ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 11-07-2020

ನಿತ್ಯಭವಿಷ್ಯ : 11-07-2020

- Advertisement -

ಮೇಷರಾಶಿ
ಯಾವುದೇ ಕೆಲಸ ಕಾರ್ಯಗಳಿಗೆ ವಿವೇಚನೆ ಅತೀ ಅಗತ್ಯವಿದೆ.ಬುದ್ಧಿ ಚುರುಕಾಗಿದ್ದರೂ ಹವ್ಯಾಸದಿಂದ ವಿದ್ಯೆಯು ನೈವೇದ್ಯವಾದೀತು.ದೇವತಾ ಕಾರ್ಯಗಳು ಮನಸ್ಸಿಗೆ ನೆಮ್ಮದಿಯನ್ನು ನೀಡಲಿದೆ. ಶುಭ ಕಾರ್ಯಗಳಿಗೆ ಓಡಾಟ, ದೇವತಾ ಕಾರ್ಯಗಳಿಗೆ ಖರ್ಚು, ವಯೋವೃದ್ಧರಿಗೆ ಸಹಾಯ ಮಾಡುವಿರಿ, ಮಕ್ಕಳಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ತಾಯಿಯೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ವೃಷಭರಾಶಿ
ಸಂಗಾತಿಯೊಂದಿಗೆ ವಾಗ್ವಾದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಬೇಸರ, ಕೆಲವೊಂದು ವಿಚಾರಗಳಿಂದ ತೊಂದರೆ, ನೆರೆಹೊರೆಯವರ ಕಲಹ ಮಾನಸಿಕವಾಗಿ ಕಿರಿಕಿರಿ ತಂದೀತು. ಬಂಧುಗಳ ಸಮಾಗಮದಿಂದ ಕಾರ್ಯಸಾಧನೆ ಆಗಲಿದೆ.ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರಕಲಿದೆ. ದಾಂಪತ್ಯ ಸುಖ ಶಾಂತಿ ಇರುವುದು. ತಂದೆಯಿಂದ ನೋವು, ಉದ್ಯೋಗ ಬದಲಾವಣೆಗೆ ಆಲೋಚನೆ, ನೆರೆಹೊರೆ-ಬಂಧುಗಳಿಂದ ಅನುಕೂಲ.

ಮಿಥುನರಾಶಿ
ನೀವಿಂದು ಸ್ಪಷ್ಟ ನಿರ್ಧಾರ ತಾಳಬೇಕಾದ ಪ್ರಸಂಗವು ಬರಬಹುದು.ಆದರೆ ಹತಾಶರಾಗದಿರಿ. ದೃಢ ನಿರ್ಧಾರದಿಂದ ಮುನ್ನಡೆಯಿರಿ.ಆರ್ಥಿಕವಾಗಿ ಖರ್ಚು ವೆಚ್ಚಗಳೇ ಹೆಚ್ಚಾದೀತು. ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ಹಣಕಾಸು ವಿಚಾರದಲ್ಲಿ ಕೆಟ್ಟ ನಿರ್ಧಾರ, ಅನಗತ್ಯ ಮಾತಿಂದ ಸಮಸ್ಯೆಗೆ ಸಿಲುಕುವಿರಿ, ಉದ್ಯೋಗದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಅಭಿವೃದ್ಧಿ. ದಿನಾಂತ್ಯ ಶುಭವಾರ್ತೆ.

ಕಟಕರಾಶಿ
ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಪ್ರಗತಿ, ನಿಮ್ಮ ವ್ಯಾಪಾರ, ವ್ಯವಹಾರಗಳಲ್ಲಿ ದೊಡ್ಡ ತಿರುವು ಒದಗಬಹುದು. ಸಾಂಸಾರಿಕವಾಗಿ ಅಧಿಕ ಖರ್ಚುಗಳು ತೋರಿ ಬರುವುದು.ಧರ್ಮಕಾರ್ಯಗಳಿಗಾಗಿ ಧನವ್ಯಯವಿದೆ. ಮಕ್ಕಳ ವಿಚಾರದಲ್ಲಿ ಜಾಗ್ರತೆ ಇರಲಿ. ಕಾಲು ನೋವು, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಕೋಪ, ಮಿತ್ರರಿಂದ ಅನುಕೂಲ, ಮಕ್ಕಳಲ್ಲಿ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಸಿಂಹರಾಶಿ
ಶತ್ರುಗಳ ಕಾಟ, ಸಾಲಗಾರರಿಂದ ಕಿರಿಕಿರಿ, ಮಾನಸಿಕ ಒತ್ತಡ, ಸಂಗಾತಿಯಲ್ಲಿ ಬೇಜವಾಬ್ದಾರಿ, ದಾಂಪತ್ಯ ಸಣ್ಣ ಪುಟ್ಟ ಅಭಿಪ್ರಾಯ ಬೆೇಧ ಬರಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಫ‌ಲ ದೊರಕಲಿದೆ.ಯೋಗ್ಯ ವಯಸ್ಕರಿಗೆ ನೆಂಟಸ್ಥಿಕೆ ಸಾಮಿಪ್ಯ ಪಡೆದೀತು.ನೌಕರ ವರ್ಗದಿಂದ ಸಮಸ್ಯೆಗಳು ಬಂದಾವು. ವೈದ್ಯರಿಗೂ ಗೋಚರವಾಗದ ರೋಗ ಬಾಧೆ, ಮಾಟ-ಮಂತ್ರದ ಭೀತಿ, ವಯೋವೃದ್ಧರಿಗೆ ಗೌರವ ನೀಡಿ, ಹಳೇ ವಸ್ತು-ವಾಹನದಿಂದ ಖರ್ಚು, ನಿದ್ರೆಯಲ್ಲಿ ಕೆಟ್ಟ ಕನಸು ಬೀಳುವುದು.

ಕನ್ಯಾರಾಶಿ
ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ-ವಾಹನ ಲಾಭ, ಹಾಳು ದುಶ್ಚಟಕ್ಕೆ ಬಲಿ ಬೀಳಬಹುದು. ಹಾಗಿದ್ದರೆ ಅವನತಿ,ಅಧೋಗತಿ.ದೂರ ಸಂಚಾರದಲ್ಲಿ ಕಾರ್ಯ ಸಿದ್ಧಿ ಇರುತ್ತದೆ.ವಿದ್ಯಾರ್ಥಿಗಳಿಗೆ ಅಲಸ್ಯದಿಂದ ಪ್ರಗತಿಯಲ್ಲಿ ಹಿನ್ನಡೆ ಇದೆ.ತಾಂತ್ರಿಕ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸ. ಮಕ್ಕಳ ಪ್ರೀತಿ ವಿಚಾರದಲ್ಲಿ ಆತಂಕ, ದುಶ್ಚಟಗಳು ಅಧಿಕ ಮಾಡಿಕೊಳ್ಳುವಿರಿ, ದಾಯಾದಿಗಳಿಂದ ಕುಟುಂಬದಲ್ಲಿ ಕಲಹ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ತೊಂದರೆ.

ತುಲಾರಾಶಿ
ಅನಗತ್ಯ ತಿರುಗಾಟ, ಶಕ್ತಿ ದೇವತೆ ದರ್ಶನ, ಮಕ್ಕಳು-ಬಂಧುಗಳಿಂದ ಅವಮಾನ, ಉದ್ಯೋಗ-ಸ್ಥಳ ಬದಲಾವಣೆಯಿಂದ ತೊಂದರೆ, ರಾಜಕೀಯವಾಗಿ ಸ್ಥಾನಮಾನಕ್ಕಾಗಿ ಹೋರಾಟ. ಕೆಲಸಕಾರ್ಯಗಳು ಶತ್ರುಪೀಡೆಯಿಂದಾಗಿ ವಿಫ‌ಲ ವಾದೀತು. ಆದಾಯಕ್ಕೆ ಮೀರಿ ಅಧಿಕವಾಗಿ ಖರ್ಚು ಗಳಿರುತ್ತವೆ.ರಿಪೇರಿ ಕೆಲಸಕಾರ್ಯಗಳಿಗೆ ಖರ್ಚಿಗಳಿರುತ್ತವೆ. ಸ್ಥಿರಾಸ್ತಿಯಲ್ಲಿ ಮೋಸ, ಉದ್ಯೋಗ ಕಳೆದುಕೊಳ್ಳುವ ಭೀತಿ, ಹಿತ ಶತ್ರುಗಳ ಕಾಟ.

ವೃಶ್ಚಿಕರಾಶಿ
ಹೆಣ್ಣು ಮಕ್ಕಳಿಂದ ಅನುಕೂಲ, ಆರ್ಥಿಕ ಸಹಾಯ ಪ್ರಾಪ್ತಿ, ಅವಿರತ ಪ್ರಯತ್ನಬಲಕ್ಕೆ ಕಾರ್ಯಸಿದ್ಧಿ ಇದೆ. ಸರಕಾರಿ ಕೆಲಸಕ್ಕಾಗಿ ಧನವ್ಯಯವಿದೆ.ಹಿರಿಯರ ಮಾರ್ಗದರ್ಶನದಿಂದ ಮುನ್ನಡೆ ಇದೆ. ಮನೆಯಲ್ಲಿ ದೇವತಾಕಾರ್ಯಗಳು ನಡೆದು ಸಮಾಧಾನವಾಗಲಿದೆ. ನೆರೆಹೊರೆಯವರೊಂದಿಗೆ ವಾಗ್ವಾದ, ದುಶ್ಚಟಗಳಿಗೆ ದಾಸರಾಗುವಿರಿ, ಪ್ರಯಾಣದಲ್ಲಿ ತೊಂದರೆ, ಮನಸ್ಸಿನಲ್ಲಿ ಆತಂಕ, ಕುಟುಂಬಕ್ಕೆ ಮಾಟ-ಮಂತ್ರದ ಭೀತಿ,

ಧನಸ್ಸುರಾಶಿ
ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ಹಳೇ ವಸ್ತುಗಳಿಂದ ಪೆಟ್ಟು, ಮಾರ್ಯಾದೆಗೆ ಎಡವಟ್ಟಾದರೂ ಮಾನ ಉಳಿದೀತು ಕೋರ್ಟು ಕಚೇರಿ ಕಾರ್ಯಗಳಲ್ಲಿ ಮುನ್ನಡೆಯು ಸಮಾಧಾನ ತರಲಿದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಲಾಭವಿದೆ. ನೂತನ ಗೃಹ ಖರೀದಿಯ ವೆಚ್ಚಗಳಿರುತ್ತವೆ. ಮಾನಸಿಕ ವೇದನೆ, ಆಕಸ್ಮಿಕ ದೇವ ಮಾನವರ ದರ್ಶನ, ವಿಕೃತ ಮನಃಸ್ಥಿತಿ ಹೆಚ್ಚಾಗುವುದು, ಸ್ಥಿರಾಸ್ತಿಯಿಂದ ನೋವು-ತೊಂದರೆ, ಆರ್ಥಿಕ ಮುಗ್ಗಟ್ಟು, ಬೇಡದ ವಿಚಾರಗಳಲ್ಲಿ ಚರ್ಚೆ ಮಾಡುವಿರಿ.

ಮಕರರಾಶಿ
ವಿವಾಹದ ಶುಭ ವಾರ್ತೆ ಕೇಳುವಿರಿ, ಅಕ್ರಮ ಸಂಪಾದನೆಗೆ ಮನಸ್ಸು, ಮಕ್ಕಳು ದಾರಿ ತಪ್ಪುವ ಸಾಧ್ಯತೆ, ನವ ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ಅಧಿಕಾರಿ ರಂಗದಲ್ಲಿ ಅಸಮಾಧಾನ ಕಂಡು ಬರಲಿದೆ. ಕೃಷಿಕರಿಗೆ ಸಮಾಧಾನ ತರುವ ದಿನಗಳಿವು. ಗೃಹ ಬಳಕೆಯ ಸಾಮಾಗ್ರಿಗಳಿಗಾಗಿ ಧನವ್ಯಯವಿದೆ. ಯಂತ್ರೋಪಕರಣಗಳಿಂದ ತೊಂದರೆ, ಕೆಲಸಗಾರರಿಂದ ಸಮಸ್ಯೆ ಉದ್ಭವ, ಬಂಧುಗಳಿಂದ ನೋವು, ಪರಿಚಯಸ್ಥ ವ್ಯಕ್ತಿಗಳಿಂದ ನಷ್ಟ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ.

ಕುಂಭರಾಶಿ
ಕೆಲಸ ಕಾರ್ಯದಲ್ಲಿ ಜಯ, ವೃತ್ತಿಪರರಿಗೆ ಅನುಕೂಲ, ನಿಮ್ಮ ಸಿಡುಕಿನ ವರ್ತನೆ ವಿರುದ್ಧ ಪರಿಣಾಮ ಬೀರಲಿದೆ. ವಿಳಂಬಿತ ಕಾರ್ಯ ನಿರ್ವಹಣೆಯಿಂದ ತೃಪ್ತ ಮನಸ್ಸು ತಣ್ಣಗಾಗದು. ಯಾವುದಕ್ಕೂ ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಜಾಗ್ರತೆ ಮಾಡುವುದು. ಸೇವಕರಿಂದ ಅಪವಾದ, ಮಾಟ-ಮಂತ್ರ, ತಂತ್ರದ ಭೀತಿ, ಹಣಕಾಸು ವಿಚಾರದಲ್ಲಿ ನಿಧಾನ, ಶೀತ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.

ಮೀನರಾಶಿ
ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ನೋವು, ಪ್ರೀತಿ ಪ್ರೇಮ ವಿಚಾರದಲ್ಲಿ ಅನುಮಾನ, ಭಾವನೆಗಳಿಗೆ ಪೆಟ್ಟು, ಆದಾಯವೃದ್ಧಿಯಿಂದಾಗಿ ಖರ್ಚುಗಳು ತಲೆಬಿಸಿ ಮಾಡದು.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಇರುತ್ತದೆ.ಅಸೂಯಾಪರರ ದೃಷ್ಟಿಯಿಂದ ವೃತ್ತಿರಂಗದಲ್ಲಿ ಕಾರ್ಯವಿಳಂಬವಾದೀತು. ದುರಾಸೆಗಳಿಗೆ ಬಲಿಯಾಗುವಿರಿ, ಬಾಲಾಗ್ರಹ ದೋಷ ಕಾಡುವುದು, ಆಧ್ಯಾತ್ಮದ ಕಡೆಗೆ ಒಲವು, ವೃದ್ಧರಿಗಾಗಿ ಖರ್ಚು ಮಾಡುವಿರಿ, ಹಳೇ ವಸ್ತುಗಳಿಗಾಗಿ ಖರ್ಚು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular