ನಿತ್ಯಭವಿಷ್ಯ : 10-09-2020

0

ಮೇಷರಾಶಿ
ತಾಯಿಯಿಂದ ಆರ್ಥಿಕ ಸಹಾಯ, ಕೃಷಿಕರಿಗೆ ಅನುಕೂಲ, ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಸ್ವಲ್ಪ ಏರಿಳಿತಗಳು ಕಂಡು ಬಂದಾವು, ರೈತಾಪಿ ವರ್ಗಕ್ಕೆ ಸ್ವಲ್ಪ ಚಿಂತೆಯ ಕಾಲವಾದೀತು, ಆರೋಗ್ಯವು ಸುಧಾರಿಸುತ್ತಾ ಬರಲಿದೆ, , ಯತ್ನ ಕಾರ್ಯ ಜಯ, ಸ್ಥಿರಾಸ್ತಿಯಿಂದ ಧನಾಗಮನ, ಮಾನಸಿಕ ಉಲ್ಲಾಸ, ಶುಭಕಾರ್ಯದ ಯೋಚನೆ, ವಾಹನ ಸ್ಥಿರಾಸ್ತಿ ಯೋಗ, ಮೃಷ್ಟಾನ್ನ ಭೋಜನ.

ವೃಷಭರಾಶಿ
ಬಹುದಿನಗಳಿಂದ ಆರೋಗ್ಯ ಸರಿಇಲ್ಲದೆ ನರಳುತ್ತಿರುವ ನಿಮಗೆ ಈ ದಿನ ಸ್ವಲ್ಪ ನಿರಾಳವಾಗಲಿದೆ. ನಿಮ್ಮ ಆತ್ಮೀಯ ಮಿತ್ರರ ಆಕಸ್ಮಿಕ ಭೇಟಿಯಿಂದ ನಿಮಗೆ ಸೂಕ್ತ ಸಲಹೆಗಳು ದೊರೆಯುವುದು, ಸ್ವಂತ ಉದ್ಯಮ ವ್ಯಾಪಾರದಲ್ಲಿ ಪ್ರಗತಿ, ಹತ್ತಿರದ ಪ್ರಯಾಣ, ಬಂಧುಗಳಿಂದ ನೆರೆಹೊರೆಯವರಿಂದ ಸಹಕಾರ, ಸಹೋದರಿಯಿಂದ ಅನುಕೂಲ, ಸ್ಥಳ ಬದಲಾವಣೆಯಿಂದ ಯಶಸ್ಸು, ಪತ್ರ ವ್ಯವಹಾರದಲ್ಲಿ ಅನುಕೂಲ.

ಮಿಥುನರಾಶಿ
ಶೃಂಗಾರ ಸಾಧನಗಳಿಗೆ ಐಷಾರಾಮಿ ವಸ್ತುಗಳಿಗೆ ಖರ್ಚು, ಆಕಸ್ಮಿಕವಾಗಿ ಪ್ರಯಾಣವು ಒದಗಿಬಂದೀತು. ಆದರೆ ನಿಮಗೆ ಅದರಿಂದ ಸಂತಸ ಸಿಗಲಿದೆ. ಕಾರ್ಯಸಾಧನೆಯಾಗಲಿದೆ. ಗೃಹ ಯಾ ವಾಹನ ಖರೀದಿ ಬಗ್ಗೆ ಸಾಲಕ್ಕಾಗಿ ಪರದಾಡುವಂತಾದೀತು, ದುಶ್ಚಟಗಳಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸ ಪ್ರಗತಿ, ಶಕ್ತಿದೇವತೆಯ ಆರಾಧನೆ, ಕುಟುಂಬಸ್ಥರಿಂದ ಅಪವಾದ.

ಕಟಕರಾಶಿ
ಸ್ವಂತ ಉದ್ಯಮದಲ್ಲಿ ಅನುಕೂಲ, ಯತ್ನ ಕಾರ್ಯದಲ್ಲಿ ಜಯ, ಸ್ವಯಂಕೃತ ಅಪರಾಧಗಳಿಂದ ಭಾದೆ, ಮಿತ್ರರಿಂದ ಅನುಕೂಲ, ವಾಹನ ಸ್ಥಿರಾಸ್ತಿ ಯೋಗ, ಸ್ತ್ರೀಯರಿಂದ ಅನುಕೂಲ, ಹಿರಿಯರ ಹಾಗೂ ಆಪ್ತರ ಹಿತನುಡಿಗಳು ಕೆರಳಿದ ಮನಸ್ಸಿಗೆ ತಂಪು ನೀಡಲಿದೆ. ಶಾಂತಿ ಪ್ರಿಯರಾಗಿ ವರ್ತಿಸಿರಿ. ಅನಿರೀಕ್ಷಿತವಾಗಿ ಒಳ್ಳೆಯ ಸುದ್ದಿಯು ನಿಮಗೆ ದೊರಕೀತು. ದಿನಾಂತ್ಯ ಶುಭ.

ಸಿಂಹರಾಶಿ
ನಿಮ್ಮ ಸಮಯವು ಎಲ್ಲಾ ರೀತಿಯಲ್ಲಿ ಚೆನ್ನಾಗಿದ್ದರೂ ಮನೆಯಲ್ಲಿ ಹಿರಿಯರ ಆರೋಗ್ಯ ಹಾನಿಯಿಂದ ತಲೆಬಿಸಿಯಾದೀತು, ನಂಬಿದ ದೇವರು ಕೈ ಬಿಡನು, ಮಕ್ಕಳ ಭೇಟಿಯಿಂದ ಸಮಾಧಾನ, ಉದ್ಯೋಗದಲ್ಲಿ ನಷ್ಟ, ಹಿನ್ನಡೆಗಳು, ಪತ್ರ ವ್ಯವಹಾರಗಳಲ್ಲಿ ತೊಂದರೆ, ಗಂಟಲು ನೋವು, ನರದೌರ್ಬಲ್ಯ, ಐಷಾರಾಮಿ ಜೀವನದ ವ್ಯಾಮೋಹ, ಸ್ಥಳ ಬದಲಾವಣೆಯಿಂದ ತೊಂದರೆ, ಸ್ತ್ರೀಯರಿಂದ ಮಿತ್ರರಿಂದ ತೊಂದರೆಗಳು.

ಕನ್ಯಾರಾಶಿ
ಯತ್ನ ಕಾರ್ಯದಲ್ಲಿ ಜಯ, ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ಅದೃಷ್ಟದ ದಿವಸ, ಪವಿತ್ರ ಕ್ಷೇತ್ರದ ದರ್ಶನ, ಕುಟುಂಬದಲ್ಲಿ ಪ್ರಶಂಸೆ, ರತ್ನಾಭರಣ ಯೋಗ, ಸ್ತ್ರೀಯರಿಂದ ಅನುಕೂಲ, ಮಾತಿನಲ್ಲಿ ಚತುರತೆ ಇರುವ ನೀವು ಎಲ್ಲರನ್ನು ಮೋಹಗೊಳಿಸುವಿರಿ. ಗೃಹದಲ್ಲಿ ಪತ್ನಿಯೊಂದಿಗೆ ಮುನಿಸು ಹಾಗೂ ಕೋಪತಾಪಗಳಿದ್ದೀತು, ವೃತ್ತಿರಂಗ ದಲ್ಲಿ ಭಡ್ತಿಯ ಸಂಭವ, ಮಿತ್ರರಿಂದ ಸಹಕಾರ, ಪ್ರೀತಿ-ಪ್ರೇಮದಲ್ಲಿ ಜಯ.

ತುಲಾರಾಶಿ
ಉದ್ಯೋಗದಲ್ಲಿ ಒತ್ತಡಗಳು, ಸ್ವಂತ ಉದ್ಯೋಗದಲ್ಲಿ ಪ್ರಗತಿ, ಮಾನಸಿಕ ವೇದನೆ, ಅನಿರೀಕ್ಷಿತ ಅನುಕೂಲ,ನಿರ್ಮಲ ಮನಸ್ಸನ್ನು ಇಟ್ಟುಕೊಳ್ಳುವುದು. ಮನಸ್ಸನ್ನು ಏರುಪೇರು ಮಾಡಲು ಬಿಡಬೇಡಿ. ನ್ಯಾಯಾಲಯದ ಕಾರ್ಯದಲ್ಲಿ ಏರುಪೇರು ಕಂಡುಬಂದೀತು. ಮನಸ್ಸನ್ನು ಉದ್ವೇಗದಿಂದ ಹಿಂದೆ ತನ್ನಿರಿ, ಧನಾಗಮನ ಆತ್ಮವಿಶ್ವಾಸ.

ವೃಶ್ಚಿಕರಾಶಿ
ಸಂಗಾತಿಯೊಂದಿಗೆ ವಿರಸ, ಪಾಲುದಾರಿಕೆ ಯಶಸ್ಸು, ಮಕ್ಕಳ ಜೀವನ ಉತ್ತಮ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನೀರಿನಿಂದ ತೊಂದರೆಗಳು, ತಿರುಗಾಟದಿಂದ ವ್ಯಾಪಾರ ಮಾಡುವವರಿಗೆ ಜಾಗ್ರತೆಯ ಅಗತ್ಯವಿದೆ. ಆರ್ಥಿಕ ದೃಷ್ಟಿಯಲ್ಲಿ ಹಿಂಭಡ್ತಿ ಇರುವುದು. ಆದರೂ ಧೈರ್ಯದಿಂದ ಮನ್ನಡೆಯುವುದು ಮುಖ್ಯ. ಶ್ರೀ ದೇವರ ಅನುಗ್ರಹವಿರಲಿ, ಸ್ತ್ರೀಯರಿಂದ ತೊಂದರೆ, ರತ್ನಾಭರಣ ಖರೀದಿಯಲ್ಲಿ ಮೋಸ, ಶೃಂಗಾರ ಸಾಧನಗಳಿಗೆ ಖರ್ಚು.

ಧನಸ್ಸುರಾಶಿ
ಶೈಕ್ಷಣಿಕ ಕಾರ್ಯರಂಗದಲ್ಲಿ ಅಭಿವೃದ್ಧಿಯ ದಿನಗಳಿವು. ನಿಮ್ಮ ಕಾರ್ಯವೈಖರಿಗೆ ಹಾಗೂ ತಾಳ್ಮೆ, ಸಮಾಧಾನಕ್ಕೆ ಒಳ್ಳೆಯ ಪ್ರಶಂಸೆಯು ಕಂಡುಬಂದೀತು ಮುನ್ನಡೆಯುವುದು, ಶತ್ರು ಕಾಟ,ಸಾಲಬಾದೆಗಳು, ಕಾರ್ಮಿಕರಿಂದ ಸಮಸ್ಯೆ, ಜೈಲುವಾಸ, ಗ್ಯಾಸ್ಟಿಕ್ ಶೀತ ಕಫ ಬಾಧೆ, ಅನಿರೀಕ್ಷಿತ ಧನಾಗಮನ, ಸಾಲ ದೊರೆಯುವುದು, ಪೂರ್ವದ ಕಷ್ಟದ ನೆನಪು.

ಮಕರರಾಶಿ
ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸಂತಾನ ಸಮಸ್ಯೆಗಳಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಸಂಗಾತಿಯೊಂದಿಗೆ ಬೇಸರ, ಐಷಾರಾಮಿ ಜೀವನದ ಕನಸು, ಸುಧಾರಣೆಯ ದಿನಗಳಿವು. ಪತ್ನಿಯ ಉದ್ಯೋಗದಲ್ಲಿ ಭಡ್ತಿ ಇರುತ್ತದೆ. ಮಕ್ಕಳಿಂದ ಸುಖ, ಸಂತೋಷ, ಸಮಾಧಾನವಿರುತ್ತದೆ. ವೃತ್ತಿರಂಗದಲ್ಲಿ ಸ್ವಲ್ಪ ತಿಕ್ಕಾಟದಿಂದ ಬೇಸರವಾದೀತು, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಯಶಸ್ಸು, ತಾಯಿಯಿಂದ ಅನುಕೂಲ, ಸ್ತ್ರೀಯರಿಂದ ಸಹಕಾರ ಉತ್ತಮ ಗೌರವ.

ಕುಂಭರಾಶಿ
ಸ್ಥಿರಾಸ್ತಿ ವಾಹನದ ಮೇಲೆ ಸಾಲ, ಆರ್ಥಿಕ ರಂಗದಲ್ಲಿ ಅಭಿವೃದ್ಧಿ ಇರುತ್ತದೆ. ಹಾಗೆಂದುಕೊಂಡು ದುವ್ಯìಸನದಿಂದ ಕಳೆದು ಕೊಂಡರೆ ತಪ್ಪು ನಿಮ್ಮದಾದೀತು. ಹಳೆಯ ಗೆಳೆಯರ ಭೇಟಿ, ಅವರೊಂದಿಗೆ ಕಾಲ ಕಳೆಯುವಿರಿ, ತಾಯಿಯಿಂದ ಆರ್ಥಿಕ ಸಹಾಯ, ಗುಪ್ತ ವಿಷಯಗಳಿಂದ ತೊಂದರೆ, ಸೇವಕರಿಂದ ಮಾನಸಿಕ ಒತ್ತಡ, ಪ್ರಯಾಣ ರದ್ದು, ವಸ್ತುಗಳ ಕಳವು, ಬೇಜವಾಬ್ದಾರಿತನದಿಂದ ಕಷ್ಟಗಳಿಗೆ ಸಿಲುಕುವಿರಿ, ಶೃಂಗಾರ ಸಾಧನಗಳಿಂದ ಆರೋಗ್ಯದ ಮೇಲೆ ಪರಿಣಾಮ.

ಮೀನರಾಶಿ
ಪ್ರೇಮಿಗಳಲ್ಲಿ ಮನಸ್ತಾಪ, ಭಾವನಾತ್ಮಕ ಸೋಲು, ಹೊಸಬಗೆಯ ವಾತಾವರಣವು ಮನಸ್ಸಿಗೆ ಮುದ ನೀಡಲಿದೆ. ಶ್ರೀದೇವತಾನುಗ್ರಹವು ಉತ್ತಮವಿರುವುದರಿಂದ ಮುನ್ನಡಿ ಇಡುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಕಿರು ಸಂಚಾರವಿದೆ, ಕಾನೂನುಬಾಹಿರ ನಡವಳಿಕೆಯಿಂದ ಸಮಸ್ಯೆಗಳು, ಮಕ್ಕಳಿಂದ ಅನುಕೂಲ, ಸ್ಥಳ ಬದಲಾವಣೆ ಯೋಚನೆಗಳು, ಸಂತಾನ ಸಮಸ್ಯೆಗಳು, ಭುಜದ ನೋವು ಕೈ ಕಾಲಿಗೆ ಪೆಟ್ಟು.

Leave A Reply

Your email address will not be published.