ನಿತ್ಯಭವಿಷ್ಯ : 09-10-2020

0

ಮೇಷರಾಶಿ
ಹೆಚ್ಚು ಅಭಿವೃದ್ಧಿಯು ತೋರಿ ಬಂದು ಮನಸ್ಸು ನಿರಾಳವಾಗಲಿದೆ. ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಗೆ ತೊಂದರೆಗಳು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಂದತ್ವ, ಮರೆವು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಮೋಸ. ಖರ್ಚುಗಳು ಹೆಚ್ಚಿ ಆತಂಕ ತಂದೀತು. ಮನೆಯಲ್ಲಿ ಹಲವು ದಿನಗಳ ಬಳಿಕ ಸಂತಸದ ವಾತಾವರಣವು ಕಂಡು ಬರಲಿದೆ. ಕ್ಲೇಶವು ಕಡಿಮೆಯಾಗಲಿದೆ.

ವೃಷಭರಾಶಿ
ಆಗಾಗ ಪತ್ನಿಯಿಂದ ಕೆಟ್ಟ ಮಾತನ್ನು ಕೇಳಿಕೊಳ್ಳುವಿರಿ. ಅಹಂಭಾವ, ಕೋಪ, ಆತುರದ ಸ್ವಭಾವಗಳು, ದಾಂಪತ್ಯದ ಮೇಲೆ ದುಷ್ಪರಿಣಾಮ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ, ತಂದೆ ಮಕ್ಕಳಲ್ಲಿ ಮನಸ್ತಾಪ, ಸ್ಥಿರಾಸ್ತಿ ತಗಾದೆಗಳು. ಆದಷ್ಟು ತಾಳ್ಮೆ ವಹಿಸುವುದು ಅಗತ್ಯವಿದೆ. ಸದ್ಯದಲ್ಲೇ ಎಲ್ಲಾ ಸುಧಾರಣೆ ಕಂಡು ಬರುವುದು. ಆರೋಗ್ಯವು ಸುಧಾರಿಸುತ್ತಾ ಹೋಗಲಿದೆ. ತಾಳ್ಮೆ ಸಹನೆ ಅಗತ್ಯವಿರುತ್ತದೆ.

ಮಿಥುನರಾಶಿ
ದೂರ ಪ್ರದೇಶದಲ್ಲಿ ಉದ್ಯೋಗ, ದೂರ ಪ್ರಯಾಣ, ಹೊಸ ಆಸೆ ಉತ್ಸಾಹಗಳು, ಬಾಡಿಗೆದಾರರಿಂದ ತೊಂದರೆಗಳು, ಉದ್ಯೋಗದಲ್ಲಿ ಒತ್ತಡಗಳು, ಸಾಲ ಮಾಡುವ ಪರಿಸ್ಥಿತಿ. ಕೆಲಸಕಾರ್ಯಗಳಿಗಾಗಿ ಓಡಾಟವು ಕಂಡು ಬರಲಿದೆ. ಆರ್ಥಿಕವಾಗಿ ತುಂಬಾ ಅಭಿವೃದ್ಧಿಯನ್ನು ಕಾಣುವಿರಿ. ತಾಯಿಯ ಬಲದಿಂದ ಮುನ್ನಡೆ ಸಾಧಿಸುವಿರಿ. ಕಾರ್ಮಿಕ ವರ್ಗದವರಿಗೆ ಲಾಭವು ಕಂಡು ಬಂದು ಸಂತಸ.

ಕಟಕರಾಶಿ
ನಿಧಾನವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಆಲೋಚಿಸಿ, ಚಿಂತಿಸಿ ಮುನ್ನಡೆಯಿರಿ. ಮಕ್ಕಳಿಂದ ಧನಾಗಮನ, ಸ್ವಯಂಕೃತ ಅಪರಾಧದಿಂದ ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆಯ ಆಲೋಚನೆ, ಕುಟುಂಬಸ್ಥರಿಂದ ಅಪವಾದ. ಆಗಾಗ ಅಡಚಣೆಗಳು ತೋರಿ ಬಂದು ಬೇಸರವಾಗಲಿದೆ. ಶೀತ, ಕಫ‌ ಬಾಧೆ ಕಾಡಬಹುದು. ಆರ್ಥಿಕವಾಗಿ ಅಭಿವೃದ್ಧಿ ಕಂಡು ಬರುವುದು.

ಸಿಂಹರಾಶಿ
ರಾಶಿಯ ಹೆಸರಿನಂತೆ ಮುನ್ನಡೆ ಇರುತ್ತದೆ. ಯಾವುದೇ ವಿಚಾರದಲ್ಲಿ ಅಭಿವೃದ್ಧಿ ಇದ್ದೇ ಇರುತ್ತದೆ. ಅವಕಾಶ ವಂಚಿತ ತಂದೆಯಿಂದ ನಷ್ಟ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ, ದಾಯಾದಿ ಕಲಹಗಳು, ರಕ್ತದ ಅಧಿಕ ಉಷ್ಣ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಹೊಂದುವಿರಿ. ಮನೆಯಲ್ಲಿ ಶುಭಮಂಗಲ ಕಾರ್ಯದ ತಯಾರಿಯು ನಡೆಯಲಿದೆ.

ಕನ್ಯಾರಾಶಿ
ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ತೊಂದರೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸಿನ ಚಿಂತೆ, ಭೂಮಿ ವ್ಯವಹಾರಗಳಿಂದ ಸಮಸ್ಯೆ, ದಾಂಪತ್ಯ ಕಲಹ. ಮನೆಯ ಹಿರಿಯರೊಡನೆ ನಿಷ್ಠುರಕ್ಕೆ ಕಾರಣರಾಗುವಿರಿ. ಅನಾವಶ್ಯಕವಾಗಿ ಹಿರಿಯರ ಕೆಲಸದಲ್ಲಿ ಸಮಸ್ಯೆಯನ್ನು ತಂದೊಡ್ಡಲಿದ್ದೀರಿ. ಜಾಗ್ರತೆ ವಹಿಸುವುದು ಅಗತ್ಯವಿದೆ. ವೃತ್ತಿರಂಗದಲ್ಲಿ ಉದ್ವೇಗದ ವಾತಾವರಣ ಕಂಡು ಬರಲಿದೆ.

ತುಲಾರಾಶಿ
ಆತ್ಮ ಸಂಕಟಗಳು, ಅನಾರೋಗ್ಯ, ಅಪವಾದಗಳಿಂದ ಭಾದೆ, ದಾಂಪತ್ಯದಿಂದ ದೂರವಾಗುವ ಮನಸ್ಥಿತಿ, ಪಾಲುದಾರಿಕೆಯಲ್ಲಿ ನಷ್ಟ, ಅನಿರೀಕ್ಷಿತ ಧನಾಗಮನ. ವ್ಯಾಪಾರ, ವ್ಯವಹಾರದಲ್ಲಿ ಆಗಾಗ ಅಡಚಣೆ ಗಳನ್ನು ಹೊಂದಲಿದ್ದೀರಿ. ನಿರೀಕ್ಷಿಸಿದಷ್ಟು ಲಾಭವು ಸಿಗಲಾರದು. ದಾಯಾದಿಗಳ ಕಿರಿಕಿರಿಯು ನಿಮ್ಮ ಮನಸ್ಸನ್ನು ಘಾಸಿಗೊಳಿಸಲಿದೆ. ಈ ಸಮಯದಲ್ಲಿ ನಂಬಿಕೆ ಸರಿಯಲ್ಲಾ.

ವೃಶ್ಚಿಕರಾಶಿ
ಪ್ರಿಯ ಮಿತ್ರರೊಡನೆ ನಿಷ್ಠುರಕ್ಕೆ ಕಾರಣರಾಗುವಿರಿ. ಮಾನ ಅಪಮಾನ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಗಳಿಂದ ನೋವು, ಮಕ್ಕಳಲ್ಲಿ ಮಂದತ್ವ ಆಲಸ್ಯ, ಸ್ಥಿರಾಸ್ತಿ ಭೂಮಿ ವಾಹನದ ಮೇಲೆ ಸಾಲ, ಗರ್ಭ ದೋಷಗಳು, ಹೊಟ್ಟೆ ನೋವು. ಕಾರ್ಮಿಕ ವರ್ಗಕ್ಕೆ ನಿಮ್ಮ ಸಹಾಯಹಸ್ತ ದೊರೆತರೂ ಮೋಸಕ್ಕೆ ಗುರಿಯಾಗದಂತೆ ಜಾಗ್ರತೆ ವಹಿಸಿರಿ. ಅನಿರೀಕ್ಷಿತವಾಗಿ ಶುಭಫ‌ಲವು ಕಂಡು ಬರುವುದು. ಶುಭವಾರ್ತೆ.

ಧನುರಾಶಿ
ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳ ಭಾದೆ, ಉದ್ಯೋಗದಲ್ಲಿ ಅನುಕೂಲ, ಬಂಧುಗಳು ದೂರವಾಗುವರು, ದುಃಸ್ವಪ್ನಗಳಿಂದ ನಿದ್ರಾಭಂಗ. ನಿಮ್ಮ ಗುರಿಯು ಸುಲಲಿತವಾಗಿ ನಡೆಯಲಿದೆ. ಆರ್ಥಿಕವಾಗಿ ಸಮತೋಲನವನ್ನು ಕಾಯ್ದುಕೊಳ್ಳಿರಿ. ಆರೋಗ್ಯದಲ್ಲಿ ಕೂಡಾ ಜಾಗ್ರತೆ ವಹಿಸುವುದು ಅಗತ್ಯವಿದೆ. ಕಿರು ಸಂಚಾರವು ಸಂತಸ ನೀಡಲಿದೆ. ದಿನಾಂತ್ಯ ಶುಭವಿದೆ.

ಮಕರರಾಶಿ
ಪ್ರೀತಿ-ಪ್ರೇಮದಲ್ಲಿ ಸಂಶಯಗಳು, ಬಾಲಗ್ರಹ ದೋಷಗಳು, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ತೊಂದರೆ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ದಾಯಾದಿಗಳಿಂದ ತೊಂದರೆ, ಪ್ರಯಾಣ ವಿಘ್ನ. ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದ ಕೆಲಸಕಾರ್ಯ ವಿಳಂಬವಾಗಲಿದೆ. ಆದಷ್ಟು ತಾಳ್ಮೆ ವಹಿಸುವುದು ಅಗತ್ಯವಾಗಿದೆ. ಆರ್ಥಿಕವಾಗಿ ಆಗಾಗ ಅಡಚಣೆಗಳು ತೋರಿ ಬಂದಾವು. ಮನೆಯಲ್ಲಿ ಅನಿರೀಕ್ಷಿತ ನೆಂಟರು ಬಂದಾರು.

ಕುಂಭರಾಶಿ
ಭೂಮಿ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃಕಲಹಗಳು, ಸ್ತ್ರೀಯರಿಂದ ತೊಂದರೆ, ವಾಹನ ಗಳಿಂದ ಸಮಸ್ಯೆ, ಯಂತ್ರೋಪಕರಣಗಳಿಂದ ಅವಘಡ, ವಿದ್ಯಾಭ್ಯಾಸ ಒತ್ತಡಗಳು. ಶ್ರೀದೇವರ ಅನುಗ್ರಹದಿಂದ ನಿಮ್ಮ ಮನೋ ಕಾಮನೆಗಳು ಹಂತ ಹಂತವಾಗಿ ನೆರವೇರಲಿವೆ. ಕ್ರೀಡಾಳುಗಳು ತಮ್ಮ ಸಫ‌ಲತೆಯನ್ನು ಕಂಡು ಕೊಂಡಾರು. ವ್ಯಾಪಾರಿ ವರ್ಗಕ್ಕೆ ತಕ್ಕಮಟ್ಟಿನ ಲಾಭವು ಕಂಡು ಬರುವುದು.

ಮೀನರಾಶಿ
ಕೃಷಿಕರಿಗೆ ಸಂತಸದ ವಾರ್ತೆ ಇದೆ. ಸ್ವಯಂಕೃತ ಅಪರಾಧಗಳು, ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರೊಂದಿಗೆ ಕಿರಿಕಿರಿ, ಬಂಧುಗಳ ಮನಸ್ತಾಪ, ಅತಿ ವೇಗದ ಚಾಲನೆ, ಭಂಡ ಧೈರ್ಯ-ಆತ್ಮ ವಿಶ್ವಾಸ. ನೆನೆಸಿದ ಕೆಲವು ಕಾರ್ಯಗಳು ನಡೆಯಲಿವೆ. ಬರಬೇಕಾದ ಹಣವು ಬರಲಿದೆ. ಪ್ರಯತ್ನದ ಅಗತ್ಯವಿದೆ. ಮಂಗಲಕಾರ್ಯಕ್ಕೆ ಮನಸ್ಸು ಮಾಡಿದ್ದಲ್ಲಿ ಯಶಸ್ಸು ನಿಶ್ಚಿತವಾಗಿದೆ.

Leave A Reply

Your email address will not be published.