ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 07-10-2020

ನಿತ್ಯಭವಿಷ್ಯ : 07-10-2020

- Advertisement -

ಮೇಷರಾಶಿ
ಅಲ್ಪ ಲಾಭ ಅಧಿಕ ಖರ್ಚು, ಮಿತ್ರರಲ್ಲಿ ಮನಸ್ತಾಪ, ಹಿತಶತ್ರುಗಳಿಂದ ತೊಂದರೆ. ಮಂಗಲ ಕಾರ್ಯದ ಬಗ್ಗೆ ಮಾತುಕತೆ ನಡೆಯಲಿದೆ. ಸ್ವಲ್ಪ ಏರಿಳಿತ ಕಂಡು ಬಂದರೂ ಹಿಡಿದ ಕಾರ್ಯದಲ್ಲಿ ಜಯ ಗಳಿಸುವಿರಿ. ಕೋರ್ಟು ಕಚೇರಿ ವಿಚಾರದಲ್ಲಿ ಸ್ವಲ್ಪ ಹಿಂಜರಿತ ಕಂಡು ಬರಲಿದೆ. ದಿನಾಂತ್ಯ ಶುಭವಿದೆ.

ವೃಷಭರಾಶಿ
ಆರೋಗ್ಯದಲ್ಲಿ ಒಂದೊಂದು ದಿನ ಒಂದೊಂದು ಕಷ್ಟಗಳು ಕಂಡು ಬಂದಾವು. ವಿದ್ಯಾಭ್ಯಾಸದಲ್ಲಿ ತೊಂದರೆ, ನೌಕರಿಯಲ್ಲಿ ಕಿರಿಕಿರಿ, ಮನಕ್ಲೇಷ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಆರೋಗ್ಯದ ಕುರಿತು ತುಂಬಾ ಚಿಂತೆಯಾದೀತು. ಬೇಸಾಯಗಾರರಿಗೆ ಸ್ವಲ್ಪ ತಲೆಬಿಸಿ ದಿನಗಳಿವು. ಮಂಗಲಕರ ಸುದ್ದಿ ಇರುವುದು.

ಮಿಥುನರಾಶಿ
ಉದ್ಯೋಗ ರಂಗದಲ್ಲಿ ಅಭಿವೃದ್ಧಿ ತೋರಿಬರುವುದು. ಋಣಭಾದೆ ಹೆಚ್ಚಾಗುತ್ತದೆ, ಶತ್ರುತ್ವ, ಸುಳ್ಳು ಮಾತನಾಡುವುದು, ಕುಟುಂಬದಲ್ಲಿ ಕಲಹ. ಕಾರ್ಯಾನುಕೂಲವು ತೋರಿ ಬರಲಿದೆ. ಮಡದಿಯ ಹಾಗೂ ಮಕ್ಕಳ ಆರೋಗ್ಯದಲ್ಲಿ ಅಭಿವೃದ್ಧಿಯು ಕಂಡುಬರುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ.

ಕಟಕರಾಶಿ
ಅಧಿಕ ತಿರುಗಾಟ, ಹಣದ ತೊಂದರೆ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಪರ ಸ್ತ್ರೀಯರಿಂದ ತೊಂದರೆ. ಉದ್ಯೋಗ ರಂಗದಲ್ಲಿ ಅಭಿವೃದ್ಧಿಯು ಕಂಡು ಬರುವುದು. ದಿನೇ ದಿನೇ ಮನಸ್ಸು ಸಮಾಧಾನಗೊಳ್ಳಲಿದೆ. ಜನರ ಮಾತಿಗೆ ತಲೆಬಿಸಿ ಮಾಡಿಕೊಳ್ಳುವುದು ಬೇಡ. ಮನಸ್ಸನ್ನು ಉದ್ವೇಗಕ್ಕೆ ಕೊಡಬೇಡಿರಿ. ಶುಭವಾರ್ತೆ ಇದೆ.

ಸಿಂಹರಾಶಿ
ಆರೋಗ್ಯದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಬುದ್ಧಿಯನ್ನು ಕೈಗೆ ಕೊಡಬೇಡಿರಿ. ಹಿರಿಯರೊಂದಿಗೆ ಸಮಾಧಾನದಿಂದ ವರ್ತಿಸಿರಿ. ಆಲೋಚನೆ ವಿಪರೀತ ಮಾಡ ಬೇಡಿರಿ. ನಿಮಗೆ ಮುಂದೆ ತುಂಬಾ ಶುಭವು ಕಂಡು ಬರಲಿದೆ. ಸ್ಥಳ ಬದಲಾವಣೆ, ವ್ಯವಹಾರದಲ್ಲಿ ಏರುಪೇರು, ಶತ್ರು ಭಾದೆ, ಆಕಸ್ಮಿಕ ಖರ್ಚು.

ಕನ್ಯಾರಾಶಿ
ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ಬಂಧುಗಳಿಂದ ಮನ್ನಣೆ, ವಿವಾಹಕ್ಕೆ ಸ್ವಲ್ಪ ಅಡತಡೆ. ಮಂಗಲ ಕಾರ್ಯದ ನಿಮಿತ್ತ ಪ್ರವಾಸವು ಕೂಡಿ ಬರಲಿದೆ. ಮನೆಯಲ್ಲಿ ತುಂಬಾ ಹರುಷದ ವಾತಾವರಣವಿದೆ. ಕುಟುಂಬದ ಹಿರಿಯರೊಡನೆ ಜಗಳ ಬೇಡ. ಮನೆಗೆ ಬರುವ ಹುಡುಗಿಯು ಸ್ವಲ್ಪ ಸಮಾಧಾನವನ್ನು ತಂದೀತು.

ತುಲಾರಾಶಿ
ರಾಜಕೀಯ ರಂಗದಲ್ಲಿರುವವರಿಗೆ ತುಂಬಾ ಶುಭವಿದೆ. ದಾಯಾದಿ ಕಲಹ, ಅಧಿಕ ಖರ್ಚು, ಅಪಕೀರ್ತಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಸಂತಾನಕ್ಕೆ ಹಾನಿ, ಸಲ್ಲದ ಅಪವಾದ. ಮೇಲಿಂದ ಮೇಲೆ ಕೆಳಗಿನಿಂದ ಹಾಗೂ ಮೇಲಿನವರಿಂದ ಒತ್ತಡಗಳು ಕಂಡುಬಂದಾವು. ಮೂರ್ಖ ಜನರ ಯಾ ಹಿತ ಶತ್ರುಗಳ ಸಹವಾಸದಿಂದ ದೂರವಿರುವುದು.

ವೃಶ್ಚಿಕರಾಶಿ
ಮನೆತುಂಬಾ ಗಲಿಬಿಲಿಯ ವಾತಾವರಣವಿರು ತ್ತದೆ. ಹಿರಿಯರ ಮಾತಿಗೆ ವಿರೋಧ ಬೇಡ. ಎಲ್ಲರೊಂದಿಗೆ ಸಹಜವಾಗಿ ಬೆರೆತು ಆನಂದಿಸಿರಿ. ಪರರಿಗೆ ವಂಚಿಸುವಿರಿ, ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು, ವಾಸ ಗೃಹದಲ್ಲಿ ತೊಂದರೆ. ಮಂಗಲ ಕಾರ್ಯದ ಬಗ್ಗೆ ಚಿಂತನ, ಮಂಥನ ನಡೆಯಲಿದೆ. ಶುಭವಿದೆ.

ಧನಸ್ಸುರಾಶಿ
ಆರ್ಥಿಕ ಪರಿಸ್ಥಿತಿ ಉತ್ತಮ, ಧನಪ್ರಾಪ್ತಿ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಲಾಭ. ಕಾರ್ಯರಂಗ ಹಾಗೂ ವಿದ್ಯಾರಂಗದಲ್ಲಿ ಏಳಿಗೆಯು ಕಂಡು ಬರಲಿದೆ. ಮನಸ್ಸು ವಿಚಲಿತಗೊಳಿಸು ವುದು. ಅತಿಥಿಗಳ ಆಗಮನವು ಸಂತಸ ತಂದೀತು. ಪ್ರವಾಸವನ್ನು ಕೈಗೊಳ್ಳುವಿರಿ. ಖರ್ಚುವೆಚ್ಚದಲ್ಲಿ ಹಿಡಿತವಿರಲಿ.

ಮಕರರಾಶಿ
ಮಂಗಲ ಕಾರ್ಯ ಯಾ ಗೃಹ ಕೃತ್ಯದಲ್ಲಿ ಸ್ವಲ್ಪ ಸಹನೆ ಮಾಡಿದರೆ ಉತ್ತಮ. ತೀರ್ಥಯಾತ್ರೆ ದರ್ಶನ, ಭೂಲಾಭ, ವಾಹನ ಪ್ರಾಪ್ತಿ, ಸ್ಥಿರಾಸ್ತಿ ಸಂಪಾದನೆ. ಪತ್ನಿಯಿಂದ ಕಿರಿಕಿರಿಯು ತೋರಿ ಬಂದರೂ ಮನಸ್ಸು ಮುದಗೊಂಡೀತು. ಗೃಹ ಖರೀದಿಯ ಬಗ್ಗೆ ಖರ್ಚು ವೆಚ್ಚಗಳಿಂದ ತಲೆ ಬಿಸಿಯಾದೀತು.

ಕುಂಭರಾಶಿ
ಮಡದಿಯ ಮುನಿಸು ಕಂಡು ಬಂದರೂ ಸಮಾಧಾನದಿಂದ ಮೌನವಾಗಿರುವುದೇ ಲೇಸು. ಅನ್ಯ ಜನರಲ್ಲಿ ವೈಮನಸ್ಸು, ಅಕಾಲ ಭೋಜನ, ಮಾನಸಿಕ ಅಶಾಂತಿ, ನಂಬಿದ ಜನರಿಂದ ಮೋಸ. ಜಾಣ್ಮೆಯಿಂದ ಪರಿಹರಿಸಿಕೊಳ್ಳಿರಿ. ಮಕ್ಕಳು ಹಾಗೂ ಕುಟುಂಬದ ಸದಸ್ಯರು ಆಗಮಿಸಿಯಾರು. ಕಿರು ಸಂಚಾರವಿರುತ್ತದೆ .

ಮೀನರಾಶಿ
ನೆಂಟಸ್ತಿಕೆಯು ಕಂಡು ಬರಲಿದೆ. ಸ್ವಲ್ಪ ಪ್ರಯತ್ನದ ಅಗತ್ಯತೆ ಇರುತ್ತದೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅತಿಯಾದ ನಿದ್ರೆ, ನಾನಾ ರೀತಿಯ ದುಃಖ, ಕಾರ್ಯ ವಿಕಲ್ಪ, ಋಣಭಾದೆಗಳು. ಗೆಳೆಯರೊಂದಿಗೆ ಸಂತಸ ಅನುಭವಿಸುವಿರಿ. ಸ್ನೇಹಕ್ಕೆ ಅಂತರವಿಟ್ಟುಕೊಳ್ಳುವಿರಿ. ಆರ್ಥಿಕರಂಗದಲ್ಲಿ ಅಭಿವೃದ್ಧಿಯು ಕಂಡು ಬರಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular