ನಿತ್ಯ ಭವಿಷ್ಯ : 07-05-2020

0

ಮೇಷರಾಶಿ
ಸ್ತ್ರೀಯರಿಂದ ಧನ ಸಂಪತ್ತು ಅನುಕೂಲ, ಪಿತ್ರಾರ್ಜಿತ ಸ್ವತ್ತು ಒಲಿದು ಬರುವುದು, ತಂದೆಯಿಂದ ಬಾಂಧವ್ಯ, ಸಹಕಾರ, ದಾಯಾದಿಗಳಿಂದ ನೋವು, ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ, ಸಲಹೆ ಸೂಚನೆಗಳಿಗೆ ಉತ್ತಮ ಪ್ರತಿಕ್ರಿಯೆ ತೋರಿಬರಲಿದೆ. ಅನಿರೀಕ್ಷಿತ ಧನಾಗಮನ ಅಚ್ಚರಿ ತಂದೀತು. ಧಾರ್ಮಿಕ ಕ್ಷೇತ್ರದ ಸಂದರ್ಶನವಿದೆ. ದಿನಾಂತ್ಯ ಕಿರು ಸಂಚಾರವಿದೆ. ಪುಣ್ಯಕ್ಷೇತ್ರ ದರ್ಶನ ಭಾಗ್ಯ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಈ ದಿನ ಶುಭ ಫಲ ಯೋಗ.

ವೃಷಭರಾಶಿ
ರಾಜಕೀಯ ವರ್ಗದವರಿಗೆ ತಮ್ಮ ಕ್ಷೇತ್ರದಲ್ಲಿ ಪ್ರಶಂಸೆ ಸಲ್ಲಲಿದೆ. ಉದ್ಯೋಗ ರಂಗದಲ್ಲಿ ಮುನ್ನಡೆ ತೋರಿಬರುತ್ತದೆ. ಸರಕಾರಿ ಕೆಲಸಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ . ಯೋಗ್ಯ ವಯಸ್ಕರಿಗೆ ಕಂಕಣಬಲವಿದೆ. ಸಂಬಂಧಿಕರೇ ಶತ್ರುಗಳಾಗುವರು, ಪ್ರಯಾಣದಲ್ಲಿ ಸಂಕಷ್ಟ, ಅಮೂಲ್ಯ ವಸ್ತು, ಹಣ ಕಳೆದುಕೊಳ್ಳುವ ಸಾಧ್ಯತೆ, ಕುಟುಂಬದಲ್ಲಿ ಶತ್ರುತ್ವ, ಆಕಸ್ಮಿಕ ಅವಘಡ, ಅಪಘಾತವಾಗುವ ಸಾಧ್ಯತೆ, ಗೌರವಕ್ಕೆ ಧಕ್ಕೆ.

ಮಿಥುನರಾಶಿ
ಮಕ್ಕಳಿಂದ ಧನ ಸಹಾಯ, ದುಶ್ಚಟಗಳಿಂದ ಸಮಸ್ಯೆ ತಂದುಕೊಳ್ಳುವಿರಿ, ಧಾರ್ಮಿಕ ಕ್ಷೇತ್ರದ ಸಂದರ್ಶನಕ್ಕಾಗಿ ಧನವ್ಯಯವಾದೀತು. ಹಿರಿಯರನ್ನು ಸುಧಾರಿಸಿಕೊಂಡು ಹೋಗುವುದು ನಿಮ್ಮ ಕರ್ತವ್ಯವಾಗಿರುತ್ತದೆ. ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರವಾಗಿರುತ್ತದೆ. ಋಣ ರೋಗ ಬಾಧೆ, ಹಣಕಾಸು ನಷ್ಟ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಪ್ರಗತಿ.

ಕಟಕರಾಶಿ
ಸೈಟ್ ಖರೀದಿ ಗೃಹ ನಿರ್ಮಾಣ ವಿಚಾರದಲ್ಲಿ ನಿರಾಸೆ, ಅಜೀರ್ಣ ಸಮಸ್ಯೆ, ಶರೀರದಲ್ಲಿ ನೋವು, ಉದರ ಬಾಧೆ, ಹಾರ್ಮೋನ್ಸ್ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಧರ್ಮ ಕಾರ್ಯ, ಗುರು ದರ್ಶನಕ್ಕೆ ಮನಸ್ಸು, ವೃತ್ತಿರಂಗದಲ್ಲಿ ಅನಾವಶ್ಯಕ ತಕರಾರಿನಿಂದ ಬರುವ ಸಮಸ್ಯೆಗಳನ್ನು ಉಪೇಕ್ಷಿಸಿರಿ. ದಿನಾಂತ್ಯದಲ್ಲಿ ಕಿರು ಸಂಚಾರವಿರುತ್ತದೆ. ವೃತ್ತಿ ನಿರತರಿಗೆ ಅಸಾಮಾಧಾನದ ವಾತಾವರಣ ಕಂಡುಬರುತ್ತದೆ. ಕಾರ್ಮಿಕರಿಗೆ ಶುಭವಾರ್ತೆ.

ಸಿಂಹರಾಶಿ
ಪ್ರಯಾಣದಲ್ಲಿ ತೊಂದರೆ, ನಷ್ಟ ಮಾಡಿಕೊಳ್ಳುವ ಸಾಧ್ಯತೆ, ಕುಟುಂಬದಲ್ಲಿ ವೈಮನಸ್ಸು, ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉತ್ತಮ ಫ‌ಲಿತಾಂಶ ಸಿಗಲಿದೆ. ದೂರದ ಊರಿನಿಂದ ಅತಿಥಿಗಳು ಬಂದಾರು. ವಿದ್ಯಾ ಕ್ಷೇತ್ರದವರಿಗೆ ಆದಾಯ ಮಾರ್ಗಗಳು ಗೋಚರಕ್ಕೆ ಬಂದಾವು. ದಿನಾಂತ್ಯ ಶುಭವಾರ್ತೆ. ಸ್ತ್ರೀ ವಿಚಾರದಲ್ಲಿ ಕಿರಿಕಿರಿ, ಗೃಹ, ಸ್ಥಳ ಬದಲಾವಣೆಗೆ ಮನಸ್ಸು, ಅನಿರೀಕ್ಷಿತ ಸೋಲು, ಆತಂಕ.

ಕನ್ಯಾರಾಶಿ
ಸಹೋದರನಿಂದ ಅನುಕೂಲ, ಮಿತ್ರರಿಂದ ಧನ ಲಾಭ, ಸಂಗಾತಿಯ ಮಾತಿನಿಂದ ನೋವು, ಸ್ಥಿರಾಸ್ತಿ-ವಾಹನದಿಂದ ಅನುಕೂಲ, ಅಗತ್ಯ ಕಾರ್ಯಗಳಿಗೆ ವಿಳಂಬ ಕಂಡು ಬಂದಾವು. ಧಾರ್ಮಿಕ ಕ್ಷೇತ್ರದಲ್ಲಿ ಭಾಗವಹಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಭಾಗ್ಯ ಕಂಡುಬರಲಿದೆ. ರೈತ ವರ್ಗದವರಿಗೆ ಅಗತ್ಯದ ಸೌಲಭ್ಯಗಳು ದೊರಕಲಿವೆ. ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ಆತ್ಮೀಯರಿಂದಲೇ ಅಭಿವೃದ್ಧಿ ಕುಂಠಿತ, ದಾಯಾದಿಗಳಿಂದ ತೊಂದರೆ.

ತುಲಾರಾಶಿ
ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಶರೀರದಲ್ಲಿ ನೋವು, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗ ನಿಮಿತ್ತ ಪ್ರಯಾಣ, ವೈಯಕ್ತಿಕ ಆರೋಗ್ಯಭಾಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಆದರೂ ಆಗಾಗ ಕಾರ್ಯ ಒತ್ತಡಗಳಿಂದ ತಲೆಬಿಸಿಯಾದೀತು. ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಜಾಗ್ರತೆ ವಹಿಸಿರಿ. ಕಾರ್ಮಿಕರು, ಬಾಡಿಗೆದಾರರಿಂದ ನಷ್ಟ, ಸಾಲ ಬಾಧೆ ಹೆಚ್ಚಾಗುವುದು.

ವೃಶ್ಚಿಕರಾಶಿ
ದೂರ ಪ್ರಯಾಣ, ಅಧಿಕ ಖರ್ಚು, ಮಕ್ಕಳಿಂದ ನಷ್ಟ, ಸಂತಾನ ಸಮಸ್ಯೆ, ಭವಿಷ್ಯದ ಬಗ್ಗೆ ಚಿಂತೆ, ಯೋಚನೆಯಿಂದ ನಿದ್ರಾಭಂಗ, ಸಮಸ್ಯೆಗಳಿಗೆ ಜವಾಬ್ದಾರಿಯುತವಾಗಿ ಸ್ಪಂದಿಸಿರಿ. ಉದ್ಯೋಗಿಗಳಿಗೆ ಅನಾವಶ್ಯಕವಾಗಿ ಸಹೋದ್ಯೋಗಿ ಗಳಿಂದ ಕಿರಿಕಿರಿ ಇದೆ. ಸಾಂಸಾರಿಕವಾಗಿ ಸ್ಥಿತಿಗತಿಗಳು ಅಭಿವೃದ್ಧಿ ದಾಯಕವಾದೀತು. ಆರೋಗ್ಯದಲ್ಲಿ ಜಾಗ್ರತೆ. ಅಧಿಕವಾದ ಉಷ್ಣ, ತಲೆನೋವು, ಉಸಿರಾಟದ ಸಮಸ್ಯೆ ಹೆಚ್ಚು, ತಂದೆಯಿಂದ ನಷ್ಟ-ಕಿರಿಕಿರಿ.

ಧನಸ್ಸುರಾಶಿ
ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಲಾಭ, ಸಮಸ್ಯೆಗಳಿಗೆ ಜವಾಬ್ದಾರಿಯುತವಾಗಿ ಸ್ಪಂದಿಸಿರಿ. ಉದ್ಯೋಗಿಗಳಿಗೆ ಅನಾವಶ್ಯಕವಾಗಿ ಸಹೋದ್ಯೋಗಿ ಗಳಿಂದ ಕಿರಿಕಿರಿ ಇದೆ. ಸಾಂಸಾರಿಕವಾಗಿ ಸ್ಥಿತಿಗತಿಗಳು ಅಭಿವೃದ್ಧಿ ದಾಯಕವಾದೀತು. ಆರೋಗ್ಯದಲ್ಲಿ ಜಾಗ್ರತೆ. ವಿಶ್ರಾಂತಿ ವೇತನ ಲಭಿಸುವುದು, ಮಕ್ಕಳಿಂದ ಅನುಕೂಲ, ಸೈಟ್, ವಾಹನದಿಂದ ಲಾಭ, ಮಾತೃವಿನಿಂದ ಅನುಕೂಲ.

ಮಕರರಾಶಿ
ಮಕ್ಕಳಿಂದ ನಷ್ಟ, ಸಂಗಾತಿಯಿಂದ ಕಿರಿಕಿರಿ, ವೈವಾಹಿಕ ಜೀವನದಲ್ಲಿ ವೈಮನಸ್ಸು, ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ, ದೈಹಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲೇ ಬೇಕಾಗುತ್ತದೆ. ಮುಖ್ಯವಾಗಿ ನಿಮ್ಮ ಸಮಯೋಚಿತ ಪ್ರಜ್ಞೆ ಸದಾ ಜಾಗ್ರತೆಯಲ್ಲಿರಲಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಹೋಗಲಿದೆ. ವಿದ್ಯಾರ್ಥಿಗಳಿಗೆ ಅವಕಾಶ ದೊರಕಲಿದೆ. ದೂರ ಪ್ರದೇಶಕ್ಕೆ ಹೋಗುವ ಪ್ರಸಂಗ. ಹಣಕಾಸು ಸಮಸ್ಯೆ, ನೆಮ್ಮದಿ ಇಲ್ಲದ ಜೀವನ.

ಕುಂಭರಾಶಿ
ಪ್ರಯಾಣ ರದ್ದಾಗುವುದು, ಕೈಕಾಲು, ತಲೆ ನೋವು, ಸಂತಾನ ದೋಷ, ಮಾಸದೋಷ ಕಾಡುವುದು, ತಂದೆಯಿಂದ ಲಾಭ, ಧಾರ್ಮಿಕ ಕಾರ್ಯಗಳಿಂದ ಧನವ್ಯಯ ಕಂಡುಬಂದೀತು. ಸಾಂಸಾರಿಕವಾಗಿ ಕೆಲವೊಂದು ಬದಲಾವಣೆಗೆ ಸಿದ್ಧರಾಗಬೇಕಾದೀತು. ಆರ್ಥಿಕ ಸ್ಥಿತಿ ಏರು ಪೇರಾಗಲಿದೆ. ನ್ಯಾಯಾಲಯದ ಕೆಲಸದಲ್ಲಿ ಜಯವು ಖಚಿತ. ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲ, ಸಹೋದರರಿಂದ ಸಹಕಾರ, ಪತ್ರ ವ್ಯವಹಾರಗಳಿಂದ ಧನ ಲಾಭ.

ಮೀನರಾಶಿ
ಆಕಸ್ಮಿಕ ಧನಾಗಮನ, ಗೌರವ, ಸನ್ಮಾನ ಪ್ರಾಪ್ತಿ, ಪ್ರಶಂಸೆ, ಹೊಗಳಿಕೆ ಭಾಜನರಾಗುವಿರಿ, ಉದ್ಯೋಗರಂಗದಲ್ಲಿ ಮುನ್ನಡೆಯಿದ್ದರೂ ಕಿರಿಕಿರಿ ತಪ್ಪದು. ಆದಾಯದ ಮೂಲಗಳು ಕಾರ್ಯ ಸಾಧನೆಗೆ ಅನುಕೂಲವಾಗಲಿವೆ. ಉದ್ಯೋಗಿಗಳಿಗೆ ಸ್ಥಾನ ಬದಲಾವಣೆಯ ಸೂಚನೆ ತಂದೀತು. ಜಾಗ್ರತೆ ಮಾಡಿರಿ. ಆಕಸ್ಮಿಕ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೈವನಿಂದನೆ ಮಾಡುವ ಸಂದರ್ಭ.

Leave A Reply

Your email address will not be published.