ಭಾನುವಾರ, ಜೂನ್ 15, 2025
Homehoroscopeನಿತ್ಯಭವಿಷ್ಯ : 13-08-2020

ನಿತ್ಯಭವಿಷ್ಯ : 13-08-2020

- Advertisement -

ಮೇಷರಾಶಿ
ಸ್ತ್ರೀ ಧನಾಗಮನ, ತಾಯಿಯಿಂದ ಅನುಕೂಲ, ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀದೇವರ ಪುಣ್ಯಕಾರ್ಯಗಳಲ್ಲಿ ಭಾಗವಹಿಸುವಿರಿ. ವಸ್ತ್ರ ಆಭರಣದ ಚಿಂತೆ, ಮಾತಿನಿಂದ ಕಾರ್ಯಜಯ, ಸಂಗಾತಿಯ ಆರೋಗ್ಯ ವ್ಯತ್ಯಾಸ, ಗುಪ್ತ ಆಲೋಚನೆಗಳು.

ವೃಷಭರಾಶಿ
ಪ್ರಯಾಣ ಭಯ ಮತ್ತು ಗಾಬರಿ ಸ್ಥಳ ಬದಲಾವಣೆಯ ಚಿಂತೆ, ಮನೆಯಲ್ಲಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ತಂದೀತು. ಆರ್ಥಿಕ ಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ. ಅನಿರೀಕ್ಷಿತವಾಗಿ ಶುಭವಾರ್ತೆ. ಮಾತಿನಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳು, ಕಫ ಮತ್ತು ಬೆವರು ದೋಷ.

ಮಿಥುನರಾಶಿ
ಪ್ರೀತಿ-ಪ್ರೇಮದಲ್ಲಿ ಸಂಶಯ, ದುಶ್ಚಟಗಳಿಂದ ತೊಂದರೆ, ಗುಪ್ತ ತೀರ್ಮಾನಗಳು, ಕಾರ್ಯರಂಗದಲ್ಲಿ ಅಭಿವೃದ್ದಿದಾಯಕ ವಾತಾವರಣ ಸಮಾಧಾನ ತರಲಿದೆ. ಆರ್ಥಿಕವಾಗಿ ಯಾರಿಗೂ ಜಾಮೀನುದಾರರಾಗದಿರಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಬೇಕು. ದಿನಾಂತ್ಯ ಅತಿಥಿಗಳ ಆಗಮನ. ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ಸೌಂದರ್ಯವರ್ಧಕ ವಸ್ತುಗಳಿಂದ ತೊಂದರೆ, ಆರ್ಥಿಕ ನಷ್ಟಗಳು.

ಕಟಕರಾಶಿ
ಮೋಜು ಮಸ್ತಿಯ ಆಲೋಚನೆ, ಹಿರಿಯರಿಗೆ ಶೀತ, ಕಫ‌ ಬಾಧೆಯಿಂದ ಸಮಸ್ಯೆ ಕಂಡು ಬಂದೀತು. ಕೆಲಸಕಾರ್ಯಗಳಲ್ಲಿ ಚುರುಕು ತನವಿರಲಿ. ಅನಾವಶ್ಯಕವಾಗಿ ಭಾವುಕರಾಗದಿರಿ. ಬೇರೆಯವರೊಡನೆ ವಾದ, ವಿವಾದವನ್ನು ಮಾಡುವುದು ಬೇಡ. ಸ್ತ್ರೀಯರಿಂದ ಬಾಧೆ, ಗುಪ್ತ ವ್ಯವಹಾರಗಳಿಂದ ತೊಂದರೆ, ಅಧಿಕ ಭೋಜನ, ಸ್ವಂತ ವ್ಯವಹಾರದಲ್ಲಿ ಲಾಭ.

ಸಿಂಹರಾಶಿ
ಉದ್ಯೋಗ ನಷ್ಟ, ಆತ್ಮೀಯರಿಂದ ಲಾಭ ಪ್ರಶಂಸೆಗಳು, ಕಲ್ಲು, ಮರುಳು ವ್ಯವಹಾರದಲ್ಲಿ ಚೇತರಿಕೆ ಕಂಡು ಬರುತ್ತದೆ. ಕೃಷಿ, ಪಶು ವ್ಯವಹಾರಸ್ಥರಿಗೆ ಆದಾಯವು ಹೆಚ್ಚಲಿದೆ. ಪ್ರವಾಸದಿಂದ ಸಂತಸ. ಸರಕಾರಿ ನೌಕರ ವರ್ಗಕ್ಕೆ ಮುಂಭಡ್ತಿಯಿಂದ ಸಂತಸವಿದೆ. ಅನಾರೋಗ್ಯದಿಂದ ಗುಣಮುಖ, ಮಿತ್ರರಲ್ಲಿ ಮನಸ್ತಾಪ, ದೂರ ಪ್ರಯಾಣದ ಆಲೋಚನೆ.

ಕನ್ಯಾರಾಶಿ
ಆರ್ಥಿಕ ಅಭಿವೃದ್ಧಿ, ಪ್ರಯಾಣದಿಂದ ಲಾಭ, ಧನದಾಯಕ್ಕೆ ಕೊರತೆ ಇಲ್ಲವಾದರೂ ಚಿಂತೆ ಕಾಡದೆ ಬಿಡದು. ದುಡುಕು ಬುದ್ಧಿಯಿಂದ ಕಾರ್ಯಹಾನಿ ಮಾತು ಮಾತಿಗೂ ಮುನಿಯುವ ನಿಮಗೆ ಶಾಂತಿ, ಸಮಾಧಾನದ ಅಗತ್ಯವಿದೆ. ನ್ಯಾಯಾಲಯದಲ್ಲಿ ಅಪಜಯ. ಮಿತ್ರರಿಂದ ಅನುಕೂಲ, ಕೃಷಿಕರಿಗೆ ಅನುಕೂಲ, ಹಿರಿಯರಿಂದ ಉಪದೇಶ, ಮುಂದಾಲೋಚನೆಗಳು, ಮೃಷ್ಟಾನ್ನ ಭೋಜನ, ರತ್ನಾಭರಣದ ಅದೃಷ್ಟ.

ತುಲಾರಾಶಿ
ಆರೋಗ್ಯದಲ್ಲಿ ಎಚ್ಚರವಿರಲಿ. ದುಡುಕಿನ ನಿರ್ಣಯದಿಂದ ಅನಾವಶ್ಯಕ ಕಾರ್ಯಹಾನಿಯಾಗಲಿದೆ. ಬಂಧುಗಳ ಆಕಸ್ಮಿಕ ಅವಘಡವು ಕ್ಲೇಶ ತಂದೀತು. ಕಫ‌ ಬಾಧೆಯಿಂದ ಪತ್ನಿಯ ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಒತ್ತಡಗಳು, ಸ್ವಂತ ವ್ಯವಹಾರದಲ್ಲಿ ಯಶಸ್ಸು, ಆಯುಷ್ಯದ ಭೀತಿ, ಭವಿಷ್ಯದ ಅಪನಂಬಿಕೆಗಳು, ಅನಿರೀಕ್ಷಿತ ಲಾಭ, ಕಫ ಬಾದೆ,ಗಂಟಲು ನೋವು.

ವೃಶ್ಚಿಕರಾಶಿ
ದಾಂಪತ್ಯದಲ್ಲಿ ಮನಸ್ತಾಪ, ಸ್ವಾಭಿಮಾನವನ್ನು ಬದಿಗೊತ್ತಿ ಮೇಲಾಧಿಕಾರಿಗಳ ಕೃಪೆ ಪಡೆಯಿರಿ. ಧರ್ಮದೇವತಾ ಕಾರ್ಯಗಳು ನಡೆಯಲಿವೆ. ಐಕ್ಯಮತದ ಕೊರತೆ ಇದ್ದು ಭಿನ್ನಾಭಿಪ್ರಾಯ ತಂದೀತು. ಪ್ರವಾಸದಿಂದ ಮನಸ್ಸಿಗೆ ಸಂತಸ. ಪಾಲುದಾರಿಕೆಯಲ್ಲಿ ಸಮಸ್ಯೆ, ಅನಿರೀಕ್ಷಿತ ನಷ್ಟ, ಹೆಣ್ಣುಮಕ್ಕಳ ಜೀವನದ ಚಿಂತೆ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಮೋಸ ವಂಚನೆಗಳು.

ನಸ್ಸುರಾಶಿ
ಸರಕಾರಿ ಅಧಿಕಾರಿಗಳೊಡನೆ ವಾಗ್ವಾದಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಖರ್ಚುವೆಚ್ಚಗಳು ಅಧಿಕವಾಗದಂತೆ ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ತುಸು ಸಮಸ್ಯೆ ಬಂದೀತು. ಸಂಚಾರದಲ್ಲಿ ಜಾಗ್ರತೆ. ಶತ್ರುಕಾಟ ಸಾಲಬಾದೆಗಳು, ಕೆಲಸಗಾರರಿಂದ ತೊಂದರೆ, ಮಿತ್ರರಿಂದ ತಪ್ಪು ನಿರ್ಧಾರ, ಸಂಗಾತಿಯಿಂದ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ.

ಮಕರರಾಶಿ
ಪ್ರೀತಿ-ಪ್ರೇಮದ ಮನಸ್ಸು, ಮಕ್ಕಳ ನಡವಳಿಕೆಯಿಂದ ಬೇಸರ, ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿದೆ. ಬಂದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿರಿ. ಹಿರಿಯರು ನಿಮಗೆ ಸಹಕಾರ ನೀಡಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ. ಸಂತಾನದ ಚಿಂತೆ, ದುಶ್ಚಟಗಳು, ಉದ್ಯೋಗದಲ್ಲಿ ಅನುಕೂಲ, ಯಶಸ್ಸು, ಶುಭಕಾರ್ಯದ ಚಿಂತೆ.

ಕುಂಭರಾಶಿ
ಚರಾಸ್ತಿ ವಾಹನ ಅನುಕೂಲ, ಒಂದೊಂದಾಗಿ ಕಾರ್ಯಸಾಧನೆಯಾಗಿ ಮಾನಸಿಕ ಸಮಾಧಾನ ಸಿಗಲಿದೆ. ಯಾವುದೇ ವಿಚಾರವನ್ನು ಋಣಾತ್ಮಕವಾಗಿ ಚಿಂತಿಸಿದೆ ಮುಂದುವರಿದರೆ ಅಭಿವೃದ್ಧಿ ಖಂಡಿತ. ಆರ್ಥಿಕವಾಗಿ ಹೆಚ್ಚು ಚಿಂತೆ ಇರದು. ವಿದ್ಯಾಭ್ಯಾಸ ಪ್ರಗತಿ, ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ಶಕ್ತಿದೇವತೆ ದರ್ಶನ, ಆರ್ಥಿಕ ಪ್ರಗತಿಯ ಕಡೆ ಗಮನ.

ಮೀನರಾಶಿ
ಸ್ಥಿರಾಸ್ತಿಯಿಂದ ತೊಂದರೆಗಳು, ಆಗಾಗ ಅಡೆತಡೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ನಿಮ್ಮ ಪ್ರಯತ್ನಬಲಕ್ಕೆ, ಕ್ರಿಯಾಶೀಲತೆಗೆ ನಿಶ್ಚಿತ ಫ‌ಲ ಸಿಗಲಿದೆ. ನವದಂಪತಿಗಳಿಗೆ ಶುಭವಾರ್ತೆ ಇದೆ. ಸಂಚಾರದಲ್ಲಿ ಜಾಗ್ರತೆ ವಹಿಸುವುದು. ವಾಹನ ಅಪಘಾತಗಳು, ತಾಯಿಯ ಆರೋಗ್ಯ ವ್ಯತ್ಯಾಸ, ನೆರೆಹೊರೆಯವರೊಂದಿಗೆ ಮನಸ್ತಾಪ, ಸೋಲು ಅಪಕೀರ್ತಿ ನಷ್ಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular