ಭಾನುವಾರ, ಏಪ್ರಿಲ್ 27, 2025
Homedistrict NewsKrishna Janmashtami: ಹೇರಾಡಿ ಬಾರ್ಕೂರು ನಲ್ಲಿ  ಮುದ್ದುರಾಧಾ  ಮತ್ತು ಮುದ್ದುಕೃಷ್ಣ ಸ್ಪರ್ಧೆ

Krishna Janmashtami: ಹೇರಾಡಿ ಬಾರ್ಕೂರು ನಲ್ಲಿ  ಮುದ್ದುರಾಧಾ  ಮತ್ತು ಮುದ್ದುಕೃಷ್ಣ ಸ್ಪರ್ಧೆ

- Advertisement -

Krishna Janmashtami: ಶ್ರೀ ವಿಧ್ಯೇಶ  ವಿದ್ಯಾಮಾನ್ಯ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ನಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ  LKG.ಮತ್ತು  UKG  ವಿದ್ಯಾರ್ಥಿ ಗಳಿಗಾಗಿ  ಮುದ್ದುಕೃಷ್ಣ  ಮತ್ತು ಮುದ್ದುರಾಧಾ ವೇಷ ಸ್ಪರ್ಧೆ ಯನ್ನು  ಏರ್ಪಡಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು  ಶಾಲಾ ಮುಖ್ಯೋಪಾಧ್ಯಾರಾದ ಪ್ರೀತಿ ರೇಖಾ  ವಹಿಸಿದ್ದರು,

SRSNHP ಶಾಲೆಯಲ್ಲಿ  ಮುಖ್ಯ ಶಿಕ್ಷಕಿ ಯಾಗಿ ನಿವೃತಿ ಹೊಂದಿದ ಗೌರಿ ಟೀಚರ್ ರವರು  ದೀಪ ಬೆಳಗಿಸುವ  ಮೂಲಕ   ಸ್ಪರ್ಧೆ ಯನ್ನು  ಉದ್ಘಾಟಿಸಿ,  “ಕೃಷ್ಣಮತ್ತು ರಾಧೆ ಯ ವೇಷ ತೊಟ್ಟ ಮಕ್ಕಳು ನಮ್ಮನ್ನು ದ್ವಾಪರ ಯುಗಕ್ಕೆ ಕರೆದುಕೊಂಡು ಹೋಗಿ  ಕೃಷ್ಣ ಮತ್ತು ರಾಧಾ ಲೀಲೆಯನ್ನು  ತೋರಿಸಿದರು “ಎಂದಿದ್ದಾರೆ.  ಸ್ಪರ್ಧೆ ಯ  ತೀರ್ಪುಗಾರ ರಾಗಿ ಉಡುಪಿಯ   ಮಾಸ್ಟರ್  ಡ್ರಾಮ್ ದ  ಭರತ ನಾಟ್ಯ ಶಿಕ್ಷಕಿ ಕಲ್ಯಾಣಿ ಮತ್ತು   S.V.V.N ಹೇರಾಡಿ  ಶಾಲೆಯಲ್ಲಿ  ಭರತ ನಾಟ್ಯ ಶಿಕ್ಷಕಿ ಯಾದ ಸ್ಮಿತಾ ಶಾಸ್ತ್ರೀ ರವರು ಕಾರ್ಯ ನಿರ್ವಹಿಸಿದ್ದರು.  ಶಾಲೆಯ 32 ಮಕ್ಕಳು  ವೇಷ ತೊಟ್ಟು   ರಂಜಿಸಿದರು. 

ಈ ಕಾರ್ಯಕ್ರಮ ವನ್ನು  ಶಾಲಾ ಶಿಕ್ಷಕಿ ರಾದ ಚಂದ್ರ ಕಲಾ, ಕುಸುಮ, ಶುಭ ರಾವ್, ಶಾಲಾ ಕಚೇರಿ  ಸಹಾಯಕರಾದ ನಾಗರಾಜ್ ಶೇರಿಗಾರ್  ಮತ್ತು  ಅಟೆಂಡರ್ ವಿಜಯ ಪೂಜಾರಿ ,  ಶಾಲಾ ಶಿಕ್ಷಕ, ಶಿಕ್ಷಕೇತರರು ಸಂಯೋಜನೆ ಮಾಡಿ ಸಹಕರಿಸಿದರು. ವಿದ್ಯಾರ್ಥಿ ಗಳಿಗೆ  ಮಾಸ್ತರ್ ಡ್ರಾಮಾ ದವರು  ವೇಷಭೂಷಣದ  ವ್ಯವಸ್ಥೆ  ಮಾಡಿಸಿದರು. ಭಾಗವಹಿಸಿದ  ಎಲ್ಲಾ  ಮಕ್ಕಳಿಗೂ  ವಿಶೇಷ ರೀತಿಯ ಉಡುಗೊರೆ ನೀಡಲಾಯಿತು.

ಇದನ್ನೂ ಓದಿ : Soaked Almonds : ಹೃದಯದ ಆರೋಗ್ಯ ಕಾಪಾಡಲು ಸೇವಿಸಿ, ನೀರಿನಲ್ಲಿ ನೆನೆಸಿದ ಬಾದಾಮಿ

ಇದನ್ನೂ ಓದಿ : WhatsApp Unread Chat Filter : ವಾಟ್ಸ್‌ಅಪ್‌ನ ಹೊಸ ಫೀಚರ್‌ ‘ಅನ್‌ರೀಡ್‌ ಚಾಟ್‌ ಫಿಲ್ಟರ್‌’ : ಇನ್ನು ಯಾವುದೇ ಚಾಟ್‌ ಕಳೆದು ಹೋಗೋ ಚಾನ್ಸೇ ಇಲ್ಲ

Krishna Janmashtami svvn School Barkur

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular