ನಿತ್ಯಭವಿಷ್ಯ : 17/4/21 ಶನಿವಾರ

ಮೇಷ ರಾಶಿ
ಪ್ರೀತಿಯ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನೀವು ಮದುವೆಯಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಸಂತೋಷವಾಗಿರುತ್ತದೆ. ಕಚೇರಿಯಲ್ಲಿ, ಕೆಲಸದ ಬಗ್ಗೆ ನೀವು ಸಂಪೂರ್ಣವಾಗಿ ಗಮನ ಹರಿಸಬೇಕು

ವೃಷಭ ರಾಶಿ
ನೀವು  ಬಾಕಿ ಇರುವ ಕೆಲಸಕಾರ್ಯಗಳನ್ನು ಪೂರ್ಣ ಗೊಳಿಸಲು ಹೆಚ್ಚು ಕಷ್ಟ ಪಡಬೇಕಾಗಬಹುದು. ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಾಕಷ್ಟು ಸಮಯ ಕಳೆಯುವುದರಿಂದ ಮನೆಯ ವಾತಾವರಣ ಸುಧಾರಿಸುವುದು.

ಮಿಥುನ ರಾಶಿ
ಉದ್ಯೋಗದಲ್ಲಿ  ಕೆಲಸದ ವತ್ತಡ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ಎಲ್ಲಾ ಕಾರ್ಯ ಗಳನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಲು ನೀವು ಪ್ರಯತ್ನಿಸಬೇಕು. ನೀವು ನಿಮ್ಮ ಸ್ನೇಹಿತರಾಗಿ ಹಣ ಖರ್ಚು ಮಾಡಬೇಕಾಗಬಹುದು.

ಕರ್ಕಾಟಕ ರಾಶಿ
ವಿದ್ಯಾರ್ಥಿಗಳಿಗೆ ಇಂದು ಕಠಿಣ ದಿನವಾಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗಬಹುದು . ನೀವು ತಾಳ್ಮೆಯಿಂದಿ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ. ವ್ಯಾಪಾರಸ್ಥರು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಸಿಂಹ ರಾಶಿ
ಮನೆಯಲ್ಲಿ ಇದ್ದಕ್ಕಿದ್ದಂತೆ ಜಗಳ ಅಥವಾ ಬೇಸರ ವಾಗುವ ಸನ್ನಿವೇಶ ಗಳು ನಡೆಯಬಹುದು. ಇಂದು ಕೋಪದ ಬದಲು ಶಾಂತಿಯುತವಾಗಿ ವರ್ತಿಸಿ. ನಿಮ್ಮ ವ್ಯಾಪಾರದಲ್ಲಿ ಅನುಕೂಲಕರ ದಿನವಾಗಿದೆ. ಆದರೆ ಹಣದ ವ್ಯವಹಾರದಲ್ಲಿ ಹೆಚ್ಚು ಜಾಗರೂಕರಾಗಿರಿ.

ಕನ್ಯಾ ರಾಶಿ
ನಿಮ್ಮ ಉದ್ಯೋಗದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಅನಗತ್ಯ ಚರ್ಚೆ ಯನ್ನು ತಪ್ಪಿಸಿ. ಈ ದಿನ ಹಣದ ವಿಷಯದಲ್ಲಿ ನಿರಾಶೆ ಉಂಟಾಗುವ ಸಾಧ್ಯತೆ. ವ್ಯಾಪಾರದಲ್ಲಿ  ನಷ್ಟವನ್ನು ಅನುಭವಿಸಬಹುದು. ಹಾಗಾಗಿ ನಿಮ್ಮ ಎಲ್ಲಾ ವ್ಯವಹಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ಜ್ವರ ಇತ್ಯಾದಿ ಸಮಸ್ಯೆಗಳು ಕಾಡಬಹುದು.

ತುಲಾ ರಾಶಿ
ಈ ದಿನ ನಿಮ್ಮ ಸ್ನೇಹಿತರಿಂದಲೇ ಮೋಸ ಹೋಗ ಬಹುದು ಅವರು ನಿಮ್ಮ ಯಾವುದೇ ಪ್ರಮುಖ ಕೆಲಸ ಕ್ಕೂ ಅಡ್ಡಿಯಾಗಬಹುದು. ನಿಮ್ಮ ಹೊಸ ವ್ಯವಹಾರ ಗಳಲ್ಲಿ ಆರ್ಥಿಕ ಲಾಭವನ್ನು ಪಡೆಯಬಹುದು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ವೃಶ್ಚಿಕ ರಾಶಿ
ಇಂದು ನೀವು ಕೆಲಸಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣಿಸ ಬೇಕಾಗ ಬಹುದು. ಹಣದ ವಿಷಯದಲ್ಲಿ ನೀವು ಜಾಗರೂಕರಾಗಿರಿ ಇಲ್ಲದಿದ್ದರೆ ಕಳ್ಳತನವಾಗ ಬಹುದು . ಅನಗತ್ಯ ಖರ್ಚುಗಳನ್ನು ತಪ್ಪಿಸಿ ಮತ್ತು ಉಳಿತಾಯ‌ದತ್ತ ಗಮನ ಹರಿಸಿ.  ಚಿಲ್ಲರೆ ವ್ಯಾಪಾರಿ‌ ಗಳಿಗೆ ಲಾಭದಾಯಕವಾಗಿದೆ .

ಧನು ರಾಶಿ
ನೀವು ಈ ದಿನದ ಎಲ್ಲಾಕಾರ್ಯವನ್ನು ಪೂರ್ಣ ಗೊಳಿ‌ಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ವ್ಯವಹಾರದಲ್ಲಿ ಮನೆಯವರ ಅಥವಾ ಸಂಗಾತಿಯೊಂದಿಗೆ ಚರ್ಚಿಸಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ.

ಮಕರ ರಾಶಿ
ರಿಯಲ್ ಎಸ್ಟೇಟ್‌ನಲ್ಲಿ ದುಡಿಯುವ ಜನರಿಗೆ ಇಂದು ಬಹಳ ಪ್ರಯೋಜನಕಾರಿ ಮತ್ತು ಅಪಾರ ಲಾಭ ಪಡೆಯವ ದಿನವಾಗಲಿದೆ. ಮನೆಯಲ್ಲಿ ಹಣದ ಬಗ್ಗೆ ಚರ್ಚೆ ನಡೆಯಬಹುದು. ನೀವು ಬುದ್ಧಿವಂತಿಕೆಯಿಂದ ವರ್ತಿಸಿ. ಇಂದು ನೀವು ಅಮೂಲ್ಯ ವಸ್ತುಗಳನ್ನು ಖರೀದಿಸಬಹುದು.

ಕುಂಭ ರಾಶಿ
ಸಣ್ಣ ವಿಷಯವನ್ನು ಮನಸ್ಸಿನಲ್ಲಿಟ್ಟು ಕೊರಗಬೇಡಿ.  ಇಂದು ನಿಮ್ಮ ಹೆಚ್ಚಿನ ಸಮಯವನ್ನು ದುಃಖ ಅಥವಾ ಬೇಸರದಿಂದ ಕಳೆಯುತ್ತೀರಿ. ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿ  ಇಲ್ಲದಿದ್ದರೆ ನೀವು ದೊಡ್ಡ ತೊಂದರೆಯಲ್ಲಿ ಸಿಲುಕಬಹುದು. ಈ ದಿನ ನಿಮಗೆ ಕಾಲು ನೋವು ಬಾಧಿಸಬಹುದು.

ಮೀನ ರಾಶಿ
ಈ ದಿನ ನೀವು ಮನೆಯ ಹಿರಿಯರಿಂದ ವಾತ್ಸಲ್ಯ ಮತ್ತು ಆಶೀರ್ವಾದ ವನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿರುವುದ ರಿಂದ ನಿಮ್ಮ ಎಲ್ಲಾ ಕೆಲಸಕಾರ್ಯಗಳನ್ನು ವೇಗವಾಗಿ ಪೂರ್ಣ ಗೊಳಿಸಿ. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅಧ್ಯಯನದ ಬಗ್ಗೆ ಸ್ವಲ್ಪವು ಆಲಸ್ಯ ಮಾಡಬೇಡಿ.

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ, ಪಾದರಸ, ದರ್ಪಣಾಂಜನ ಜ್ಯೋತಿಷ್ಯರು
ಮೊ : 8746999333, 6363005876

Comments are closed.