ನಿತ್ಯಭವಿಷ್ಯ : 29-03-2020

0

ಮೇಷರಾಶಿ
ಮನೆಯಲ್ಲಿ ನೆಮ್ಮದಿ ಇದ್ದರೂ ಶನಿಯ ಪ್ರತಿಕೂಲತೆ ಆಗಾಗೆ ಅನುಭವಕ್ಕೆ ಬರಲಿದೆ ಆರೋಗ್ಯದ ಬಗ್ಗೆ ಆರ್ಥಿಕವಾಗಿ ವ್ಯಯದ ಚಿಂತೆಯೇ ಹೆಚ್ಚಾದೀತು. ವೃತ್ತಿರಂಗದ ವ್ಯವಹಾರದಲ್ಲಿ ಚಾಕಚಕ್ಯತೆ ಇರಲಿ. ಸ್ನೇಹಿತರಿಂದ ನೆರವು, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅತಿಯಾದ ಒತ್ತಡ, ಹಣಕಾಸು ನಷ್ಟ, ಮಾನಸಿಕ ತೊಂದರೆ.

ವೃಷಭರಾಶಿ
ಅನಾವಶ್ಯಕ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ಹೆಚ್ಚಿನ ಆತ್ಮವಿಶ್ವಾಸದಿಂದ ಮುನ್ನಡೆಯನ್ನು ಸಾಧಿಸಲಿದ್ದೀರಿ. ವೃತ್ತಿರಂಗದಲ್ಲಿ ಹೊಂದಿಕೊಂಡು ಹೋಗುವ ಜಾಣ್ಮೆ ಇರಲಿ. ಅವಿವಾಹಿತರಿಗೆ ಮುನ್ನಡೆಗೆ ಅಡೆತಡೆಗಳಿವೆ. ಸಾಂಸಾರಿಕವಾಗಿ ನೆಮ್ಮದಿ ಸಮಾಧಾನ ತರುವುದು. ನಿರ್ಧಾರಗಳಲ್ಲಿ ಎಚ್ಚರ, ಬಂಧುಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನರಾಶಿ
ಕೆಲವೊಂದು ಕುಂದುಕೊರತೆಯನ್ನು ತುಂಬಿ ಕೊಳ್ಳಲು ಪ್ರಯತ್ನಿಸಬೇಕಾಗುವುದು. ವ್ಯಾಪಾರದಲ್ಲಿ ಚೇತರಿಕೆ ತೋರಿ ಬಂದು ಸಮಾಧಾನ ತರುವುದು. ಜಾಗ್ರತೆಯಲ್ಲಿರುವುದು ಉತ್ತಮ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಕುಲದೇವರ ಪ್ರಾರ್ಥನೆ, ಶೀತ ಸಂಬಂಧಿತ ರೋಗ, ಇತರರ ಮಾತಿಗೆ ಮರುಳಾಗಬೇಡಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ. ದೇವತಾ ಕಾರ್ಯಗಳ ಮುಂದೂಡಿಕೆಯು ಸಮಾಧಾನವನ್ನು ತರಲಾರದು.

ಕಟಕರಾಶಿ
ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ತಾಳ್ಮೆ, ಸಹನೆ ಇರಲಿ. ಕಾರ್ಯಕ್ಷೇತ ದಲ್ಲಿ ವಿಚಾರ ಮಂಥನ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಶೇರು ಮಾರ್ಕೆಟ್‌, ಲಾಟರಿ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಮಾಡುವುದು ಅಗತ್ಯ ಮಹಿಳೆಯರಿಗೆ ತೊಂದರೆ, ಹಿತ ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟು, ಸಾಲ ಮಾಡುವ ಸಾಧ್ಯತೆ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.

ಸಿಂಹರಾಶಿ
ಸಾಂಸಾರಿಕ ನಿರ್ವಹಣೆ ವಿಚಾರದಲ್ಲಿ ಸಮಾಧಾನ ತರುತ್ತದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರದು. ನಿರುದ್ಯೋಗಿಗಳು ತಮ್ಮ ಉದ್ಯೋಗದ ಬಗ್ಗೆ ಖಚಿತ ನಿರ್ಧಾರ ತೆರೆದುಕೊಳ್ಳುವುದು ಅತೀ ಅಗತ್ಯವಾಗಿದೆ. ವಾಗ್ವಾದಗಳಿಂದ ದೂರವಿರಿ, ಶತ್ರುತ್ವ ಹೆಚ್ಚಾಗುವುದು, ಮನಃಸ್ತಾಪ, ಅನಾವಶ್ಯಕ ಹಣ ಖರ್ಚು, ಆರೋಗ್ಯದ ಕಡೆ ಗಮನಹರಿಸಿ, ವ್ಯಾಪಾರಸ್ಥರಿಗೆ ಸಾಧಾರಣ ಪ್ರಗತಿ.

ಕನ್ಯಾರಾಶಿ
ಹೆಚ್ಚಿನ ಆತ್ಮ ವಿಶ್ವಾಸದಿಂದ ಮುಂದುವರಿಯಿರಿ. ಸಾಂಸಾರಿಕವಾಗಿ ನೆಮ್ಮದಿ ಇರದು. ವಿದ್ಯಾರ್ಥಿಗಳಿಗೆ ಪ್ರಯತ್ನಬಲದ ಅಗತ್ಯ ತುಂಬಾವಿದೆ. ಖರ್ಚಿನಲ್ಲಿ ಮಿತಿ ಇರಲಿ. ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ, ವಿಧೇಯತೆಯಿಂದ ವರ್ತಿಸಿ, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ಹಿರಿಯರ ಮಾತಿಗೆ ಗೌರವ ನೀಡುವುದು ಉತ್ತಮ, ಜಾಣ್ಮೆಯಿಂದ ಕಾರ್ಯ ಪ್ರಗತಿ, ವ್ಯವಹಾರಗಳಲ್ಲಿ ಎಚ್ಚರಿಕೆ.ಆರೋಗ್ಯದಲ್ಲಿ ಆಗಾಗೆ ಏರುಪೇರು ತೋರಿಬಂದೀತು.

ತುಲಾರಾಶಿ
ನಾನಾ ರೀತಿಯ ತೊಂದರೆ, ಅಕಾಲ ಭೋಜನ, ಸಾಮಾಜಿಕವಾಗಿ ಸ್ಥಾನಮಾನ, ಗೌರವಕ್ಕೆ ಕುಂದಾಗದು. ವಿದ್ಯಾರ್ಥಿಗಳಿಗೆ ನಿರಾಶಾಮನೋಭಾವನೆಯಿಂದ ಅಸಮಾಧಾನ ತರಲಿದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಹೊಣೆಗಾರಿಕೆ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಮಾತಿನ ಚಕಮಕಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಹಣಕಾಸು ಸಂಕಷ್ಟ.

ವೃಶ್ಚಿಕರಾಶಿ
ದ್ರವ್ಯ ಲಾಭ, ಪರರಿಂದ ಸಹಾಯ, ದುಃಖದಾಯಕ ಪ್ರಸಂಗ, ವಿದ್ಯಾಭ್ಯಾಸಕ್ಕೆ ತೊಂದರೆ, ಸಾಂಸಾರಿಕವಾಗಿ ಬರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಸಾಮಾಜಿಕವಾಗಿ ಶತ್ರುಗಳನ್ನು ಗೆಲ್ಲುವಿರಿ. ಆರ್ಥಿಕವಾಗಿ ಸ್ಥಿರತೆ ತೋರಿಬಂದು ಮುನ್ನಡೆಗೆ ಸಾಧಕವಾಗಲಿದೆ. ಅನಿರೀಕ್ಷಿತ ಉದ್ಯೋಗ ಲಾಭವಿದೆ. ವಿಪರೀತ ವ್ಯಸನ, ಯತ್ನ ಕಾರ್ಯದಲ್ಲಿ ವಿಳಂಬ, ಹಣಕಾಸು ನಷ್ಟ.

ಧನಸ್ಸುರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಗೊಂದಲ, ಋಣ ವಿಮೋಚನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಕಾರ್ಯಒತ್ತಡವಿರುತ್ತದೆ. ಹಿರಿಯರಿಗೆ ದೈವಸಾನಿಧ್ಯದ ಯಾತ್ರಾದಿ ಇರುತ್ತದೆ. ಲಾಭದಾಯಕ ಆದಾಯ ಮುನ್ನಡೆಗೆ ಪೂರಕವಾಗಿರುತ್ತದೆ. ಖರ್ಚು ವೆಚ್ಚದಲ್ಲಿ ಕಡಿವಾಣ ಹಾಕಿರಿ. ಮಕ್ಕಳಿಗೆ ಅನಾರೋಗ್ಯ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.

ಮಕರರಾಶಿ
ಕುಟುಂಬ ಸೌಖ್ಯ, ವ್ಯವಹಾರಗಳಲ್ಲಿ ನಷ್ಟ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿ ತೋರಿಬರುತ್ತದೆ. ಕೈಗೊಳ್ಳುವ ನಿರ್ಧಾರಗಳನ್ನು ಯೋಚಿಸಿ, ಚಿಂತಿಸಿ ಮುನ್ನಡೆ ಯಿರಿ. ಆರೋಗ್ಯದ ನಿರ್ಲಕ್ಷ್ಯ ವಹಿಸದಿರಿ. ಆರ್ಥಿಕ ಸ್ಥಿರತೆ ಆಗಾಗೆ ಏರುಪೇರಾದೀತು. ದಿನಾಂತ್ಯ ಶುಭವಿದೆ. ಮೇಲಾಧಿಕಾರಿಗಳಿಂದ ತೊಂದರೆ, ನೀಚ ಜನರಿಂದ ದೂರವಿರಿ, ಮಾನಸಿಕ ಒತ್ತಡ, ದೈವ ಕಾರ್ಯದಿಂದ ಮಾನಸಿಕ ನೆಮ್ಮದಿ.

ಕುಂಭರಾಶಿ
ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ಎಡವಟ್ಟು,ವೃತ್ತಿರಂಗದಲ್ಲಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳಿರಿ. ವಿಶ್ರಾಂತಿಯ ದಿನಗಳು ನೆಮ್ಮದಿ ತರಲಿದೆ. ಅನಿರೀಕ್ಷಿತ ಖರ್ಚುವೆಚ್ಚಗಳು ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು, ಜಾಗ್ರತೆ. ತಪ್ಪು ಮಾಡುವ ಸಾಧ್ಯತೆ, ಮಾನಸಿಕ ಚಿಂತೆ, ಸಕಾಲಕ್ಕೆ ಭೋಜನ ಇಲ್ಲದಿರುವುದು, ಈ ವಾರ ಸಾಧಾರಣ ಫಲ.

ಮೀನರಾಶಿ
ಅಭಿವೃದ್ಧಿ ಗೋಚರಕ್ಕೆ ಬಂದರೂ ನೆಮ್ಮದಿ ಇರಲಾರದು. ಸಾಂಸಾರಿಕವಾಗಿ ಸಣ್ಣಪುಟ್ಟ ತಿಳುವಳಿಕೆಗಳು ತಲೆದೋರಬಹುದು. ಹೊಂದಾಣಿಕೆಯಿಂದ ಎಲ್ಲವೂ ಸರಿಯಾಗಲಿದೆ. ಉದ್ಯೋ ಗದಲ್ಲಿ ಕಾರ್ಯಒತ್ತಡವು ಕಂಡು ಬಂದೀತು. ಮುಖ್ಯ ವಿಚಾರಗಳಲ್ಲಿ ಎಚ್ಚರ, ಅನ್ಯರಿಗೆ ಎಲ್ಲವನ್ನು ಹೇಳಿಕೊಳ್ಳಬೇಡಿ, ಆದಾಯಕ್ಕಿಂತ ಅಧಿಕ ಖರ್ಚು, ಕೆಲಸದಲ್ಲಿ ಅಧಿಕ ಒತ್ತಡ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ತಾಳ್ಮೆಯಿಂದ ಕಾರ್ಯ ಪ್ರಗತಿ.

Leave A Reply

Your email address will not be published.