ಬುಧವಾರ, ಜೂನ್ 18, 2025
Homehoroscopeನಿತ್ಯಭವಿಷ್ಯ : 10-06-2020

ನಿತ್ಯಭವಿಷ್ಯ : 10-06-2020

- Advertisement -

ಮೇಷರಾಶಿ
ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧುಗಳ ಆಗಮನ, ಸುಖ ಭೋಜನ ಪ್ರಾಪ್ತಿ. ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿವೆ. ವೃತ್ತಿರಂಗದಲ್ಲಿ ಅಧಿಕಾರಿ ಜನರ ಅಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ ಬರಲಿವೆ.ದಿನಾಂತ್ಯ ಕಿರು ಸಂಚಾರವಿದೆ.

ವೃಷಭರಾಶಿ
ಸದ್ಯ ದೈವಬಲ ಇದ್ದುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಮೌನವಾಗಿರುವುದು ಉತ್ತಮ, ಬಂಧುಗಳಿಂದ ತೊಂದರೆ, ಸ್ಥಳ ಬದಲಾವಣೆ, ಸ್ಥಿರಾಸ್ತಿ ಗಳಿಕೆ, ಕಾರ್ಯಗಳಲ್ಲಿ ವಿಳಂಬ. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಆಸಮಾಧಾನ ಕಂಡು ಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಉತ್ತಮ ಫ‌ಲವು ಸಿಗಲಿದೆ.

ಮಿಥುನರಾಶಿ
ಅಪೇಕ್ಷಿತ ಜನರ ಸಹಾಯದಿಂದ ಕಾರ್ಯಸಾಧನೆಯಾಗಲಿದೆ. ಹಿರಿಯರ ಮಾತಿಗೆ ಮನ್ನಣೆ, ಮುಂಗೋಪ ಅಧಿಕ, ಆತುರ ಸ್ವಭಾವದಿಂದ ತೊಂದರೆ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣಕಾಸು ಬಗ್ಗೆ ಎಚ್ಚರಿಕೆ. ದೇಹಾರೋಗ್ಯದಲ್ಲಿ ಸಮಾಧಾನ ಸಿಗಲಿದೆ.ದೈಹಿಕ ವಿಷದಾಪತ್ತುಗಳು ಸಮಸ್ಯೆ ತಂದೀತು.ಸಾಂಸಾರಿಕವಾಗಿ ಉತ್ತಮ ಕೆಲಸಗಳು ನಡೆಯಲಿವೆ.

Alvas1

ಕಟಕರಾಶಿ
ದೀರ್ಘ‌ಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕುಟುಂಬ ವರ್ಗದವರಿಂದ ಸ್ಫೂರ್ತಿ ಸಹಕಾರ ಮುನ್ನಡೆಗೆ ಸಾಧಕವಾಗಲಿದೆ. ಯತ್ನ ಕಾರ್ಯಗಳಲ್ಲಿ ಪ್ರಗತಿ, ಅಧಿಕ ಧನ ಲಾಭ, ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಶುಭ ಫಲ ಯೋಗ. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು.

ಸಿಂಹರಾಶಿ
ಅಧೀನ ನೌಕರರಿಂದ ಕಿರಿಕಿರಿ ಇರುತ್ತದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿವೆ. ದ್ರವ್ಯ ಲಾಭ, ದುಃಖದಾಯ ಪ್ರಸಂಗ, ರೋಗ ಬಾಧೆ, ಪರರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರ. ಉದ್ಯೋಗ ಗೃಹಕೃತ್ಯಗಳಲ್ಲಿ ಸಮಾಧಾನ ಸಿಗಲಿದೆ. ಶತ್ರುಕೃತ ದೋಷದಿಂದ ಮನಸ್ಸಿಗೆ ಸಮಾಧಾನ ದೊರಕಲಾರದು.

ಕನ್ಯಾರಾಶಿ
ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಾಣಿಸಲಿದೆ. ಮನಸ್ಸು ಉದ್ವೇಗದಿಂದ ಶಾಂತಿ, ಸಮಾಧಾನ ಕಳೆದುಕೊಳ್ಳಲಿದೆ. ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಗೌರವ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು, ನೌಕರಿಯಲ್ಲಿ ಉತ್ತಮ ಬೆಳವಣಿಗೆ, ಸಹೋದ್ಯೋಗಿಗಳಿಂದ ಸಹಕಾರ. ಖರ್ಚುವೆಚ್ಚಗಳು ದುಪ್ಪಟ್ಟಾಗುವುದರಿಂದ ಆರ್ಥಿಕ ಸಮತೋಲನ ತಪ್ಪಿ ಆತಂಕಕ್ಕೆ ಕಾರಣವಾದಾವು.

Maks Infotech Web1

ತುಲಾರಾಶಿ
ಆರ್ಥಿಕವಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ನಾನಾ ರೀತಿಯ ಸಮಸ್ಯೆಗಳು ಮನಸ್ಸನ್ನು ಉದ್ವಿಗ್ನಗೊಳಿಸಲಿವೆ. ಮಹಿಳೆಯರಿಗೆ ಉತ್ತಮ ಫಲ, ನಾನಾ ರೀತಿಯ ಸಂಪಾದನೆ, ಹಿತೈಷಿಗಳಿಂದ ಸಲಹೆ, ಶ್ರದ್ಧೆ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಎಲ್ಲದರಲ್ಲೂ ತಪ್ಪು ಹುಳುಕು ಹುಡುಕುವ ನಿಮಗೆ ಸಮಾಧಾನವು ಕಂಡು ಬರಲಾರದು.

