ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೂ ರಸ್ತೆಗೆ ಇಳಿಯಲ್ಲ ಖಾಸಗಿ ಬಸ್ ..!!

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಜಿಲ್ಲೆಯಲ್ಲಿ ಜೂನ್ ಅಂತ್ಯದ ವರೆಗೂ ಖಾಸಗಿ ಬಸ್ ಗಳು ರಸ್ತೆ ಇಳಿಯೋದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಅನ್ ಲಾಕ್ ಆದೇಶ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕೆಎಸ್ಆರ್ ಟಿಸಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಅನುಮತಿ ನೀಡಿದ್ದಾರೆ.

ಆದರೆ ಖಾಸಗಿ ಬಸ್ ಗಳನ್ನು ಜೂನ್ ಅಂತ್ಯದ ವರೆಗೆ ರಸ್ತೆ ಇಳಿಸೋ ದಕ್ಕೆ ಖಾಸಗಿ ಬಸ್ ಮಾಲೀಕರು ಸಿದ್ದರಿಲ್ಲ. ಅದ್ರಲ್ಲೂ ಜೂನ್ ತಿಂಗಳ ಅಂತ್ಯದವರೆಗೆ ಖಾಸಗಿ ಬಸ್ ಓಡಾಡೋದಿಲ್ಲ. ಒಂದೊಮ್ಮೆ ತಿಂಗಳ ಮಧ್ಯದಲ್ಲಿ ಬಸ್ ಓಡಿಸಿದ್ರೆ ಟ್ಯಾಕ್ಸ್ ಸೇರಿ ಇತರೆ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರ ಮಾಡದಿ ರಲು ನಿರ್ಧರಿಸಿದ್ದೇವೆ. ಅಲ್ಲದೇ ಡಿಸೇಲ್ ಬೆಲೆಯೇರಿಕೆ ಮಧ್ಯೆ 50% ಸೀಟಿಂಗ್ ಹಾಕಿ ಬಸ್ ಓಡಿಸಲು ಸಾಧ್ಯವಿಲ್ಲ.

ಬಸ್ ಓಡಿಸಿದ್ರೆ ಟ್ಯಾಕ್ಸ್ ಕೂಡ ಕಟ್ಟ ಬೇಕಾಗಿರುವ ಕಾರಣ ಅದು ಕಷ್ಟ‌ ಹೀಗಾಗಿ ಈ ತಿಂಗಳ ಅಂತ್ಯದವರೆಗೆ ಬಸ್ ಓಡಿಸದೇ ಇರಲು ನಿರ್ಧಾರ ಮಾಡಿದ್ದೇವೆ ಎಂದು ದ.ಕ ಜಿಲ್ಲಾ ‌ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.

Comments are closed.