿರಂಗದಲ್ಲಿ ಹೊಂದಾಣಿಕೆ ಅಗತ್ಯ. ಅವಕಾಶವೊಂದು ಲಭಿಸಲಿದ್ದು, ಸಫಲತೆಯನ್ನು ಪಡೆದುಕೊಳ್ಳಿ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ. ದೇಹಾರೋಗ್ಯದಲ್ಲಿ ಕೂಡಾ ಸುಧಾರಣೆ ಸಮಾಧಾನ ತರಲಿದೆ. ಧನಾರ್ಜನೆಯಲ್ಲಿ ವಿವಿಧ ರೂಪದಲ್ಲಿ ಸಫ‌ಲತೆ. ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ.

ಮೀನರಾಶಿ
ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡು ಬಂದೀತು. ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಶುಭಮಂಗಲ ಕಾರ್ಯಗಳಿಗಾಗಿ ಪ್ರಯಾಣ ಅನಿವಾರ್ಯ ವಾದೀತು. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular