ನಿತ್ಯಭವಿಷ್ಯ : 29-09-2020

0

ಮೇಷರಾಶಿ
ಆರ್ಥಿಕ ರಂಗದಲ್ಲಿ ಅಭಿವೃದ್ಧಿಯು ಕಂಡು ಬರುತ್ತದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ಕಚೇರಿಯಲ್ಲಿ ಒತ್ತಡ ಜಾಸ್ತಿ. ಬಂಧು-ಮಿತ್ರರ ಸಹಕಾರದಿಂದ ನೆಮ್ಮದಿ ತೋರಿ ಬಂದೀತು. ಆದರೂ ಆರ್ಥಿಕ ವಿಚಾರದಲ್ಲಿ ಗಮನವಿರಬೇಕು.

ವೃಷಭರಾಶಿ
ಬಂಧುಗಳ ಆಗಮನ, ಇಷ್ಟಾರ್ಥಸಿದ್ಧಿ, ಮಹಿಳೆಯರಿಗೆ ತೊಂದರೆ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ. ಮುಖ್ಯವಾಗಿ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನವೀಯಬೇಕು. ಕುಟುಂಬದಲ್ಲಿ ಖರ್ಚು-ವೆಚ್ಚಗಳು ಅಧಿಕ ರೀತಿಯಲ್ಲಿದ್ದರೂ ಬಂಧುಮಿತ್ರರಿಂದ ಸಂತೋಷ ತೋರಿ ಬರಲಿವೆ.

ಮಿಥುನರಾಶಿ
ರಾಜಕೀಯ ವರ್ಗದವರಿಗೆ ಹೆಚ್ಚಿನ ವಿವೇಚನೆಯಿಂದ ಮುಂದುವರಿಯಬೇಕಾದೀತು. ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉನ್ನತ ಅಧಿಕಾರಿಗಳಿಂದ ಪ್ರಶಂಸೆ. ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಮಟ್ಟಿನ ಜಾಗರೂಕತೆ ಅಗತ್ಯವಿದೆ.

ಕಟಕರಾಶಿ
ವ್ಯಾಪಾರದಲ್ಲಿ ಲಾಭಕ್ಕಿಂತ ನಷ್ಟಗಳು ಜಾಸ್ತಿ, ದಾಂಪತ್ಯದಲ್ಲಿ ಪ್ರೀತಿ, ಸಾಲ ಮಾಡುವ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿ ಹಾಗೂ ಕೌಟುಂಬಿಕವಾಗಿ ಶುಭಾಶುಭ ಮಿಶ್ರ ಫ‌ಲಗಳಿಂದ ತಾತ್ಕಾಲಿಕವಾಗಿ ಮಾನಸಿಕ ಶಾಂತಿ ದೊರೆತರೂ ಸಮಾಧಾನ ತೋರಿಬಾರದು. ಆರೋಗ್ಯದಲ್ಲಿ ಗಮನವಿರಲಿ.

ಸಿಂಹರಾಶಿ
ಅತಿಯಾದ ಮಾನಸಿಕ ಒತ್ತಡ ಕಂಡು ಬಂದು ಉದ್ವೇಗಕ್ಕೆ ಕಾರಣವಾಗದಂತೆ ಜಾಗ್ರತೆ ಇರಲಿ. ಕುಟುಂಬ ಸೌಖ್ಯ, ದಾನ ಧರ್ಮದಲ್ಲಿ ಆಸಕ್ತಿ, ವಾಹನದಿಂದ ತೊಂದರೆ, ವ್ಯಾಪಾರದಲ್ಲಿ ಮಂದಗತಿ. ಹಾಗೆ ಆರ್ಥಿಕವಾಗಿ ತೀವ್ರ ತರದ ಕಷ್ಟ-ನಷ್ಟಗಳಿದ್ದರೂ ಅನಿರೀಕ್ಷಿತವೆಂಬಂತೆ ಧನಾಗಮನವಿದೆ.

ಕನ್ಯಾರಾಶಿ
ಆರ್ಥಿಕವಾಗಿ ಖರ್ಚು-ವೆಚ್ಚಗಳು ಅಧಿಕವಾದಾವು. ಋಣ ವಿಮೋಚನೆ, ಆರೋಗ್ಯ ಭಾಗ್ಯ ಪ್ರಾಪ್ತಿ, ಕೃಷಿಯಲ್ಲಿ ಅಧಿಕ ಲಾಭ, ಮಾನಸಿಕ ಕಿರಿಕಿರಿ, ಮಿಶ್ರ ಫಲ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳಿಗೆ ಹೆಚ್ಚು ಪ್ರತಿಕ್ರಿಯಿಸದಿರಿ. ಆರ್ಥಿಕವಾಗಿ ತುಂಬಾ ಪ್ರಗತಿಯನ್ನು ಕಾಣುವಿರಿ.

ತುಲಾರಾಶಿ
ಯತ್ನ ಕಾರ್ಯಗಳಲ್ಲಿ ವಿಳಂಬ, ಧನ ವ್ಯಯ, ಶತ್ರು ಭಯ, ಆಕಸ್ಮಿಕ ಖರ್ಚು, ಅಶಾಂತಿ ಪಾಪ ಬುದ್ಧಿ.ಸಕಲ ಕಾರ್ಯಗಳಲ್ಲಿ ಜಯ, ಲಾಭಾದಿಗಳು, ಧನಪ್ರಾಪ್ತಿ, ಹಿಡಿದ ಕಾರ್ಯಗಳಿಂದ ಮಾನಸಿಕ ನೆಮ್ಮದಿ, ಸಾಂಸಾರಿಕ ಸುಖ ತೋರಿ ಬಂದರೂ ನಿಮ್ಮ ಪ್ರಯತ್ನಬಲವೇ ಪೂರಕವಾಗಲಿದೆ.

ವೃಶ್ಚಿಕರಾಶಿ
ವಾಹನ ರಿಪೇರಿಯಿಂದ ಖರ್ಚು, ಇಲ್ಲ ಸಲ್ಲದ ತಕರಾರು, ದ್ರವ್ಯ ನಷ್ಟ, ಅತಿಯಾದ ಕೋಪ, ದುಃಖ ಪ್ರಸಂಗಗಳು. ಹಲವಾರು ತರದ ಖರ್ಚು-ವೆಚ್ಚಗಳಿಂದಾಗಿ ನೀವಿಂದು ತುಂಬಾ ಹಣದ ಅಡಚಣೆಗೆ ಸಿಲುಕಲಿರುವಿರಿ. ನಿಮ್ಮ ಪರಿಶ್ರಮ ಗಾಳಿಯೊಡನೆ ಗುದ್ದಾಡಿದಂತಾ ಗುವುದು.

ಧನಸ್ಸುರಾಶಿ
ಸ್ವಯಂ ಸಮರ್ಥರಾದ ನಿಮಗಿಂದು ಯಾವ ಭಾಗದಲ್ಲೂ ಕೊರತೆಯಿರದು. ನಿಮ್ಮ ಪರಿಶ್ರಮಕ್ಕೆ ತಕ್ಕುದಾದ ಫ‌ಲ ಲಭಿಸಿಯೇ ತೀರುವುದು.ದಿನವಿಡೀ ದುಡಿಯುವ ನಿಮಗೆ ಆರಾಮದ ಅಗತ್ಯವಿದೆ. ಸೇವಕರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಸುಖ ಭೋಜನ, ಮನಶಾಂತಿ.

ಮಕರರಾಶಿ
ಹೆಚ್ಚಿನ ದೂರ ಪ್ರಯಾಣದಲ್ಲಿ ಆದಷ್ಟು ಹೆಚ್ಚಿನ ಕಾಳಜಿ ಇರಲಿ. ಮಂಗಳ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ಸತ್ಕಾರ್ಯ ಶಕ್ತಿ, ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಪರಿಶ್ರಮ ಮಾಡುವುದು ಅಗತ್ಯ. ಮಂಗಲಕಾರ್ಯದ ಯೋಗ ವಿರುತ್ತದೆ.

ಕುಂಭರಾಶಿ
ನಿರುದ್ಯೋಗಿಗಳಿಗೆ ಇತರರ ಮುಖದಲ್ಲಿದ್ದ ಅಣಕಿಸುವ ನಗು ಸ್ವಾಭಿಮಾನಕ್ಕೆ ಭಂಗ ತಂದೀತು. ಅನಾರೋಗ್ಯ, ಹೊಸ ವ್ಯವಹಾರದಿಂದ ಲಾಭ, ಊರೂರು ಸುತ್ತಾಟ, ತೀರ್ಥ ಕ್ಷೇತ್ರ ದರ್ಶನ ಮಾಡುವಿರಿ. ತಾಳ್ಮೆ ವಹಿಸಿರಿ. ಶ್ರೀದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಆರ್ಥಿಕ ವಾಗಿ ಅನೇಕ ಖರ್ಚುಗಳು ಕಂಡು ಬರಲಿವೆ.

ಮೀನರಾಶಿ
ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಹಣದ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಹಿತಶತ್ರುಗಳಿಂದ ತೊಂದರೆ. ಚಿಂತಿತ ಕೆಲಸ ಕಾರ್ಯಗಳು ಅಡೆತಡೆ ಗಳಿಂದಲೇ ಪೂರ್ಣವಾಗುತ್ತವೆ. ಉದ್ಯೋಗಿಗಳಿಗೆ ಹೊಸ ಉದ್ಯೋಗಗಳ ಅವಕಾಶ ಒದಗಿ ಬರುತ್ತದೆ. ದಿನಾಂತ್ಯದಲ್ಲಿ ಶುಭವಾರ್ತೆ ಇದೆ.

Leave A Reply

Your email address will not be published.