ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 28-06-2020

ನಿತ್ಯಭವಿಷ್ಯ : 28-06-2020

- Advertisement -

ಮೇಷರಾಶಿ
ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಶುಭ ಸುದ್ದಿ ಇದೆ. ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡುಬಂದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನಿರೀಕ್ಷಿತ ಅನುಕೂಲ ಪ್ರಾಪ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಸ್ಸಿನ ಮೇಲೆ ದುಷ್ಪರಿಣಾಮ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ, ಮಿಶ್ರ ಫಲ ಯೋಗ. ಆರೋಗ್ಯದಲ್ಲಿ ಜಾಗ್ರತೆ ಇರಲಿ.

ವೃಷಭರಾಶಿ
ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಕುಟುಂಬ ಸೌಖ್ಯ, ಮೇಲಾಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಸುಧಾರಣೆ, ಹಿತ ಶತ್ರುಗಳ ಬಾಧೆ, ಉದ್ಯೋಗದಲ್ಲಿ ಬಡ್ತಿ. ದೈವಾನುಗ್ರಹದಿಂದ ನಿಮ್ಮ ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಕೌಟುಂಬಿಕ ಹೊಂದಾಣಿಕೆ ಮುನ್ನಡೆಗೆ ಸಾಧಕವಾದೀತು.

ಮಿಥುನರಾಶಿ
ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಧಾನ ಧರ್ಮದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸಮಸ್ಯೆ, ಯತ್ನ ಕಾರ್ಯದಲ್ಲಿ ವಿಳಂಬ, ಕೆಲವು ವಿಚಾರಗಳಿಂದ ಕಿರಿಕಿರಿ, ಮನಸ್ಸಿಗೆ ಅಸಮಾಧಾನ, ಮಾತಿನ ಮೇಲೆ ಹಿಡಿತ ಅಗತ್ಯ. ಎಲ್ಲಾ ರೀತಿಯ ಕಷ್ಟವನ್ನು ಎದುರಿಸುವ ಎದೆಗಾರಿಕೆ ನಿಮ್ಮಲ್ಲಿರಲಿ. ಹಳೆಯ ಬಂಧುಗಳೊಡನೆ ಹೊಸ ಸಂಬಂಧವು ಬೆಳೆಯಲಿದೆ.

ಕಟಕರಾಶಿ
ಜಲವೃತ್ತಿಯವರಿಗೆ ಉತ್ತಮ ಲಾಭದಾಯಕ ಆದಾಯ ತಂದು ಕೊಡಲಿದೆ. ಹಣಕಾಸು ಲಾಭ, ಅಧಿಕವಾದ ಖರ್ಚು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಋಣ ಬಾಧೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ-ನಿಂದನೆ. ರಾಜಕೀಯ ವರ್ಗದವರಿಗೆ ತಮ್ಮ ಕ್ಷೇತ್ರದಲ್ಲಿ ವಿರೋಧವನ್ನು ಎದುರಿಸುವಂತಾದೀತು. ಪತ್ನಿಯ ಪ್ರಸನ್ನತೆಗಾಗಿ ಆಭರಣ ಖರೀದಿ ಇದೆ.

ಸಿಂಹರಾಶಿ
ತಾಳ್ಮೆ ಸಮಾಧಾನ ಅಗತ್ಯ, ಸ್ನೇಹಿತರಿಂದ ತೊಂದರೆ, ಆತ್ಮೀಯರಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಚಕಮಕಿ, ದಂಡ ಕಂಟುವ ಸಾಧ್ಯತೆ, ಯೋಚಿಸಿ ನಿರ್ಧಾರ ಕೈಗೊಳ್ಳಿ. ನಾನಾ ರೀತಿಯಲ್ಲಿ ಧನ ಸಂಗ್ರಹವಾಗಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಹೊಸ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತಂದೀತು. ಹಿರಿಯರಿಗೆ ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿಯನ್ನು ಮೂಡಿಸಲಿದೆ.

ಕನ್ಯಾರಾಶಿ
ಅನಾವಶ್ಯಕ ಮಾತಿನಿಂದ ಜಾಗ್ರತೆ ವಹಿಸಬೇಕಾದೀತು. ಪರರ ತಪ್ಪಿನಿಂದ ತೊಂದರೆ, ಗೌರವಕ್ಕೆ ಧಕ್ಕೆ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ, ದಾಯಾದಿಗಳ ಕಲಹ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ವಾರಾಂತ್ಯದಲ್ಲಿ ಶುಭ ಫಲ ಯೋಗ. ದಾಂಪತ್ಯ ಜೀವನಕ್ಕೆ ನಾನಾ ರೀತಿಯ ಅಡಚಣೆಗಳು ಕಂಡುಬಂದಾವು. ಕುಟುಂಬ ವರ್ಗದವರಿಂದ ನೆಮ್ಮದಿಯನ್ನು ನಿರೀಕ್ಷಿಸುವಂತಿಲ್ಲ. ದಿನಾಂತ್ಯ ಕಿರು ಸಂಚಾರ.

ತುಲಾರಾಶಿ
ಯಾತ್ರೆ , ಪ್ರವಾಸಗಳು ತಕ್ಕ ಮಟ್ಟಿಗೆ ಮುದವನ್ನು ನೀಡಲಿವೆ. ವ್ಯಾಪಾರ, ದ್ರವ್ಯ ಲಾಭ, ಹಿತೈಷಿಗಳಿಂದ ನೆರವು, ಎಲ್ಲಾ ಕಡೆಯಿಂದಲೂ ಒತ್ತಡ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ, ವಿದ್ಯಾರ್ಥಿಗಳಲ್ಲಿ ಆತಂಕ, ಹಣಕಾಸು ವ್ಯವಹಾರದಲ್ಲಿ ಎಚ್ಚರ, ಕಷ್ಟ-ಸುಖ ಸಮ ಪ್ರಮಾಣ. ವ್ಯವಹಾರದಲ್ಲಿ ಭಾಗಶಃ ಪಾಲುದಾರರ ವಂಚನೆ ಬಯಲಿಗೆ ಬಂದೀತು. ದೇಹಾರೋಗ್ಯದಲ್ಲಿ ಆಗಾಗ ಸುಸ್ತು, ನಿಶ್ಶಕ್ತಿ ಕಾಣಿಸಲಿದೆ.

ವೃಶ್ಚಿಕರಾಶಿ
ಆದಾಯ ಕಡಿಮೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ತೊಂದರೆಗಳು ಹೆಚ್ಚಾಗುವುದು, ಉದರ ಬಾಧೆ, ಶತ್ರುಗಳ ನಾಶ, ಅನಾವಶ್ಯಕ ಮಾತಿನಿಂದ ಕಲಹ, ಮಿತ್ರರಿಂದ ವಿರೋಧ, ಶೀತ ಸಂಬಂಧಿತ ರೋಗ. ನೂತನ ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾದ ಸಮಯವಿದು. ಸರಕಾರೀ ಅಧಿಕಾರಿಗಳಿಗೆ ತೆರಿಗೆ ಅಧಿಕಾರಿಗಳಿಂದ ತೊಂದರೆ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಬಲದ ಫ‌ಲ ಸಿಗಲಿದೆ.

ಧನುರಾಶಿ
ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದೀತು. ಸ್ನೇಹಿತರಿಂದ ಸಹಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯವಹಾರದಲ್ಲಿ ಅಭಿವೃದ್ಧಿ, ಅತಿಯಾದ ನಿದ್ರೆ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ, ಮಾನಸಿಕ ಕಿರಿಕಿರಿ. ಕಾರ್ಯರಂಗದಲ್ಲಿ ಸಮಸ್ಯೆಗಳನ್ನು ಎದುರಿಸುವಂತಹ ಆತ್ಮಸ್ಥೈರ್ಯ ನಿಮ್ಮಲ್ಲಿರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಬಹುದು.

ಮಕರರಾಶಿ
ಬಂದ ಅವಕಾಶಗಳನ್ನು ಸದುಪಯೋಗಿಸಿರಿ. ಸ್ತ್ರೀ ವಿಚಾರದಲ್ಲಿ ಕಿರಿಕಿರಿ, ವ್ಯವಹಾರದಲ್ಲಿ ಎಚ್ಚರ, ಅಧಿಕಾರಿಗಳಲ್ಲಿ ಕಲಹ, ವ್ಯರ್ಥ ಧನಹಾನಿ, ಆಲಸ್ಯ ಮನೋಭಾವ, ಪತಿ-ಪತ್ನಿಯರಲ್ಲಿ ಕಲಹ, ಆಕಸ್ಮಿಕ ಖರ್ಚು. ಆರೋಗ್ಯವು ಆಶಾದಾಯಕವಾಗಿದ್ದು ಮುನ್ನಡೆಗೆ ಸಾಧಕವಾಗಲಿದೆ. ವ್ಯಾಪಾರ, ವ್ಯಹಾರದಲ್ಲಿ ಹಿಂದಿನ ಸಮಸ್ಯೆಗಳು ಕಡಿಮೆಯಾಗಲಿವೆ. ಶುಭವಾರ್ತೆ ಇದೆ.

ಕುಂಭರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಸ್ಸಿನಲ್ಲಿ ಭಯ ಭೀತಿ, ಅಗ್ನಿ ಭಯ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಮಾತನಾಡುವಿರಿ, ಅನ್ಯ ಜನರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ನಿಧಾನ. ಕೆಲವೊಂದು ವಿಚಾರದಲ್ಲಿ ಕೋಪತಾಪಗಳು ಹೆಚ್ಚಿ ದುಡುಕಿನ ನಿರ್ಣಯಗಳಿಂದ ಸಮಸ್ಯೆಗಳನ್ನು ಎದುರಿಸುವಂತಾದೀತು. ಅನಾವಶ್ಯಕ ಸಂಚಾರವು ಧನವ್ಯಯಕ್ಕೆ ಕಾರಣವಾದೀತು. ಜಾಗ್ರತೆ ಮಾಡಿರಿ.

ಮೀನರಾಶಿ
ಕೆಲಸ ಕಾರ್ಯಗಳ ನಿಮಿತ್ತ ಅನಾವಶ್ಯಕ ಸಂಚಾರಗಳು ಒದಗಿ ಬರಲಿವೆ. ಮಾತೃವಿನಿಂದ ಲಾಭ, ಪ್ರೀತಿ ಸಮಾಗಮ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದ್ರವ ರೂಪದ ವಸ್ತುಗಳಿಂದ ಲಾಭ, ಹಣಕಾಸು ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಶರೀರದಲ್ಲಿ ಆತಂಕ. ಲಾಭದಾಯಕನಾದ ಶನಿ ಉತ್ತಮ ಫ‌ಲವನ್ನು ಆರ್ಥಿಕ ರೂಪದಲ್ಲಿ ನೀಡಿಯಾನು. ಕೃಷಿಕ ವರ್ಗದವರಿಗೆ ಉತ್ಸಾಹದಾಯಕ ದಿನವಿದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular