ನಿತ್ಯಭವಿಷ್ಯ : 01-05-2020

0

ಮೇಷರಾಶಿ
ಸಾಲ ಬಾಧೆ, ಶತ್ರು ಕಾಟ, ಕಾರ್ಮಿಕರು, ಕೆಲಸಗಾರರಿಗೆ ಬೇಸರ, ಬಾಡಿಗೆದಾರರಿಂದ ಬೇಜವಾಬ್ದಾರಿ ವರ್ತನೆ, ಸಾಲ ಕೇಳಿದರೂ ಹಣ ಲಭಿಸುವುದಿಲ್ಲ, ಹಿರಿಯರ ಸಹಕಾರದಿಂದ ಕಾರ್ಯಸಾಧನೆ ಯಾಗಲಿದೆ. ವಿಶೇಷವಾಗಿ ಪತ್ನಿಯ ಸಹಕಾರವು ಸಿಗಲಿದೆ. ಹಿಡಿದ ಕೆಲಸಕಾರ್ಯಗಳು ಅಭಿವೃದ್ಧಿ ತರುತ್ತವೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ತರಲಿದೆ. ಸಹೋದರರು-ನೆರೆಹೊರೆಯವರ ಜೊತೆ ಅನಗತ್ಯ ಚರ್ಚೆ, ಪ್ರಯಾಣದಲ್ಲಿ ವಿಘ್ನ, ತಾಯಿಯೊಂದಿಗೆ ಮನಃಸ್ತಾಪ, ವಾಹನಗಳಿಂದ ನಷ್ಟ, ಸ್ಥಿರಾಸ್ತಿಯಲ್ಲಿ ಸಮಸ್ಯೆ, ಮಾಟ-ತಂತ್ರದ ಭೀತಿ, ಅಧಿಕ ಸುಸ್ತು, ಚರ್ಮ ಸಮಸ್ಯೆ, ಬೆನ್ನು ಸೆಳೆತ.

ವೃಷಭರಾಶಿ
ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ಕಾರ್ಯಸಾಧನೆಯಾಗಲಿದೆ. ಪಾಲುದಾರಿಕೆ ವಿಚಾರದಲ್ಲಿ ತುಸು ಲಾಭವಿದೆ. ಹೊಟೇಲ್‌ ಉದ್ಯಮದವರಿಗೆ ಕೆಲಸಗಾರರ ಕೊರತೆಯಿಂದ ಅಡಚಣೆಯಾದೀತು. ಆರ್ಥಿಕ ನಷ್ಟದ ಚಿಂತೆ, ಕುಟುಂಬಕ್ಕಾಗಿ ಅಧಿಕ ಖರ್ಚು, ನೆರೆಹೊರೆಯವರಿಂದ ಆರ್ಥಿಕ ಸಹಾಯ, ಭಾವನಾತ್ಮಕ ವಿಚಾರದಲ್ಲಿ ನೋವು, ಪ್ರೀತಿ ಪ್ರೇಮದಲ್ಲಿ ಅಪಜಯ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಸೋಲು, ವಿದ್ಯಾಭ್ಯಾಸದಲ್ಲಿ ಹಿನ್ನಡೆ ಭೀತಿ, ಆಧ್ಯಾತ್ಮಿಕ ಚಿಂತನೆ, ಒಂಟಿಯಾಗಿಲು ಇಷ್ಟ ಪಡುವಿರಿ.

ಮಿಥುನರಾಶಿ
ಬಂದಂತಹ ಅವಕಾಶ ಕೈತಪ್ಪುವುದು, ಮಾತೃವಿನಿಂದ ಆರ್ಥಿಕ ಸಹಾಯ, ಧನಾಗಮನ ಉತ್ತಮವಿದ್ದರೂ ಹಲವು ರೀತಿಯಲ್ಲಿ ಖರ್ಚುವೆಚ್ಚಗಳಿರುತ್ತವೆ. ರಾಜಕೀಯದವರಿಗೆ ಅನಾವಶ್ಯಕವಾಗಿ ಗೊಂದಲಗಳು ತೋರಿಬಂದಾವು. ಆರ್ಥಿಕವಾಗಿ ಉಳಿತಾಯದ ಬಗ್ಗೆ ಗಮನವಿರಲಿ. ಸ್ಥಿರಾಸ್ತಿ ವಿಚಾರಗಳಲ್ಲಿ ಗೆಲ್ಲುವ ಭರವಸೆ, ಗುಪ್ತ ವಿಚಾರಗಳಿಂದ ತೊಂದರೆ, ಸೋಮಾರಿತನ, ಬೇಜವಾಬ್ದಾರಿ, ಸಂಸಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮ-ವ್ಯಾಪಾರಕ್ಕೆ ಸಹಕಾರ, ವ್ಯವಹಾರಕ್ಕೆ ಅವಕಾಶವಿದ್ದರೂ ಉಪಯೋಗಿಸಿಕೊಳ್ಳುವುದಿಲ್ಲ.

ಕಟಕರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಬಲದಿಂದ ಅಭಿವೃದ್ಧಿ ಕಂಡುಬರಲಿದೆ. ಲವಲವಿಕೆ, ಉತ್ಸಾಹಿಗಳಿಗೆ ಹೆಚ್ಚಿನ ಆತ್ಮವಿಶ್ವಾಸ ಪೂರಕವಾಗಲಿದೆ. ಅನೇಕ ದಿನಗಳಿಂದ ಸ್ಥಗಿತಗೊಂಡ ಕೆಲಸಕಾರ್ಯಗಳು ಹಂತ ಹಂತವಾಗಿ ಮುಗಿಯಲಿವೆ. ಉದ್ಯೋಗ ನಷ್ಟ, ಸಂಪಾದನೆ ಇಲ್ಲದ ಜೀವನ, ಕಷ್ಟ, ನಷ್ಟದ ದಿವಸ, ಅದೃಷ್ಟ ಕೈಕೊಡುವುದು, ಜೀವನದ ಬಗ್ಗೆ ಚಿಂತೆ ಹೆಚ್ಚು, ನಿದ್ರೆಯಲ್ಲಿ ಕೆಟ್ಟ ಕನಸುಗಳು, ಬಂಧುಗಳಿಂದ ಮಾಟ ಮಂತ್ರದ ಪ್ರಯೋಗ ಭೀತಿ, ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಅನಗತ್ಯ ಖರ್ಚುಗಳು ಮಾಡುವಿರಿ, ಬೇಡದ ವಿಚಾರಗಳಲ್ಲಿ ಆಸಕ್ತಿ.

ಸಿಂಹರಾಶಿ
ಪರಿಚಯವಿಲ್ಲದ ವ್ಯಕ್ತಿಗಳಿಂದ ಅನುಕೂಲ, ಸ್ನೇಹಿತರಿಂದ ಭರವಸೆ, ತಂದೆಯಿಂದ ಅನುಕೂಲ, ಕುಟುಂಬದಲ್ಲಿ ನೋವು, ಹರಕೆ ಈಡೇರಿಸುವ ಭರವಸೆ, ಮಕ್ಕಳ ನಡವಳಿಕೆಯಿಂದ ನೋವು. ವೃತ್ತಿರಂಗದಲ್ಲಿ ಅದೃಷ್ಟ ನಿಮ್ಮನ್ನು ಮೇಲೆತ್ತಲಿದೆ. ಆರ್ಥಿಕ ಗಳಿಕೆ ಉತ್ತಮವಿಲ್ಲದಿದ್ದರೂ ಆಗಾಗ ಧನಾಗಮನವಿರುತ್ತದೆ. ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಚೆನ್ನಾಗಿರಲಿ. ಚಾಲನೆಯಲ್ಲಿ ಗಮನವಿರಲಿ.

ಕನ್ಯಾರಾಶಿ
ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಜಗಳ, ಒತ್ತಡ, ಸೋಲು, ನಷ್ಟ, ಗೌರವಕ್ಕೆ ಧಕ್ಕೆ, ಅಪವಾದ, ವಿವಾಹಾಪೇಕ್ಷಿ ಯುವಕರಿಗೆ ಕಂಕಣಬಲಕ್ಕೆ ಅನುಕೂಲವಾಗಲಿದೆ. ಸರಕಾರಿ ನೌಕರರು ಕೆಲವೊಂದು ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾದೀತು. ಯಾರಿಗೂ ಸಾಲ ನೀಡದಿರಿ. ದೇಹಾರೋಗ್ಯದ ಬಗ್ಗೆ ಗಮನ ನೀಡಿರಿ. ಸ್ಥಿರಾಸ್ತಿ ವಿಚಾರಕ್ಕೆ ಮಾಟ-ಮಂತ್ರದ ಭೀತಿ, ತಾಯಿ ಜೊತೆ ಬೇಸರ, ಉದ್ಯೋಗ ನಷ್ಟ, ಎಲ್ಲಾ ಕಾರ್ಯಗಳಲ್ಲಿ ನಿರಾಸಕ್ತಿ.

ತುಲಾರಾಶಿ
ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದ ನಡವಳಿಕೆಯಿಂದ ಬೇಸರ, ಪ್ರಯಾಣದಲ್ಲಿ ಸಮಸ್ಯೆ, ಗುಪ್ತ ಸ್ಥಳದಲ್ಲಿ ಪೆಟ್ಟು, ಸದ್ಯದ ಪರಿಸ್ಥಿತಿಯಲ್ಲಿ ತಾಳ್ಮೆ, ಸಮಾಧಾನದಿಂದ ನಡೆಯುವುದು ಅಗತ್ಯವಿದೆ. ಅನಾವಶ್ಯಕವಾಗಿ ಕೋಪ, ತಾಪಗಳಿಗೆ ಕಾರಣರಾಗದಿರಿ. ದಾಯಾದಿಗಳು ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ. ಬಂಧುಗಳೇ ವಿರೋಧಿಗಳಾಗುವರು, ಸಂಗಾತಿಯಿಂದ ಅಂತರ ಕಾಯ್ದುಕೊಳ್ಳುವಿರಿ, ಬುದ್ಧಿ ಇಲ್ಲದಂತೆ ವರ್ತಿಸುವ ಸಾಧ್ಯತೆ, ಗುರು, ಹಿರಿಯರ ಮಾರ್ಗದರ್ಶನ ದಿಕ್ಕರಿಸುವಿರಿ, ನೆಮ್ಮದಿ ಇಲ್ಲದ ಜೀವನ.

ವೃಶ್ಚಿಕರಾಶಿ
ಕುಟುಂಬದಲ್ಲಿ ಸೋಲು, ನಷ್ಟ, ಮನಸ್ಸಿನಲ್ಲಿ ಆತಂಕ, ದುಷ್ಟ ಆಲೋಚನೆ, ಅತೀ ಕಷ್ಟದ ದಿನ, ಸ್ನೇಹಿತರು ದೂರವಾಗುವರು, ಆರ್ಥಿಕವಾಗಿ ಅಧಿಕ ರೂಪದಲ್ಲಿ ಖರ್ಚುಗಳು ತೋರಿಬಂದಾವು. ವ್ಯಾಪಾರಿ ವರ್ಗದವರಿಗೆ ತಕ್ಕಮಟ್ಟಿಗೆ ಸಮಾಧಾನ ಸಿಗಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಮುಂಭಡ್ತಿಯಾಗಲಿದೆ. ಮಕ್ಕಳಿಂದ ಹಿತವಾದ ಅನುಭವ. ಅದೃಷ್ಟ ವಂಚಿತರೆಂಬ ನೋವು, ಲಾಭಕ್ಕಿಂತ ನಷ್ಟ ಹೆಚ್ಚು ಬಾಧಿಸುವುದು.

ಧನಸ್ಸುರಾಶಿ
ಓದುವ ಮಕ್ಕಳಿಂದ ಉತ್ತಮ ಫ‌ಲಿತಾಂಶಸಿಗಲಿದೆ. ಬೇಕರಿ ಉದ್ಯಮ, ಕಬ್ಬಿಣ ವ್ಯಾಪಾರ ಇತ್ಯಾದಿಗಳಿಂದ ಲಾಭವಾದೀತು. ಕ್ರೀಡಾಪಟುಗಳಿಗೆ ಅವಮಾನ ಪ್ರಸಂಗ ಕಂಡುಬರಲಿದೆ. ದಿನಾಂತ್ಯದಲ್ಲಿ ಶುಭವಿದೆ. ಮಕ್ಕಳಿಂದ ಬಾಧೆ, ಸಂಗಾತಿಯ ಬೇಜವಾಬ್ದಾರಿತನದಿಂದ ಸಮಸ್ಯೆ, ಉದ್ಯೋಗದಲ್ಲಿ ನಿರಾಸಕ್ತಿ, ಭೂ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಭರವಸೆ, ತಟಸ್ಥ ಜೀವನ, ಅಧಿಕ ಕೋಪ, ಪಾಲುದಾರಿಕೆಯಲ್ಲ ಅನುಕೂಲ, ಉತ್ತಮ ಹೆಸರು ಗಳಿಸುವ ಪ್ರಯತ್ನ.

ಮಕರರಾಶಿ
ತಾಯಿಯ ಆರೋಗ್ಯಕ್ಕಾಗಿ ಖರ್ಚು, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ವಾಹನ ರಿಪೇರಿ, ಬುದ್ಧಿ ಚಂಚಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗ, ವ್ಯವಹಾರದಲ್ಲಿ ತುಸು ಅಭಿವೃದ್ಧಿ, ಆರ್ಥಿಕವಾಗಿ ಚೇತರಿಕೆ ಮಾನಸಿಕವಾಗಿ ಸಮಾಧಾನವನ್ನು ತಂದುಕೊಡಲಿದೆ. ಸಾಂಸಾರಿಕವಾಗಿ ಪತ್ನಿ, ಮಕ್ಕಳಿಂದ ಸುಖ, ಸಂತೋಷಗಳು ಕಂಡುಬರಲಿವೆ. ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಕೆಲಸಗಾರರು-ಕಾರ್ಮಿಕರ ಕೊರತೆ, ಮಾನಸಿಕ ಅಸಮತೋಲನ, ದಾಂಪತ್ಯದಲ್ಲಿ ವಿರಸ, ತಂದೆಯಿಂದ ಸಹಕಾರ ಬಯಸುವಿರಿ.

ಕುಂಭರಾಶಿ
ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಮುಖ್ಯವಾಗಿ ಕೇತುವಿನಿಂದ ಉತ್ತಮ ಫ‌ಲಗಳನ್ನು ಪಡೆಯಲಿದ್ದೀರಿ. ಧನಾಗಮನ ಉತ್ತಮವಿದ್ದು ಖರ್ಚುವೆಚ್ಚಗಳಲ್ಲಿ ಸಮತೋಲನವನ್ನು ಸಾಧಿಸಲಿದ್ದೀರಿ. ಯುವಕರಿಗೆ ಉದ್ಯೋಗಭಾಗ್ಯವು ದೊರಕಲಿದೆ. ಗುಪ್ತ ಸ್ಥಳದಲ್ಲಿ ಪೆಟ್ಟಾಗುವ ಸಂದರ್ಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಯುಷ್ಯಕ್ಕೆ ಕಂಟಕವಾಗುತ್ತೆಂದು ಆತಂಕ, ಧನ ಸಂಪತ್ತಿಗೆ ಆಸೆ, ಅತಿಯಾಗಿ ನಂಬಿದವರಿಗೆ ಮೋಸ.

ಮೀನರಾಶಿ
ಸಂಗಾತಿಯಿಂದ ಧನಾಗಮನ, ಹೆಣ್ಣು ಮಕ್ಕಳ ಸಂಸಾರದಲ್ಲಿ ನೋವು, ಸ್ಥಗಿತಗೊಂಡ ಕೆಲಸಕಾರ್ಯಗಳನ್ನು ಪುನಃ ಚಾಲನೆಗೆ ತನ್ನಿರಿ. ವ್ಯಾಪಾರಸ್ಥರಿಗೆ ಹೂಡಿಕೆಗಳು ಲಾಭಕರವಾಗಲಿವೆ. ವಿಶೇಷವಾಗಿ ಸಾಂಸಾರಿಕವಾಗಿ ಸಹಮತವಿರಲಿ. ಅನಿರೀಕ್ಷಿತ ಧನಾಗಮನದಿಂದ ಸಂತಸವಿದೆ. ಮಾತೃವಿನಿಂದ ಧನಸಹಾಯ, ಉದ್ಯೋಗದಲ್ಲಿ ಹಿನ್ನಡೆ, ದಾಯಾದಿಗಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಹಣ, ಚಿನ್ನಾಭರಣ ಕಳವಾಗುವ ಸಾಧ್ಯತೆ ಎಚ್ಚರಿಕೆ.

Leave A Reply

Your email address will not be published.