ವೃಶ್ಚಿಕರಾಶಿ
ಆರೋಗ್ಯದ ಬಗ್ಗೆ ಮುಖ್ಯವಾಗಿ ಪಿತ್ತ, ಉಷ್ಣ ಜಾಡ್ಯ, ಉದರವ್ಯಾಧಿ, ನೀವಾಡುವ ಮಾತಿನಿಂದ ಗೌರವ, ಸ್ನೇಹಿತರ ಸಕಾರಾತ್ಮಕ ಸಲಹೆ, ನಿಮ್ಮ ಮಾತಿಗೆ ಮನ್ನಣೆ, ಸುಖ ಭೋಜನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಆಲೋಚನೆ. ಉಸಿರಾಟದ ತೊಂದರೆ ಆಗಾಗ ಗೋಚರಕ್ಕೆ ಬಂದಾವು. ಜಾಗ್ರತೆ ವಹಿಸಿರಿ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳನ್ನು ಧೈರ್ಯವಾಗಿ ಎದುರಿಸುವುದು.

ಧನುರಾಶಿ
ನಿರುದ್ಯೋಗಿಗಳಿಗೆ ಅವಕಾಶಗಳು ಅನಿರೀಕ್ಷಿತ ರೀತಿಯಲ್ಲಿ ಸಿಗಲಿವೆ. ಮಾತಿನ ಮೇಲೆ ಹಿಡಿತ ಅಗತ್ಯ, ಅನ್ಯಕರಿಗೆ ಉಪಕಾರ ಮಾಡುವಿರಿ, ಅಧಿಕವಾದ ತಿರುಗಾಟ, ಋಣ ವಿಮೋಚನೆ. ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾದೀತು. ಶ್ರೀದೇವರ ದರ್ಶನ ಭಾಗ್ಯದಿಂದ ಮನಸ್ಸಿಗೆ ಸಂತಸ ತರಲಿದೆ.

Alvas1

ಮಕರರಾಶಿ
ಶುಭಮಂಗಲ ಕಾರ್ಯಗಳು ನಿರ್ವಿಘ್ನವಾಗಿ ನಡೆದೀತು.ಆರ್ಥಿಕವಾಗಿ ಶಿಸ್ತು,ಸಂಯಮದಿಂದ ಇದ್ದಲ್ಲಿ ಕಷ್ಟನಷ್ಟಗಳು ಕಡಿಮೆಯಾಗುವ ಅನುಭವ ನಿಮ್ಮದಾಗಲಿವೆ. ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ, ಸ್ತ್ರೀಯರಿಗೆ ಅನುಕೂಲ, ಮಾನಸಿಕ ನೆಮ್ಮದಿ ಪ್ರಾಪ್ತಿ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಹಣಕಾಸು ಮುಗ್ಗಟ್ಟು. ಮಾನಸಿಕ ಒತ್ತಡವು ಹೆಚ್ಚಾಗಲಿದೆ.

ಕುಂಭರಾಶಿ
ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯು ಕಂಡು ಮನಸ್ಸಿಗೆ ಬೇಸರ ತರಲಿದೆ. ಸ್ನೇಹಿತರಿಂದ ಸಹಾಯ, ಅತಿಯಾದ ಕೋಪ, ಚೋರ ಭಯ, ತಾಳ್ಮೆ ಅತ್ಯಗತ್ಯ, ಹಣಕಾಸು ಸಮಸ್ಯೆ. ಅಧಿಕ ಖರ್ಚು, ಅಲ್ಪ ಲಾಭ. ಹೆಜ್ಜೆ ಹೆಜ್ಜೆಗೂ ವಿವೇಚನೆ ಅಗತ್ಯವಿದೆ. ಉದ್ಯೋಗಿಗಳಿಗೆ ದೂರಕ್ಕೆ ವರ್ಗಾವಣೆಯ ಸಂಭವ ಕಂಡು ಬರಲಿದೆ.ತಾಳ್ಮೆಯಿಂದ ಸಹಕರಿಸಿರಿ.

ಮೀನರಾಶಿ
ಗ್ರಹಿಸಿದ ಕೆಲಸವೊಂದು ಅನಿರೀಕ್ಷಿತವಾಗಿ ನಡೆದು ಮನಸ್ಸಿಗೆ ಸಮಾಧಾನವಾಗಲಿದೆ. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಾನಸಿಕ ಕಿರಿಕಿರಿ, ಚಂಚಲ ಸ್ವಭಾವ, ಹೇಳಿಕೆ ಮಾತು ಕೇಳುವುದರಿಂದ ಸಂಕಷ್ಟ, ಯೋಚಿಸಿ ನಿಧಾರ ಕೈಗೊಳ್ಳುವುದು ಉತ್ತಮ. ವಿವಾಹಾಪೇಕ್ಷಿಗಳಿಗೆ ದಾಂಪತ್ಯದ ಯೋಗವಿದೆ.ಪತ್ರಿಕೋದ್ಯಮಿಗಳಿಗೆ ನಿರೀಕ್ಷೆಗೂ ಮೀರಿ ಯಶಸ್ಸು ತೋರಿ ಬರಲಿದೆ.ಸಹನೆ ಇರಲಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular