ಸೋಮವಾರ, ಏಪ್ರಿಲ್ 28, 2025
HomeBreakingHoroscope : ಹೇಗಿದೆ ಇಂದಿನ ರಾಶಿಫಲ

Horoscope : ಹೇಗಿದೆ ಇಂದಿನ ರಾಶಿಫಲ

- Advertisement -

ಮೇಷರಾಶಿ
ಆರ್ಥಿಕ ವಿಚಾರದಲ್ಲಿ ಗೆಲುವು, ದುಡುಕುತನದಿಂದ ಕಾರ್ಯಹಾನಿ, ಗುರುಹಿರಿಯರ ದರ್ಶನ, ಸ್ನೇಹಿತರ ಸಹಕಾರ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ, ದೂರಾಲೋಚನೆ, ಅಧಿಕ ಖರ್ಚು.

ವೃಷಭರಾಶಿ
ಮನೆಯಲ್ಲಿ ವಿವಾದ, ವ್ಯವಹಾರದಲ್ಲಿ ಪ್ರಗತಿ, ಸ್ಥಳ ಬದಲಾವಣೆ, ಮೇಲಾಧಿಕಾರಿಗಳ ಕಿರಿಕಿರಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಧನ ನಷ್ಟ, ಸ್ತ್ರೀಯರಿಗೆ ಸ್ಪಲ್ಪ ಧನಲಾಭ.

ಮಿಥುನರಾಶಿ
ಸೋಮಾರಿತನದಿಂದ ಕಾರ್ಯಹಾನಿ, ಇತರರ ತಪ್ಪು ನಿಮ್ಮ ಮೈಮೇಲೆ ಬರಲಿದೆ, ಮಾನಸಿಕ ಚಿಂತೆ, ಜವಾಬ್ದಾರಿಗಳು ಹೆಚ್ಚುತ್ತದೆ, ವಾಹನ ಚಾಲನೆಯಲ್ಲಿ ಎಚ್ಚರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನಂಬಿಕಸ್ಥರಿಂದ ಮೋಸ.

ಕರ್ಕಾಟಕರಾಶಿ
ಕೆಲಸ ಕಾರ್ಯಗಳಲ್ಲಿ ಗೆಲುವು, ಮೇಲಾಧಿಕಾರಿಗಳ ಕಂಗೆಣ್ಣಿಗೆ ಗುರಿಯಾಗುವಿರಿ, ಆರೋಗ್ಯದಲ್ಲಿ ಏರುಪೇರು, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ, ಪರರಿಂದ ಸಹಾಯ, ಮನಸ್ಸಿನಲ್ಲಿ ಗೊಂದಲ, ವಿದೇಶ ಪ್ರಯಾಣ ಸಾಧ್ಯತೆ.

ಸಿಂಹರಾಶಿ
ಇಷ್ಟು ದಿನದ ಮಾನಸಿಕ ತೊಳಲಾಟಕ್ಕೆ ಮುಕ್ತಿ, ಆಸ್ತಿ ವಿಚಾರಗಳಲ್ಲಿ ಕಲಹ, ಹಣಕಾಸಿನ ಹೂಡಿಕೆ ಮಾಡುವ ಮೊದಲು ಎಚ್ಚರಿಕೆವಹಿಸಿ, ಉದ್ಯೋಗದಲ್ಲಿ ಒತ್ತಡ, ನೆರೆಹೊರೆಯವರಿಂದ ಕುತಂತ್ರ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ.

ಕನ್ಯಾರಾಶಿ
ಕೌಟುಂಬಿಕವಾಗಿ ನೆಮ್ಮದಿಯ ದಿನ, ಆರೋಗ್ಯದಲ್ಲಿ ವೃದ್ದಿ, ಲೌಕಿಕ ಸುಖ ವೃದ್ದಿ,  ನಷ್ಟ, ಸ್ತ್ರೀಯರಿಗೆ ಆಭರಣ ಪ್ರಾಪ್ತಿ, ಹಿತ ಶತ್ರುಗಳಿಂದ ತೊಂದರೆ, ಮೋಸಕ್ಕೆ ಒಳಗಾಗುವಿರಿ.

ತುಲಾರಾಶಿ
ಮಿತ್ರರ ಭೇಟಿಯಿಂದ ಸಹಕಾರ, ವ್ಯವಹಾರದ ವಿಷಯದಲ್ಲಿ ಕಿರಿಕಿರಿ, ಮನೆಯಲ್ಲಿನ ಸಮಸ್ಯೆಗಳು ಪರಿಹಾರ ಕಾಣಲಿದೆ, ಅನಾರೋಗ್ಯ, ಯತ್ನ ಕಾರ್ಯ ಗಳಲ್ಲಿ ಜಯ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಸಾಲಭಾದೆ.

ವೃಶ್ಚಿಕರಾಶಿ
ಮನೆಯವರ ವಿಚಾರದಲ್ಲಿ ಎಚ್ಚರವಾಗಿರಿ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಏಕಾಂಗಿಯಾಗಿರಲು ಮನಸು ಬಯಸುತ್ತದೆ, ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಶರೀರದಲ್ಲಿ ಆತಂಕ, ಉದ್ಯೋಗದಲ್ಲಿ ಬಡ್ತಿ, ಶ್ರಮಕ್ಕೆ ತಕ್ಕ ಫಲ.

ಧನಸುರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಹೆಚ್ಚಲಿದೆ, ಹಣದ ವ್ಯವಹಾರದಲ್ಲಿ ಜಾಗೃತೆವಹಿಸಿ, ಆರೋಗ್ಯದಲ್ಲಿ ಎಚ್ಚರಿಕೆ, ಕುಟುಂಬ ಸೌಖ್ಯ, ತೀರ್ಥ ಕ್ಷೇತ್ರ ದರ್ಶನ, ದ್ರವ್ಯಲಾಭ, ಉದ್ಯೋಗದಲ್ಲಿ ಬಡ್ತಿ, ಭೂಲಾಭ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ.

ಮಕರರಾಶಿ
ನಿಮ್ಮ ಪಾಲಿಗಿಂದು ಸ್ಮರಣೀಯವಾದ ದಿನ, ವ್ಯವಹಾರದಲ್ಲಿ ಮಧ್ಯಂತರ ಲಾಭ ದೊರೆಯಲಿದೆ, ಹಳೆಯ ಸ್ನೇಹಿತರ ಭೇಟಿ, ದಾನ ಧರ್ಮದಲ್ಲಿ ಆಸಕ್ತಿ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ.

ಕುಂಭರಾಶಿ
ಉದ್ಯೋಗ, ವ್ಯವಹಾರದಲ್ಲಿ ಅಧಿಕ ಲಾಭ, ಸ್ನೇಹಿತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ, ಸಂಜೆಯ ವೇಳೆಗೆ ಅನಗತ್ಯ ಪ್ರಯಾಣ, ಮಾತಿನ ಚಕಮುಕಿ, ವಿಪರೀತ ಹಣ ವ್ಯಯ, ಅಪರಿಚಿತರಿಂದ ಕಲಹ, ಮಹಿಳೆ ಯರಿಗೆ ವಿಶೇಷ ಲಾಭ.

ಮೀನರಾಶಿ
ಅನಗತ್ಯ ಓಡಾಟ, ಸಂಗಾತಿಯ ಬೆಂಬಲ ದೊರೆಯಲಿದೆ, ಧಾರ್ಮಿಕ ಕಾರ್ಯಗಳತ್ತ ಒಲವು, ಆರ್ಥಿಕ ಸಹಕಾರ ದೊರೆಯಲಿದೆ, ಹಣ ಬಂದರೂ ಉಳಿಯುವುದಿಲ್ಲ, ಅಕಾಲ ಭೋಜನ, ಧೃತಿಗೆಡಬೇಡಿ, ಪ್ರಿಯ ಜನರ ಭೇಟಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular