ನಿತ್ಯಭವಿಷ್ಯ : ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗೆ ಹರಿಹಾರ ದೊರೆಯಲಿದೆ

ಎಲ್ಲರೂ ಈಗ ಬಂದಿರುವ ಸಾಂಕ್ರಾಮಿಕ (ಕರೋನಾ) ರೋಗದ ಬಗ್ಗೆ ವಿಶೇಷ ಕಾಳಜಿಯಿಂದ ಇರಿ ಮತ್ತು ಹೊರಗೆ ಹೋಗುವಾಗ ಮಾಸ್ಕ್ ಧರಿಸಿ.

ಮೇಷರಾಶಿ
ಈ ದಿನ ನಿಮಗೆ ಒಳ್ಳೆಯ  ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ನೀವು ನಿರುದ್ಯೋಗಿಗಳಾಗಿದ್ದಾರೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ವ್ಯಾಪಾರ ಮಾಡುವವರು ಇಂದು ಉತ್ತಮ ಆರ್ಥಿಕ ಲಾಭವನ್ನು ಪಡೆಯ ಬಹುದು.

ವೃಷಭರಾಶಿ 
ಇಂದು ನಿಮಗೆ ಹಣಕಾಸಿನ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ  ಎಚ್ಚರವಹಿಸಿ, ನಿಮ್ಮ ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.

ಮಿಥುನರಾಶಿ 
ಇಂದು ಭೂಮಿಯಲ್ಲಿ ಕೆಲಸ ಮಾಡುವವರು ಮತ್ತು ವ್ಯಾಪಾರಸ್ಥರು ಉತ್ತಮ ಫಲಿತಾಂಶವನ್ನು ಪಡೆಯ ಬಹುದು. ಇಂದು ನೀವು ದೊಡ್ಡ ವ್ಯವಹಾರವನ್ನು ಮಾಡಲು ಅವಕಾಶ ಪಡೆಯಬಹುದು.

ಕಟಕರಾಶಿ
ಇಂದು ನಿಮ್ಮಉದ್ಯೋಗ ಸಂಬಂಧಿತ ಚಿಂತೆ ಹೆಚ್ಚಾಗ ಬಹುದು. ನೀವು ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯುವುದು ಉತ್ತಮ.  ಹಣ ಸಿಕ್ಕಿಹಾಕಿ ಕೊಳ್ಳುವ ಬಲವಾದ ಸಾಧ್ಯತೆ ಇದೆ. ಈ ದಿನ ನೀವು ಯಾವುದೇ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಅಗತ್ಯ.

ಸಿಂಹರಾಶಿ
ಮಾಡುವ ಯಾವುದೇ ಕೆಲಸಗಳಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಎದುರಾಗಬಹುದು. ನೀವು ಎಂತಹ ಪರಿಸ್ಥಿತಿಯಲ್ಲು ತುಂಬಾ ತಾಳ್ಮೆಯಿಂದ ಕೆಲಸ ಮಾಡಲು ಪ್ರಯತ್ನಿಸಿ. ಕಿರಿಕಿರಿಯಿಂದಾಗಿ ಯಾವುದೇ ಕೆಲಸವನ್ನು ಮಾಡಬೇಡಿ.

ಕನ್ಯಾರಾಶಿ
ಇಂದು ನಿಮ್ಮ ಹಳೆಯ ಸ್ನೇಹಿತರನ್ನು ಬೇಟಿಯಾಗುವ ಸಾದ್ಯತೆ ಇದೆ. ನೀವು ಯಾವುದೇ ಬೆಲೆಬಾಳುವ ವಸ್ತು ಗಳನ್ನು ಕಳೆದುಕೊಳ್ಳಬಹುದು. ಕಲೆ ಮತ್ತು ರಂಗ ಭೂಮಿಯಲ್ಲಿ  ಹೊಸ ಅವಕಾಶಗಳು ಸಿಗಬಹುದು.

ತುಲಾರಾಶಿ
ಇಂದು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಾ. ಅರ್ಧದಲ್ಲಿ ನಿಂತ ಕೆಲಸವನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು.

ವೃಶ್ಚಿಕರಾಶಿ
ಇಂದು ಕೆಲಸದ ಸ್ಥಳದಲ್ಲಿ ಮಿಶ್ರ ಫಲಿತಾಂಶವು ದೊರೆಯಲಿದೆ. ಕಚೇರಿಯಲ್ಲಿ ಹೊಸ ಕೆಲಸದ ಬಗ್ಗೆ ಚರ್ಚಿಸಬಹುದು. ಮಕ್ಕಳ ವಿದ್ಯಾಭ್ಯಾಸದ ವಿಚಾರ ದಲ್ಲಿ ಎಚ್ಚರವಿರಲಿ.

ಧನಸ್ಸುರಾಶಿ
ಇಂದು ಬಹಳ ಬುದ್ಧಿವಂತಿಕೆಯಿಂದ ಮಾತನಾಡಿ . ನೀವು ಮಾತನಾಡುವಾಗ ಇನ್ನೊಬ್ಬರಿಗೆ  ನೋವು ಉಂಟಾಗಬಹುದು. ನೀವು ಸಾಲ ತೆಗೆದು ಕೊಳ್ಳುವ ಅಥವಾ ಸಾಲ ಕೊಡುವ ಬಗ್ಗೆ ಯೋಚಿಸಿ ಏಕೆಂದರೆ ಹಣದ ವಿಷಯದಲ್ಲಿ ಇಂದು ನಿಮಗೆ ಚೆನ್ನಾಗಿರುವು ದಿಲ್ಲ.

ಮಕರರಾಶಿ
ಈ ದಿನ ತುಂಬಾ ಉತ್ತಮವಾಗಿರುತ್ತದೆ. ನೀವು ಬೆಳಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.ಮನೆ ಯಲ್ಲಿ ವಾತಾವರಣವು ಹರ್ಷಚಿತ್ತದಿಂದ ಕೂಡಿರುತ್ತದೆ.

ಕುಂಭರಾಶಿ
ಇಂದು ನಿಮಗೆ ಕುಟುಂಬದ ಆರೋಗ್ಯದ ಬಗ್ಗೆ  ಚಿಂತೆ ಹೆಚ್ಚಾಗಬಹುದು. ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸ ಬೇಕು. ಈ ದಿನ ಹಣದ ವಿಷಯದಲ್ಲಿ  ಸಮಸ್ಯೆಯಾಗ ಬಹುದು . ಇಂದು ನೀವು ಅಧ್ಯಯನದ ಬಗ್ಗೆ ಗಮನ ಹರಿಸಿ. ಇದರಿಂದ ನಿಮ್ಮ  ಭವಿಷ್ಯದ ಕನಸು ಈಡೇರ ಬಹುದು.

ಮೀನರಾಶಿ
ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಜಾಗರೂಕ ರಾಗಿರಬೇಕು. ಕಚೇರಿಯಲ್ಲಿ ಆಗುವ ರಾಜಕೀಯದ ಬಗ್ಗೆ ಎಚ್ಚರದಿಂದಿರಿ. ಇಂದು ನಿಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶವಿದೆ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು.

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ, ಪಾದರಸ, ದರ್ಪಣಾಂಜನ ಜ್ಯೋತಿಷ್ಯರು
ಮೊ: 8746999333, 6363005876

Comments are closed.