ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 20-07-2020

ನಿತ್ಯಭವಿಷ್ಯ : 20-07-2020

- Advertisement -

ಮೇಷರಾಶಿ
ಖರ್ಚು ವೆಚ್ಚಗಳ ಬಗ್ಗೆ ನಿಯಂತ್ರಣ ಅಗತ್ಯ, ಅನಗತ್ಯ ಮಾನಸಿಕ ಋಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ಆರ್ಥಿಕ ದೃಷ್ಟಿಯಲ್ಲಿ ಲಾಟರಿ ಚಟಗಳಿಂದ ದೂರವಿದ್ದಷ್ಟ ಉತ್ತಮ. ಸಹೋದ್ಯೋಗಿ ಮಿತ್ರರೊಡನೆ ಅಸಮಾಧಾನವಾದೀತು. ಉದ್ಯೋಗದಲ್ಲಿ ಅಭಿವೃದ್ಧಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ನಿರೀಕ್ಷಿತ ಲಾಭ, ಮಾನಸಿಕ ನೆಮ್ಮದಿ.

ವೃಷಭರಾಶಿ
ನಿಮ್ಮ ಪ್ರಯತ್ನಗಳಿಂದ ಕಾರ್ಯ ಸಫಲ, ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ನೆಮ್ಮದಿ ತರುವುದು. ಕ್ರಯ ವಿಕ್ರಯಗಳಲ್ಲಿ ಅಧಿಕ ಲಾಭವಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಯು ಗುರುತಿಸಲ್ಪಟ್ಟು ಗೌರವ ದೊರಕಲಿದೆ. ಶುಭ ಫಲ ಯೋಗ, ಆರ್ಥಿಕ ವ್ಯವಹಾರಗಳಲ್ಲಿ ಲಾಭ, ಸ್ತ್ರೀಯರಿಗೆ ಉತ್ತಮ ಅವಕಾಶ.

ಮಿಥುನರಾಶಿ
ಜಾಗ್ರತೆಯಲ್ಲಿರುವುದು ಉತ್ತಮ, ಹದಿಹರೆಯದವರಿಗೆ ವಿವಾಹ ಭಾಗ್ಯದ ಕನಸು ನನಸಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬಂದಾವು. ಆರ್ಥಿಕವಾಗಿ ಲೆಕ್ಕಾಚಾರವನ್ನು ಸರಿಯಾಗಿಟ್ಟುಕೊಳ್ಳಿರಿ. ದಿನಾಂತ್ಯ ಕಿರು ಸಂಚಾರವಿದೆ. ಗಣ್ಯ ವ್ಯಕ್ತಿಗಳ ಭೇಟಿ, ವಾದ-ವಿವಾದಗಳಿಂದ ದೂರವಿರಿ, ಮಕ್ಕಳ ಅಗತ್ಯಕ್ಕೆ ಖರ್ಚು.

ಕಟಕರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಹೆಚ್ಚಿನ ಧನವ್ಯಯವಿದೆ. ಮಕ್ಕಳ ಬಗ್ಗೆ ಶೀತ, ಕಫ‌ ಇತ್ಯಾದಿಗಳ ಬಗ್ಗೆ ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಭಾಗವನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿರಿ. ದೂರ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ.

ಸಿಂಹರಾಶಿ
ಕುಟುಂಬಸ್ಥರೊಂದಿಗೆ ದೈವ ದರ್ಶನ, ಹಣಕಾಸು ಅನುಕೂಲ, ಕೊಟ್ಟುಕೊಳ್ಳುವಿಕೆಯ ವಿಚಾರದಲ್ಲಿ ಲಾಭವಿದ್ದರೂ ಹೆಚ್ಚಿನ ಜಾಗ್ರತೆ ಇರಲಿ. ಸಾಂಸಾರಿಕವಾಗಿ ತುಸು ಸಮಾಧಾನಕರ ವಾತಾವರಣವಿರುತ್ತದೆ. ಉದ್ಯೋಗಿಗಳಿಗೆ ಉದ್ಯಮದಲ್ಲಿ ಉತ್ತಮ ಸಾಧನೆಗೆ ಅವಕಾಶಗಳು ಒದಗಿ ಬರಲಿವೆ. ವಸ್ತ್ರ ಖರೀದಿ ಯೋಗ, ಸುಖ ಭೋಜನ, ಉದ್ಯೋಗದಲ್ಲಿ ಪ್ರಗತಿ.

ಕನ್ಯಾರಾಶಿ
ವ್ಯಾಪಾರ, ವ್ಯವಹಾರದಲ್ಲಿ ಹೂಡಿಕೆ ವಿಸ್ತರಣೆಗೆ ಸರಿಯಾದ ಸಮಯ ಯುವಕ, ಯುವತಿಯರಿಗೆ ಪ್ರಣಯಾಕಾಂಕ್ಷೆ ಅಥವಾ ವಿವಾಹೇಚ್ಛಾದಿಗಳು ಈಡೇರಲಿವೆ. ಅನಿರೀಕ್ಷಿತವಾಗಿ ಬರುವ ಸಂತಸ ಸುದ್ದಿ ನೆಮ್ಮದಿ ತರಲಿದೆ. ಉತ್ತಮ ಆದಾಯ ಲಭಿಸುವುದು, ಸಾಲ ಮರು ಪಾವತಿಸುವ ಸಾಧ್ಯತೆ, ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ನೇಹಿತರಿಂದ ಸಹಾಯ.

ತುಲಾರಾಶಿ
ತಾಳ್ಮೆಯಿಂದ ಕಾರ್ಯ ಸಿದ್ಧಿ, ಕೋರ್ಟ್ ಕೇಸ್ ನಿಮಿತ್ತ ಓಡಾಟ, ಸಾಮಾಜಿಕ ರಂಗದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿ ಸಿರಿ. ನೂತನ ಕಾರ್ಯಾರಂಭಕ್ಕೆ ಇದು ಉತ್ತಮ ಕಾಲ. ಆದರೂ ಜಾಗ್ರತೆ ವಹಿಸಿ ಮುನ್ನಡೆಯಿರಿ. ಉದರ ಬಾಧೆ, ಆತ್ಮೀಯರಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಪಾಲುದಾರಿಕೆ ವ್ಯವಹಾರದಿಂದ ದೂರವಿರಿ, ವೈಯಕ್ತಿಕ ಆರೋಗ್ಯದಲ್ಲಿ ಹೆಚ್ಚಿನ ಗಮನಹರಿಸಿರಿ. ಅನಿರೀಕ್ಷಿತವಾಗಿ ಬರುವ ಸಂತಸಕರ ಸುದ್ದಿಯಿಂದ ಅಚ್ಚರಿ ಆದೀತು. ಸಾಂಸಾರಿಕವಾಗಿ ನೆಮ್ಮದಿಯು ಕಂಡು ಬಂದೀತು. ಕಿರು ಸಂಚಾರವಿದೆ. ಮಾತಿನ ಮೇಲೆ ಹಿಡಿತ ಅಗತ್ಯ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಸುಖ ಭೋಜನ ಪ್ರಾಪ್ತಿ.

ಧನಸ್ಸುರಾಶಿ
ಉತ್ತಮ ಬುದ್ಧಿಶಕ್ತಿ, ಆತ್ಮವಿಶ್ವಾಸ ಹೆಚ್ಚಾಗುವುದು, ಸಾಂಸಾರಿಕ ಸುಖ ಸಮಾಧಾನ ತರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅಭಿವೃದ್ಧಿ ಸಮಾಧಾನ ತರಲಿದೆ. ಸಂಚಾರದಿಂದ ಕಾರ್ಯಸಿದ್ಧಿ ಇರುತ್ತದೆ. ಹಣಕಾಸಿನ ಬಗ್ಗೆ ಮುಖ್ಯವಾಗಿ ಖರ್ಚಿನ ಬಗ್ಗೆ ಯೋಚನೆ ಬಂದೀತು. ಮಾನಸಿಕ ನೆಮ್ಮದಿ, ವೈವಾಹಿಕ ಜೀವನದಲ್ಲಿ ಪ್ರೀತಿ ವಾತ್ಸಲ್ಯ, ಹಣಕಾಸು ಲಾಭ, ಶುಭ ಫಲ ಯೋಗ.

ಮಕರರಾಶಿ
ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಸಹೋದ್ಯೋಗಿ ಹಾಗೂ ಮಿತ್ರರೊಳಗಿನ ಮಾತುಕತೆಯಲ್ಲಿ ಎಚ್ಚರ ವಹಿಸಿರಿ. ವಿದ್ಯಾರ್ಥಿಗಳು ತಮ್ಮ ಕರ್ತವ್ಯದ ಬಗ್ಗೆ ಪುನಃ ಪುನಃ ಯೋಚಿಸುವಂತಾದೀತು. ರಾಜಕಾರಣದವರಿಗೆ ಮುನ್ನಡೆ ದಿನಗಳಿವು. ಮಹಿಳೆಯರಿಗೆ ಅಶುಭ ಫಲ, ಮನಃಕ್ಲೇಷ, ವಿವಾಹಕ್ಕೆ ಅಡೆತಡೆ, ಮಾನಸಿಕ ತೊಂದರೆ.

ಕುಂಭರಾಶಿ
ಮನೆಗೆ ಹಿರಿಯರ ಆಗಮನ, ಆರ್ಥಿಕ ದೃಷ್ಟಿಯಲ್ಲಿ ಖರ್ಚುಗಳು ಅಧಿಕವಾದಾವು. ವೃತ್ತಿರಂಗದಲ್ಲಿ ಅಸಮಾಧಾನದಿಂದ ಬೇಸರ ತಂದೀತು. ಸದ್ಯದ ಸ್ಥಿತಿಯಲ್ಲಿ ಇದ್ದುದನ್ನು ಹಾಗೇ ನಡೆಸಿಕೊಂಡು ಹೋಗಿರಿ. ಸಾಂಸಾರಿಕ ಸುಖ ಉತ್ತಮ. ಋಣ ಬಾಧೆ, ಸುಖ ಭೋಜನ ಪ್ರಾಪ್ತಿ, ಗೆಳೆಯರ ಭೇಟಿ, ಅನಗತ್ಯ ಸುತ್ತಾಟ.

ಮೀನರಾಶಿ
ಸಾಂಸಾರಿಕವಾಗಿ ತುಸು ಸಮಾಧಾನಕರ ವಾತಾವರಣ ಸಂತಸ ತಂದೀತು. ದೂರದ ಬಂಧುಗಳಿಂದ ಶುಭವಾರ್ತೆ ಕೇಳಲಿದ್ದೀರಿ. ಅನಿರೀಕ್ಷಿತ ರೀತಿಯಲ್ಲಿ ದಾಯಾದಿಗಳ ಆಗಮನವಿರುತ್ತದೆ. ಭೂ ವ್ಯವಹಾರಗಳಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಕುಲದೇವರ ಅನುಗ್ರಹ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular