ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : ಈ ರಾಶಿಯವರಿಗಿಂದು ಅದೃಷ್ಟದ ದಿನ 10-04-2021

ನಿತ್ಯಭವಿಷ್ಯ : ಈ ರಾಶಿಯವರಿಗಿಂದು ಅದೃಷ್ಟದ ದಿನ 10-04-2021

- Advertisement -

ಮೇಷರಾಶಿ
ನ್ಯಾಯಾಲಯ ಕಾರ್ಯಗಳಲ್ಲಿ ಗೆಲುವು, ಅಧಿಕ ಖರ್ಚು, ವಯೋವೃದ್ಧರಿಗೆ ಸಹಾಯ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಒತ್ತಡ ಪ್ರಯಾಣದಲ್ಲಿ ಅಡೆತಡೆ, ಸ್ವಂತ ಉದ್ಯೋಗದಲ್ಲಿ ಅನುಕೂಲ, ಮಕ್ಕಳಿಂದ ಬೇಸರ, ತಾಯಿಯೊಂದಿಗೆ ಮನಸ್ತಾಪ.

ವೃಷಭರಾಶಿ
ವ್ಯವಹಾರ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ದಿ, ಗುಪ್ತ ವಿಷಯಗಳಿಂದ ತೊಂದರೆ, ತಂದೆಯಿಂದ ನೋವು, ಉದ್ಯೋಗ ಬದಲಾವಣೆ ಆಲೋಚನೆ, ಬಂಧು ಬಾಂಧವರಿಂದ ಅನುಕೂಲ,‌ ಸಂಗಾತಿ ಯೊಂದಿಗೆ ಕಿರಿಕಿರಿ ಮತ್ತು ವಾಗ್ವಾದ, ಉದ್ಯೋಗ ಸ್ಥಳದಲ್ಲಿ ಬೇಸರ ಮತ್ತು ಆಲಸ್ಯ,

ಮಿಥುನರಾಶಿ
ಸಾಂಸಾರಿಕವಾಗಿ ನೆಮ್ಮದಿ, ವ್ಯವಹಾರದಲ್ಲಿ ಹೆಚ್ಚಿನ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತಗಳು, ಆರ್ಥಿಕವಾಗಿ ತಪ್ಪು ನಿರ್ಧಾರ ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ನಿರಾಸಕ್ತಿ, ಪಾಲುದಾರಿಕೆ ಅಭಿವೃದ್ಧಿ.

ಕಟಕರಾಶಿ
ಆದಾಯಕ್ಕಿಂತ ಅಧಿಕ ಖರ್ಚು,  ಉದ್ಯೋಗ ಲಾಭ, ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಶತ್ರು ದಮನ, ಮಿತ್ರರಿಂದ ಅನುಕೂಲ, ಮಕ್ಕಳಲ್ಲಿ ಬೇಜವಾಬ್ದಾರಿ, ಸ್ವಂತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಪರರಿಗೆ ಉಪಕಾರ ಮಾಡುವುದರಿಂದ ನೆಮ್ಮದಿ.

ಸಿಂಹರಾಶಿ
ಹಲವು ಕಾರ್ಯಗಳು ಕೈಗೂಡಲಿದೆ, ಅನಾರೋಗ್ಯ ತಂತ್ರದ ಭೀತಿ ನಿಂದನೆ, ವಾಹನದಿಂದ ತೊಂದರೆ, ದುಃಸ್ವಪ್ನ, ಯಂತ್ರ ಉಪಕರಣಗಳಿಗಾಗಿ ಅಧಿಕ ಖರ್ಚು, ಮಾನಸಿಕವಾಗಿ ನೋವು ಮತ್ತು ಒತ್ತಡ, ಸಂಗಾತಿ ನಡವಳಿಕೆಯಿಂದ ಬೇಸರ‌ತಂದಿತು.

ಕನ್ಯಾರಾಶಿ
ಸಾಂಸಾರಿಕವಾಗಿ ನೆಮ್ಮದಿ, ಕಾರ್ಯಕ್ಷೇತ್ರದಲ್ಲಿ ಜಯ, ಅತೀ ಪ್ರೀತಿ ಪಾತ್ರರೇ ದ್ರೋಹ‌ ಬಗೆದಾರು, ದುಶ್ಚಟಗಳು ಅಧಿಕ, ಕುಟುಂಬದಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ತಿ ಅಥವಾ ಹಣ ಲಾಭ, ಮಕ್ಕಳಿಂದ ಆತಂಕ ಸೃಷ್ಟಿ,

ತುಲಾರಾಶಿ
ಆರ್ಥಿಕ ಸ್ಥಿತಿ ನಾನಾ ರೀತಿಯಲ್ಲಿ ಸುಧಾರಣೆ, ಸರಕಾರಿ ಕಾರ್ಯಗಳಲ್ಲಿ ಗೆಲುವು, ಆರೋಗ್ಯದಲ್ಲಿ ಚೇತರಿಕೆ,  ಸಾಲದಿಂದ ಮುಕ್ತಿ, ಅನಗತ್ಯ ತಿರುಗಾಟ, ಮಕ್ಕಳಿಂದ ಅಪಮಾನ, ಉದ್ಯೋಗ ಮತ್ತು ಸ್ಥಳ ಬದಲಾವಣೆ ಯಿಂದ ತೊಂದರೆ, ಸ್ಥಿರಾಸ್ತಿಯಲ್ಲಿ ಮೋಸ, ಶತ್ರು ಕಾಟ.

ವೃಶ್ಚಿಕರಾಶಿ
ಹೊಸ ವ್ಯವಹಾರ ಆರಂಭ ಬೇಡ, ಹೆಣ್ಣುಮಕ್ಕಳಿಂದ ಅನುಕೂಲ, ಅಧಿಕ ಪ್ರಯಾಣದಲ್ಲಿ ತೊಂದರೆ, ಮಾನಸಿಕವಾಗಿ ಆತಂಕ, ಮಾಟ ಮಂತ್ರ ತಂತ್ರ ಭೀತಿ, ಮನೆಗೆ ಆಪ್ತೇಷ್ಟತ ಭೇಟಿಯಿಂದ ಸಂತಸ, ಅಧಿಕ ಖರ್ಚು,  ನೆರೆಹೊರೆಯವರೊಂದಿಗೆ ವಾಗ್ವಾದ, ದುರಾಭ್ಯಾಸಗಳು,

ಧನಸ್ಸುರಾಶಿ
ಆರೋಗ್ಯ ಸಮಸ್ಯೆ, ಕಾರ್ಯಕ್ಷೇತ್ರದಲ್ಲಿ ಯಶಸ್ಸು, ದುಂದು ವೆಚ್ಚಗಳಿಂದ ಆತಂಕ, ಹಳೆಯ ವಸ್ತುಗಳಿಂದ ಪೆಟ್ಟು, ಮಾನಸಿಕ ವೇದನೆ, ವಿಕೃತ ಮನಸ್ಥಿತಿ, ಅಪಮಾನ,‌ ಅವಮಾನ ಸ್ಥಿತಿ ನಿರ್ಮಾಣವಾಗಲಿದೆ,  ಆಸ್ತಿಯಿಂದ ನೋವು, ಆರ್ಥಿಕ ಸಮಸ್ಯೆ.

ಮಕರರಾಶಿ
ವ್ಯವಹಾರ ಕ್ಷೇತ್ರದಲ್ಲಿ ಯಶ್ಸು, ಶುಭ ಸುದ್ದಿ‌ ಅಕ್ರಮ ಧನ ಸಂಪಾದನೆ, ಯಂತ್ರೋಪಕರಣ ಮತ್ತು ಕೆಲಸಗಾರರಿಂದ ತೊಂದರೆ, ಬಂಧುಗಳಿಂದ ನೋವು ಮತ್ತು ನಷ್ಟ, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ, ಮಕ್ಕಳು ದಾರಿ ತಪ್ಪುವ ಸಂಭವ, ಇಂದು ಆಶಾದಾಯಕ‌ ದಿನ.

ಕುಂಭರಾಶಿ
ನಿಸ್ವಾರ್ಥ ಸೇವೆಯಿಂದ ಯಶಸ್ಸು, ಸಿಕ್ಕ‌ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ, ಸೇವಕರಿಂದ ಅಪವಾದ ಮತ್ತು ನಷ್ಟ, ತಂತ್ರ ಭೀತಿ, ಆರ್ಥಿಕವಾಗಿ ಉತ್ತಮ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಕಾರ್ಯಜಯ ವೃತ್ತಿಪರರಿಗೆ ಅನುಕೂಲ.

ಮೀನರಾಶಿ
ಉದ್ಯೋಗದಲ್ಲಿ ಪ್ರಗತಿ, ಕಾರ್ಯರಂಗ ಬದಲಾವಣೆ, ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣ, ಮಕ್ಕಳಿಂದ ನೋವು, ಪ್ರೀತಿ-ಪ್ರೇಮದಲ್ಲಿ ಸಂಶಯ, ಭಾವನೆಗೆ ಪೆಟ್ಟು, ದುರಾಸೆಗೆ ಬಲಿ, ಬಾಲಗ್ರಹ ದೋಷ, ಅಧ್ಯಾತ್ಮದ ಕಡೆಗೆ ಒಲವು, ಅಧಿಕ ಖರ್ಚು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular