ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 03-04-2020

ನಿತ್ಯಭವಿಷ್ಯ : 03-04-2020

- Advertisement -

ಮೇಷರಾಶಿ
ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಾಂಸಾರಿಕವಾಗಿ ಮನಸ್ಸಿಗೆ ನೆಮ್ಮದಿ ಇಲ್ಲವಾದೀತು. ಹಿಡಿದ ಕೆಲಸಕಾರ್ಯಗಳನ್ನು ದೃಢಚಿತ್ತರಾಗಿ ಮುಂದುವರಿಸಬೇಕಾದೀತು. ವಿದ್ಯಾರ್ಥಿಗಳಿಗೆ ಸಂತಸದ ದಿನಗಳಿವು. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಬಂಧುಗಳಲ್ಲಿ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ.

ವೃಷಭರಾಶಿ
ವಿರಾಮದಲ್ಲಿದ್ದರೂ ಮಾನಸಿಕ ಒತ್ತಡಗಳು ಕಮ್ಮಿಯಾಗಲಾರವು. ಸ್ವಯಂಕೃತ್ಯಗಳಿಂದ ಸಂಕಷ್ಟ, ದಾಂಪತ್ಯದಲ್ಲಿ ಕಲಹ, ದೇವತಾ ಕಾರ್ಯಗಳ ಚಿಂತನೆ ಸದ್ಯದಲ್ಲಿ ಕಾರ್ಯಗತವಾದಾವು. ದೂರ ಸಂಚಾರ ಸದ್ಯ ನಡೆಯಲಾರದು. ನೆರೆಹೊರೆಯವರಿಂದ ಕಿರಿಕಿರಿ, ಮಕ್ಕಳ ಭವಿಷ್ಯದ ಚಿಂತೆ, ದುರ್ನಡತೆಗಳಿಂದ ಹಿಂಸೆ, ತಲೆ ತಗ್ಗಿಸುವ ಸಂದರ್ಭ.

ಮಿಥುನರಾಶಿ
ಸಾಂಸಾರಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚು ವ್ಯಸ್ತರಾಗುವಿರಿ. ದೀರ್ಘಕಾಲದ ಸಾಲ ಬಾಧೆ, ಆಕಸ್ಮಿಕ ಸಾಲ ಮರುಪಾವತಿ, ದ್ವಂದ್ವ ಚಿಂತನೆಗಳು ಆಗಾಗ ಮನಸ್ಸನ್ನು ಅವರಿಸಲಿವೆ. ಎಲ್ಲಾ ವಿಚಾರದಲ್ಲಿ ಹೊಂದಾಣಿಕೆಯಿಂದ ಮುಂದುವರಿಯವುದು ಅತೀ ಉತ್ತಮ. ಅಧಿಕ ಉಷ್ಣ, ಸುಸ್ತು, ಹೊಟ್ಟೆ-ಕಾಲು ನೋವು, ಆರೋಗ್ಯದಲ್ಲಿ ವ್ಯತ್ಯಾಸ,

ಕಟಕರಾಶಿ
ವಿದ್ಯಾರ್ಥಿಗಳಲ್ಲಿ ಮಂದತ್ವ, ಆರೋಗ್ಯದಲ್ಲಿ ಹೆಚ್ಚಿನ ಗಮನ ಹರಿಸುವುದು. ಸಾಂಸಾರಿಕ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಸಾಮಾಜಿಕ ಕಾರ್ಯರಂಗದಲ್ಲಿ ಉದ್ಯೋಗಿಗಳಿಗೆ ಕಾರ್ಯಒತ್ತಡ ವಿರುತ್ತದೆ. ಅವಮಾನಕ್ಕೆ ಗುರಿಯಾಗುವಿರಿ, ಪ್ರೇಮ ವಿಚಾರದಲ್ಲಿ ಎಡವಟ್ಟು, ಮಕ್ಕಳಿಂದ ಮನಃಸ್ತಾಪ.

ಸಿಂಹರಾಶಿ
ಅನಾವಶ್ಯಕವಾಗಿ ಋಣಾತ್ಮಕ ಚಿಂತನೆ ನಿಮ್ಮನ್ನು ಅತಂಕಕ್ಕೆ ಒಡ್ಡಲಿದೆ. ಸಾಂಸಾರಿಕ ವಿಚಾರದತ್ತ ಹೆಚ್ಚು ಗಮನ ಹರಿಸಿರಿ. ದೈವಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವಂತಾದೀತು. ದಿನಾಂತ್ಯ ಶುಭ. ಮಕ್ಕಳ ದುಸ್ಥಿತಿಯಿಂದ ಚಿಂತೆ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ಅನಗತ್ಯ ಮಾತುಗಳಿಂದ ದಾಂಪತ್ಯ ಕಲಹ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಶತ್ರುಗಳ ಕಾಟ, ಸ್ವಯಂಕೃತ ಅಪರಾಧದಿಂದ ಸಂಕಷ್ಟ. ಸೇವಾವೃತ್ತಿಯು ಉದ್ಯೋಗ ಪ್ರಾಪ್ತಿ.

ಕನ್ಯಾರಾಶಿ
ಮಿತ್ರರಿಂದ ಕಾರ್ಯ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಅನಾವಶ್ಯಕ ಸಮಸ್ಯೆಗಳು ನಿಮ್ಮನ್ನು ಭಾದಿಸಲಿವೆ. ಕೆಲವರು ನಿಮ್ಮ ವಿಶ್ವಾಸದ ದುರುಪಯೋಗ ಮಾಡಿಯಾರು. ಆರ್ಥಿಕವಾಗಿ ಹಣಕಾಸಿನ ಸಮಸ್ಯೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಉದಾಸೀನತೆ ಇರುವುದು. ಧೈರ್ಯದಿಂದ ಕಾರ್ಯ ಪ್ರಗತಿ, ಆರೋಗ್ಯ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ.

ತುಲಾರಾಶಿ
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನು ಸಮಚಿತ್ತರಾಗಿ ವರ್ತಿಸಬೇಕಾದೀತು. ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ವೈಯಕ್ತಿಕ ಕಾರ್ಯಗಳನ್ನು ಮಾಡಲು ನೀವೇ ಮುನ್ನಡೆಯಬೇಕು. ಉದ್ಯೋಗದಲ್ಲಿ ನಿರಾಸಕ್ತಿ, ಹಣಕಾಸು ಸಂಕಷ್ಟ, ಮಾನಸಿಕ ವ್ಯಥೆ, ಮಕ್ಕಳೊಂದಿಗೆ ಕಲಹ, ಹಣಕಾಸು ವಿಚಾರದಲ್ಲಿ ವಾಗ್ವಾದ.

ವೃಶ್ಚಿಕರಾಶಿ
ಕಾಲು ನೋವು, ದೇಹಾಲಸ್ಯ, ಗ್ಯಾಸ್ಟ್ರಿಕ್ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ಪ್ರಯಾಣದಲ್ಲಿ ವಸ್ತು ಕಳವು, ಕಬ್ಬಿಣದಿಂದ ಪೆಟ್ಟಾಗುವ ಸಾಧ್ಯತೆ, ಸಾಂಸಾರಿಕ ಸಮಸ್ಯೆಗಳು ಹೆಚ್ಚಲಿವೆ. ಅದರೊಂದಿಗೆ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಆಗಾಗ ಆರ್ಥಿಕವಾಗಿ ಹಣಕಾಸಿನ ಸಮಸ್ಯೆ ಭಾದಿಸಲಿದೆ. ನಿಮ್ಮ ನಿಲುವಿಗೆ ನೀವೇ ಅಂಟಿಕೊಳ್ಳದಿರಿ. ಉದ್ಯೋಗದಲ್ಲಿ ಪ್ರಗತಿ, ಸರ್ಕಾರಿ-ರಾಜಕೀಯ ಕ್ಷೇತ್ರವರಿಗೆ ಅನುಕೂಲ, ಗುತ್ತಿಗೆದಾರರಿಗೆ ಲಾಭ.

ಧನಸ್ಸುರಾಶಿ
ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸದೆ ಪೂರ್ಣಗೊಳಿಸಿರಿ. ವಿದ್ಯಾರ್ಥಿಗಳಿಗೆ ಕೆಲಸಗಳಲ್ಲಿ ಉತ್ಸಾಹ ಕಂಡು ಬರಲಿದೆ. ಆಗಾಗ ಸಂಚಾರದಲ್ಲಿ ಧನವ್ಯಯವಾಗಲಿದೆ. ಸಮಸ್ಯೆಗಳನ್ನು ಎದುರಿಸಿರಿ. ವಿಪರೀತ ರಾಜಯೋಗ, ತಂದೆಯಿಂದ ಧನಾಗಮನ, ಉದ್ಯೋಗದಲ್ಲಿ ಒತ್ತಡ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಗೊಂದಲ, ಮರೆವಿನ ಸಮಸ್ಯೆ, ನೀವಾಡುವ ಮಾತಿನಿಂದ ಸಮಸ್ಯೆ.

ಮಕರರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ಆತ್ಮೀಯರೊಂದಿಗೆ ವೈಮನಸ್ಸು, ವಿರೋಧಿಗಳು ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಹಣಿಯಲು ಯತ್ನಿಸುವರು ಯಾ ನಿಮಗೆ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಲಿದ್ದಾರೆ. ಎಲ್ಲಾ ವಿಚಾರಗಳಲ್ಲಿ ಜಾಗ್ರತೆಯಿಂದ ಮನ್ನಡೆಯಿರಿ. ಮಿತ್ರರಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸಂಗಾತಿಗೆ ಆಲಸ್ಯ-ಬೇಜವಾಬ್ದಾರಿ, ಆತುರ ಸ್ವಭಾವದಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಕುಂಭರಾಶಿ
ಸಾಂಸಾರಿಕವಾಗಿ ಖರ್ಚುವೆಚ್ಚಗಳು ಹೆಚ್ಚಿಸಲಿವೆ. ಎಲ್ಲವೂ ಇಂದು ನಿಮ್ಮ ವಿರೋಧವಾಗಿ ವರ್ತಿಸುವಂತೆ ನಿಮಗೆ ಭಾಸವಾಗಲಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಗಮನ ಹರಿಸುವುದು. ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಕೆಲಸದವರ ಜೊತೆ ಮನಃಸ್ತಾಪ, ಉದ್ಯೋಗಕ್ಕಾಗಿ ಆಕಸ್ಮಿಕ ಸಾಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಒತ್ತಡದಿಂದ ನಿದ್ರಾಭಂಗ.

ಮೀನರಾಶಿ
ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಸಂಕಷ್ಟ, ಭಾವನೆಗಳಿಗೆ ಧಕ್ಕೆ, ಲಾಭ ಪ್ರಮಾಣ ಅಧಿಕ, ಸೇವಕರಿಂದ ಅನುಕೂಲ, ಕೌಟುಂಬಿಕವಾಗಿ ಹಂತ ಹಂತವಾಗಿ ಮನಸ್ಸಿಗೆ ನೆಮ್ಮದಿ ಕಂಡು ಬಂದೀತು. ಸಾಂಸಾರಿಕವಾಗಿ ಹೊಣೆಗಾರಿಕೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಉತ್ಸಾಹ ಕಂಡು ಬರುವುದು. ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಸಹಾಯ, ಬಂಧುಗಳಿಂದ ಅನುಕೂಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular