Accident news : ಐರಾವತ ಬಸ್‌ ಟೆಂಪೋ ನಡುವೆ ಭೀಕರ ಅಪಘಾತ : 30ಕ್ಕೂ ಅಧಿಕ ಮಂದಿಗೆ ಗಾಯ

ಕಾರವಾರ:(Accident news) ಐರಾವತ ಬಸ್‌ ಹಾಗೂ ಟೆಂಪೋ ನಡುವೆ ನಡೆದ ಭೀಕರ ಅಪಘಾತದಲ್ಲಿ 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಘಾಟ್‌ ನಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

(Accident news) ಕಾರವಾರದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಐರಾವತಾ ಬಸ್‌ ಶಿರಾಲಿ ಘಾಟ್‌ ಬಳಿಗೆ ಬರುತ್ತಿದ್ದಂತೆಯೆ ವೇಗವಾಗಿ ಚಲಿಸುತ್ತಿದ್ದ ಟೆಂಪೋ ಗೆ ಢಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಒಟ್ಟು ೫೦ ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಗೆ ಬಸ್ಸಿನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಐರಾವತ ಬಸ್ಸಿನ ಮುಂಭಾಗದ ಗಾಜು ಪುಡಿ ಪುಡಿಯಾಗಿದೆ.

ಇದನ್ನೂ ಓದಿ:Madhunandan : 20 ವರ್ಷಗಳ ಕನಸು ಕೊನೆಗೂ ನನಸು – ನಟನಾಗಿ ಬಣ್ಣ ಹಚ್ಚಿದ ಪಶು ವೈದ್ಯ ಮಧುನಂದನ್

ಇದನ್ನೂ ಓದಿ:Mallikarjun Kharge : ಕಾಂಗ್ರೆಸ್‌ ಅಧ್ಯಕ್ಷರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ : ಭವಿಷ್ಯ ನುಡಿದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ

ಇದನ್ನೂ ಓದಿ:World Vegetarian Day : ವಿಶ್ವ ಸಸ್ಯಹಾರಿ ದಿನಾಚರಣೆ : ಸಸ್ಯಾಹಾರದಿಂದ ಉತ್ತಮ ಆರೋಗ್ಯ

ಇದನ್ನೂ ಓದಿ:Kannada Bhavan in Goa :ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಗಾದೆ

ಗಾಯಾಳುಗಳನ್ನು ಭಟ್ಕಳದ ಸರ್ಕಾರಿ ಆಸ್ಫತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಈ ಕುರಿತು ಮುರುಡೇಶ್ವರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಾಲಕನ ಅಜಾಗರೂಕತೆ ಹಾಗೂ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಶಿರಾಲಿಘಾಟ್‌ ಅಪಘಾತ ವಲಯ ಎಂದು ಕರೆಯಿಸಿಕೊಳ್ಳುತ್ತಿದ್ದು, ವಾಹನ ಚಾಲಕರು ನಿರ್ಲಕ್ಷ್ಯವನ್ನು ವಹಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನಿನ್ನ ಮೈಬಣ್ಣ ಕಪ್ಪು ಎಂದು ಹೀಯಾಳಿಸಿದ ಪತಿಯ ಜನನಾಂಗವನ್ನೇ ಕತ್ತರಿಸಿ ಕೊಂದ ಪತ್ನಿ

ಛತ್ತೀಸಗಢ: ಕಪ್ಪು ಹಾಗೂ ಬಿಳಿ ಬಣ್ಣದ ಚರ್ಮದಲ್ಲಿ ತಾರತಮ್ಯ ಮಾಡುವ ಪದ್ಧತಿ ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಕಾಲ ಎಷ್ಟೇ ಮುಂದುವರಿದಿದ್ದರೂ ಸಹ ಈಗಲೂ ಕೂಡ ಕಪ್ಪು ಚರ್ಮದವರನ್ನು ಅಪಹಾಸ್ಯ ಮಾಡುವ ಅನೇಕರು ನಮ್ಮ ನಡುವೆ ಇದ್ದಾರೆ. ಇದೇ ರೀತಿ ತನ್ನ ಕಪ್ಪನೆಯ ಮೈ ಬಣ್ಣದ ಬಗ್ಗೆ ಪದೇ ಪದೇ ಅಪಹಾಸ್ಯ ಮಾಡುತ್ತಿದ್ದ ಪತಿಯ ನಡವಳಿಕೆಯಿಂದ ಮನನೊಂದಿದ್ದ ಪತ್ನಿ ಕೊಡಲಿಯಿಂದ ಕೊಚ್ಚಿ ಪತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆಯು ಛತ್ತೀಸಗಢದ ದುರ್ಗ್​ ಜಿಲ್ಲೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ನಲವತ್ತು ವರ್ಷದ ಅನಂತ್​ ಸೋನ್ವಾನಿ ಎಂದು ಗುರುತಿಸಲಾಗಿದೆ. ಪತಿಯನ್ನು ಕೊಂದ ಆರೋಪದ ಅಡಿಯಲ್ಲಿ ಪತ್ನಿ ಸಂಗೀತಾ ಸೋನ್ವಾನಿ(30) ಎಂಬಾಕೆಯನ್ನು ಮಂಗಳವಾರ ಬಂಧಿಸಿದ್ದೇವೆ ಎಂದು ಪೊಲೀಸ್​ ಉಪವಿಭಾಗಾಧಿಕಾರಿ ದೇವಾಂಶ್​ ರಾಥೋಡ್​ ಮಾಹಿತಿ ನೀಡಿದ್ದಾರೆ .ಪ್ರಾಥಮಿಕ ತನಿಖೆಯಲ್ಲಿ ಪತಿ ಅನಂತ್​ ಸೋನ್ವಾನಿ ಪದೇ ಪದೇ ತನ್ನ ಪತ್ನಿ ಸಂಗೀತಾ ಸೋನ್ವಾನಿಗೆ ಕುರೂಪಿ ಎಂದು ಹೀಯಾಳಿಸುತ್ತಿದ್ದ ಮಾತ್ರವಲ್ಲದೇ ಆಕೆಯ ಕಪ್ಪು ಚರ್ಮದ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಅನೇಕ ಬಾರಿ ಪತಿ – ಪತ್ನಿ ನಡುವೆ ಕಲಹ ಏರ್ಪಟ್ಟಿತ್ತು ಎನ್ನಲಾಗಿದೆ.

Terrible accident between Airavata Bus Tempo: More than 30 injured in

Comments are closed.