ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 08-03-2020

ನಿತ್ಯಭವಿಷ್ಯ : 08-03-2020

- Advertisement -

ಮೇಷರಾಶಿ
ದೇವತಾನುಗ್ರಹದಿಂದ ಹೆಚ್ಚಿನ ತೊಂದರೆಗಳು ಉಪಶಮನವಾಗಲಿವೆ.ಹಣಕಾಸು ಉತ್ತಮ, ಉತ್ತಮ ಅವಕಾಶಗಳು ಒದಗುವುದು, ಮಿತ್ರರಿಂದ ಸಹಾಯ, ಧರ್ಮಕಾರ್ಯಾಸಕ್ತಿ, ಹಿರಿಯರಿಂದ ಹಿತವಚನ, ದುಷ್ಟರಿಂದ ದೂರವಿರಿ. ನಿಮ್ಮ ನಿರೀಕ್ಷೆಗಳು ಈಡೇರಲಿವೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳಿರುತ್ತವೆ.

ವೃಷಭರಾಶಿ
ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ನೆಮ್ಮದಿ ತಂದೀತು. ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ. ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ಮಾತೃ ಪಿತೃರಿಂದ ವಾತ್ಸಲ್ಯ, ಧೈರ್ಯದಿಂದ ಕಾರ್ಯಗಳನ್ನು ಮಾಡುವಿರಿ, ಪತ್ನಿಗೆ ಅನಾರೋಗ್ಯ, ಶತೃಭಾದೆ, ಸಮಾಜದಲ್ಲಿ ಗೌರವ ಸ್ಥಾನಮಾನಗಳಿಂದ ನಿಮ್ಮನ್ನು ಸಂತುಷ್ಟ ಗೊಳಿಸಲಿದ್ದಾರೆ.

ಮಿಥುನರಾಶಿ
ಅನಾರೋಗ್ಯ ನಿಮ್ಮನ್ನು ಕಾಡಲಿದೆ. ಉದ್ಯೋಗ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಅವಿವಾಹಿತರಿಗೆ ಕಂಕಣಬಲವಿದೆ. ಆರ್ಥಿಕವಾಗಿ ಮಿಶ್ರ ಫ‌ಲವಿದೆ. ವಿದ್ಯಾರ್ಥಿಗೆ ಹೆಚ್ಚಿನ ಪ್ರಯತ್ನಬಲ ಅಗತ್ಯವಿರುತ್ತದೆ. ದೂರ ಸಂಚಾರದಲ್ಲಿ ಅಪಘಾತ ಭೀತಿ ಇದೆ. ಸಾಂಸಾರಿಕವಾಗಿ ಕಿರಿಕಿರಿ. ದಿನಾಂತ್ಯಕ್ಕೆ ಶುಭಫಲ.

ಕಟಕರಾಶಿ
ಬಹು ಕಾಲದ ತಾಳ್ಮೆ ಸದ್ಯದಲ್ಲೇ ಫ‌ಲ ನೀಡಲಿದೆ. ವ್ಯಾಪಾರದಲ್ಲಿ ಲಾಭ, ಸಾಲ ಮರುಪಾವತಿ, ಆಪ್ತರಿಂದ ತೊಂದರೆ, ಅನಿರೀಕ್ಷಿತ ಶುಭವಾರ್ತೆ. ಅನಾರೋಗ್ಯ, ಶತ್ರುಭಾದೆ, ಶ್ರಮಕ್ಕೆ ತಕ್ಕ ಫಲ, ಉದ್ವೇಗ, ಇತರರನ್ನು ನಿಂದಿಸುವಿರಿ. ಕಂಕಣಬಲಕ್ಕೆ ಅಡೆತಡೆಗಳಿರುತ್ತವೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ವಿರಲಿ.

ಸಿಂಹರಾಶಿ
ವ್ಯಾಪಾರ ವ್ಯವಹಾರಗಳು ಲಾಭಕರವಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಮುನ್ನಡೆ ಗೋಚರಕ್ಕೆ ಬರುತ್ತದೆ. ಅಧಿಕ ತಿರುಗಾಟ, ಮನೆಯಲ್ಲಿ ಮತ್ತು ಕುಟುಂಬದಲ್ಲಿ ಶುಭಕಾರ್ಯಗಳ ಸಂಭ್ರಮ ತಂದೀತು. ಹಣದಲ್ಲಿ ದ್ರೋಹ, ಮನಃಕ್ಷೇಷಿ, ಗೃಹ ವಸ್ತುಗಳ ಖರೀದಿ, ಮಾತಿನ ಮೇಲೆ ನಿಗಾಯಿರಲಿ, ದಾಂಪತ್ಯದಲ್ಲಿ ಸಂತೊಷ.

ಕನ್ಯಾರಾಶಿ
ದುಡುಕಿನ ಕೆಲಸದಿಂದ ಕಾರ್ಯಗಳಿಗೆ ಭಂಗವಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ, ವಿದಾಭ್ಯಾಸದಲ್ಲಿ ಪ್ರಗತಿ, ತಾಳ್ಮೆಯಿಂದ ಕೆಲಸ ಮಾಡಿ. ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ. ತಾಳ್ಮೆಯಿಂದ ಅಸಾಧ್ಯವಾದುದನ್ನು ಸಾಧಿಸುವಿರಿ. ಬಂಧುಗಳೊಡನೆ ಅನಾವಶ್ಯಕ ನಿಷ್ಠುರಕ್ಕೆ ಕಾರಣವಾಗುತ್ತದೆ.

ತುಲಾರಾಶಿ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಪರಸ್ಥಳವಾಸ, ವಿರೋಧಿಗಳಿಂದ ತೊಂದರೆ, ಸ್ತ್ರೀಲಾಭ, ಆಕಸ್ಮಿಕ ಖರ್ಚು, ನಂಬಿಕೆ ದ್ರೋಹ, ಗುಪ್ತವಿದ್ಯೆಗಳಲ್ಲಿ ಆಸಕ್ತಿ, ಮನಃಸ್ತಾಪ. ಆರ್ಥಿಕವಾಗಿ ಹೆಚ್ಚಿನ ಹಿಡಿತ ಸಾಧಿಸಿರಿ. ದಿನಾಂತ್ಯ ಕಿರಿಕಿರಿ ಇದೆ.

ವೃಶ್ಚಿಕರಾಶಿ
ವ್ಯಾಪಾರ ವ್ಯವಹಾರಗಳು ಉತ್ತಮ ಪ್ರಗತಿ ತೋರಿಸಲಿವೆ. ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯಾನುಕೂಲ,ಶ್ರೀದೇವರ ಅನುಗ್ರಹದಿಂದ ನಿಮ್ಮ ಮನೋ ಕಾಮನೆಗಳು ಒಂದೊಂದಾಗಿ ನೆರವೇರುತ್ತವೆ. ವಿನಾಕಾರಣ ದ್ವೇಷ, ಮಕ್ಕಳಿಂದ ನಿಂದನೆ, ನೆಮ್ಮದಿ ಇಲ್ಲದ ಜೀವನ, ಸಂತರಿಗೆ ಸಹಾಯ ಮಾಡಿ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಶುಭವಾರ್ತೆ ಖುಷಿಯನ್ನು ಕೊಡುತ್ತದೆ. ಆರ್ಥಿಕವಾಗಿ ಹೆಚ್ಚಿನ ಹಿಡಿತ ಸಾಧಿಸಿರಿ. ಉದ್ಯೋಗದಲ್ಲಿ ತೃಪ್ತಿ, ಯತ್ನ ಕಾರ್ಯಾನುಕೂಲ, ಹಿತ ಶತೃಭಾದೆ, ದೂರ ಪ್ರಯಾಣ, ಮನೆಗೆ ಅತಿಥಿಗಳ ಆಗಮನ. ಸಾಲಭಾದೆ, ಬಂಧುಗಳಿಂದ ಸಹಕಾರ, ಚಂಚಲ ಮನಸ್ಸು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ.

ಮಕರರಾಶಿ
ಉದ್ಯೋಗರಂಗದಲ್ಲಿ ಅನಿರೀಕ್ಷಿತ ತಿರುವು ಅಚ್ಚರಿ ತರಲಿದೆ. ಸಾಂಸಾರಿಕವಾಗಿ ಮನೆಯಲ್ಲಿ ಸಮಾಧಾನ, ರಾಜಕೀಯದಲ್ಲಿ ತೊಂದರೆ, ಪ್ರಯತ್ನ ಬಲದಿಂದ ಕಾರ್ಯಗಳಲ್ಲಿ ಜಯ. ಸಂಗೀತ ಕಲೆಗಳಲ್ಲಿ ಆಸಕ್ತಿ, ಮಹಿಳಾ ಉದ್ಯಮಿಗಳಿಗೆ ಅನುಕೂಲ. ದೂರ ಸಂಚಾರದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿವೆ.

ಕುಂಭರಾಶಿ
ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ನಿಶ್ಚಿತ ರೂಪದಲ್ಲಿ ಉತ್ತಮ ಫ‌ಲಿತಾಂಶ ಸಿಗಲಿದೆ. ವೃತ್ತಿರಂಗದಲ್ಲಿ ಮುಂಭಡ್ತಿ ಕಂಡು ಬಂದೀತು. ವ್ಯಾಪಾರಗಳಲ್ಲಿ ನಷ್ಟ, ಕಾರ್ಯಗಳಲ್ಲಿ ನಿಧಾನಗತಿ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಖರ್ಚು ತಂದೀತು. ಮನೆಯಲ್ಲಿ ಕಲಹ, ಆರ್ಥಿಕ ಬಿಕ್ಕಟ್ಟು, ಸಣ್ಣ ವಿಷಯಗಳಿಂದ ಆತಂಕ.

ಮೀನರಾಶಿ
ನಿರೀಕ್ಷಿತ ಕಾರ್ಯಸಾಧನೆಗಳಿಗೆ ಹೆಚ್ಚಿನ ಪ್ರಯತ್ನಬಲ ಅಗತ್ಯ. ನೌಕರಿಯಲ್ಲಿ ನಿಷ್ಠೂರ, ಬಂಧುಗಳ ಭೇಟಿ, ಅಧಿಕ ತಿರುಗಾಟ, ಶತ್ರುಭಾದೆ, ನಯವಾದ ಮಾತುಗಳಿಂದ ಕೆಲಸ, ಆಸ್ತಿ ವಿಷಯಗಳಲ್ಲಿ ಮೌನ ಉತ್ತಮ. ಬರಬೇಕಾದ ಹಣ ಕೈ ಸೇರಲಿದೆ. ಅನಿರೀಕ್ಷಿತ ರೂಪದಲ್ಲಿ ಧನಾಗಮನ, ಹಿರಿಯರ ಆರೋಗ್ಯದ ಬಗ್ಗೆ ಆಸ್ಪತ್ರೆಯ ದರ್ಶನವಿದೆ. ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ ಶುಭವಾರ್ತೆ ತಂದೀತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular