ನಿತ್ಯಭವಿಷ್ಯ : 23-03-2020

0

ಮೇಷರಾಶಿ
ವ್ಯವಹಾರಗಳಲ್ಲಿ ಹೆಚ್ಚಿನ ಲಾಭ, ನವದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ಕಂಡು ಬರಲಿದೆ. ಧನ ಸಂಚಯಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ಭಡ್ತಿ ಸಾಧ್ಯತೆ. ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ.

ವೃಷಭರಾಶಿ
ಹೊಸ ಕೆಲಸ ಆರಂಭಿಸದರೆ ಯಶಸ್ಸು, ಆರ್ಥಿಕಸ್ಥಿತಿ ಉತ್ತಮವಿದ್ದರೂ ಶ್ರೀದೇವತಾ ಕಾರ್ಯಗಳಿಗಾಗಿ ಧನವ್ಯಯ. ಮನೆಯವರೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ. ಆಗಾಗ ಮಾನಸಿಕ ಅಸ್ಥಿರತೆ ಕಂಡು ಬರುತ್ತದೆ. ಅಧಿಕಾರಿ ವರ್ಗದವರಿಗೆ ಸ್ಥಾನ ಬದಲಾವಣೆ ತರಲಿದೆ.

ಮಿಥುನರಾಶಿ
ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ವಾಹನ ಚಾಲನೆಯಲ್ಲಿ ಗಮನ ಹರಿಸಿರಿ. ಪಿತ್ರಾರ್ಜಿತ ಆಸ್ತಿಯ ತಕರಾರು ಕಂಡು ಬರುತ್ತದೆ. ಅನೇಕ ವಿಧದ ಖರ್ಚುವೆಚ್ಚಗಳಿದ್ದರೂ ಧನಾಗಮನ. ಆರೋಗ್ಯ ಬಗ್ಗೆ ಜಾಗ್ರತೆ ಅಗತ್ಯ.

ಕಟಕರಾಶಿ
ಪ್ರಯತ್ನ ಬಲದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ತಂದೀತು. ಶುಭಮಂಗಲ ಕಾರ್ಯಗಳಿಗೆ ಅಡಚಣೆ ತೋರಿ ಬರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮ ಅಗತ್ಯ. ಸಾಂಸಾರಿಕವಾಗಿ ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ಶುಭವಾರ್ತೆ.

ಸಿಂಹರಾಶಿ
ಆರೋಗ್ಯ ಉತ್ತಮವಾಗಿರುತ್ತದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಫ‌ಲ ನೀಡಲಿವೆ. ವಾಹನ ಖರೀದಿ ಭೂ ಖರೀದಿಯಲ್ಲಿ ನಿಮಗೆ ಅನುಕೂಲವಾಗಲಿದೆ. ಮನೆಯಲ್ಲಿ ಅತಿಥಿ, ವಿದ್ಯಾರ್ಥಿಗಳಿಗೆ ಮಿಶ್ರಫಲ, ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಮಿತ್ರರ ಆಗಮನವಿದ್ದೀತು. ಸಂತಸ ತರಲಿದೆ.

ಕನ್ಯಾರಾಶಿ
ಅನಿರೀಕ್ಷಿತ ರೂಪದಲ್ಲಿ ವೃತ್ತಿರಂಗದಲ್ಲಿ ಮುನ್ನಡೆಗೆ ಅವಕಾಶವಿದೆ. ಯಾರೊಂದಿಗೂ ನಿಷ್ಠರ ಬೇಡ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಆದರೂ ಶತ್ರುಗಳ ಬಾಧೆ ಆಗಾಗ ಕಾಡಲಿದೆ. ಆದರೆ ತಾಳ್ಮೆ ಸಮಾಧಾನದಿಂದ ಮುನ್ನಡೆಯುವುದು ಉತ್ತಮ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟವಾದೀತು.

ತುಲಾರಾಶಿ
ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಹೊಟ್ಟೆ, ಕಿಬ್ಬೊಟ್ಟೆ , ಮೂತ್ರಕೋಶಗಳಲ್ಲಿ ಸಮಸ್ಯೆ ಕಂಡು ಬರಲಿದೆ. ಹಣಕಾಸು ವ್ಯವಹಾರದಲ್ಲಿ ಗೆಲುವು, ಸ್ವಂತ ಪ್ರಯತ್ನ ಬಲದಿಂದ ಆರ್ಥಿಕ ಧನಾಗಮನ ತೋರಿ ಬಂದೀತು. ಸಾಂಸಾರಿಕವಾಗಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.

ವೃಶ್ಚಿಕರಾಶಿ
ಸ್ವಸಾಮರ್ಥ್ಯದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿವೇಚನಾ ಬುದ್ಧಿಯಿಂದ ಹಲವಾರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ರಾಜಕೀಯವಲಯದಲ್ಲಿ ನಿಮ್ಮ ಸಮಯ ಉತ್ತಮವಿರುತ್ತದೆ. ಶತ್ರುಗಳು ಕೂಡಾ ನಿಮ್ಮ ಮಿತ್ರರಾಗುವ ಪರಿಸ್ಥಿತಿ. ಅತೀ ಶೀಘ್ರದಲ್ಲಿಯೇ ನಿಮ್ಮ ಅಧೃಷ್ಟದ ಬಾಗಿಲು ತೆರೆಯಲಿದೆ.

ಧನುರಾಶಿ
ದೊಡ್ಡ ಯೋಜನೆ ಆರಂಭಿಸಲು ಸಹಕಾರಿ, ಅಡೆತಡೆಗಳು ತೋರಿ ಬಂದರೂ ಕುಟುಂಬ ವರ್ಗದವರ ಸ್ಫೂರ್ತಿ ಆಡ್ಯಜನರ ಸಹಕಾರ ಮುನ್ನಡೆಗೆ ಸಹಾಯವಾಗುತ್ತದೆ. ದೃಢ ಸಂಕಲ್ಪದಿಂದ ನಿಮ್ಮ ವ್ಯವಹಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಮಕರರಾಶಿ
ಆರೋಗ್ಯ ಸಮಸ್ಯೆ ದೂರವಾಗಲಿದೆ. ಮಹಿಳೆಯರಿಗೆ ಸಾಮಾಜಿಕ ಗೌರವವು ಪ್ರಾಪ್ತಿಯಾದೀತು. ಆರ್ಥಿಕ ಸ್ಥಿತಿಯನ್ನು ಸಮತೋಲನದಿಂದ ಸುಧಾರಿಸಿಕೊಂಡು ಹೋಗಿರಿ. ತಾಂತ್ರಿಕ ವೃತ್ತಿಯವರಿಗೆ ಹಾಗೂ ವಾಹನ ವೃತ್ತಿಗಳ ಕ್ಷೇತ್ರದಲ್ಲಿ ಚೇತರಿಕೆ ಕಂಡು ಬಂದೀತು. ಪ್ರವಾಸ ಹೋಗಲು ಮನಸ್ಸು ಹಾತೊರೆಯುತ್ತದೆ.

ಕುಂಭರಾಶಿ
ಸಾಂಸಾರಿಕವಾಗಿ ಸುಖ, ವ್ಯವಹಾರಿಕವಾಗಿ ಅಭಿವೃದ್ದಿ, ಆರ್ಥಿಕ ಸ್ಥಿತಿಯಲ್ಲಿ ಸದಾ ಚಿಂತಿಸುವ ಸ್ಥಿತಿ ತಂದೀತು. ಅಹಂಭಾವಕ್ಕಾಗಿ ಆಗಾಗ ಧನವ್ಯಯ ತಂದೀತು. ಅನ್ಯರೊಂದಿಗೆ ಮನಸ್ತಾಪ ಬಾರದಂತೆ ಜಾಗ್ರತೆ ವಹಿಸಿರಿ. ಮೈಕೈ ನೋವು, ಮೊಣಕಾಲು ನೋವು ತಂದೀತು.

ಮೀನರಾಶಿ
ಕಾರ್ಯಕ್ಷಮತೆಯಿಂದ ಶುಭಫಲ, ಅನಾವಶ್ಯಕವಾಗಿ ಭಾವೋದ್ರೇಕಕ್ಕೆ ಒಳಗಾಗಿ ಮಾನಸಿಕವಾಗಿ ದುರ್ಬಲರಾಗುವಿರಿ. ವ್ಯಾಪಾರ, ಉದ್ದಿಮೆಗಳಿಗಾಗಿ ಉತ್ತಮ ಅಭಿವೃದ್ಧಿ ಇರುತ್ತದೆ. ಸಾಮಾಜಿಕವಾಗಿ ಮನ್ನಣೆ ಸಿಗಲಿದೆ. ಮಕ್ಕಳ ಪ್ರಗತಿ ಮನಸ್ಸಿಗೆ ತುಂಬಾ ಸಂತಸ ನೀಡಲಿದೆ.

Leave A Reply

Your email address will not be published.