Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ

ದೆಹಲಿ : Student Kills Friend : ಶಾಲೆಗೆ ಹೋಗಲು ಇಷ್ಟವಿಲ್ಲದ ವಿದ್ಯಾರ್ಥಿಗಳು ತಮಗೆ ಹುಷಾರಿಲ್ಲ ಅಂತಾ ಮನೆಯಲ್ಲಿ ಸುಳ್ಳು ಹೇಳೋದನ್ನು ಕೇಳಿರ್ತೇವೆ. ಆದರೆ ದೆಹಲಿಯಲ್ಲಿ 10ನೇ ವಿದ್ಯಾರ್ಥಿಯೊಬ್ಬ ಶಾಲೆಯನ್ನು ಬಿಡಬೇಕು ಉದ್ದೇಶದಿಂದ ಗಾಜಿನ ಬಾಟಲಿಯಿಂದ 14 ವರ್ಷದ ಸ್ನೇಹಿತನ ಕತ್ತು ಸೀಳಿದಿದ್ದಾನೆ. ದೆಹಲಿ ಮೀರತ್​​ ಎಕ್ಸ್​ಪ್ರೆಸ್​ ವೇ ಬಳಿಯಲ್ಲಿ ಈ ಕೃತ್ಯವನ್ನು ಎಸಗಿದ ಬಳಿಕ 16 ವರ್ಷದ ವಿದ್ಯಾರ್ಥಿ ಸೀದಾ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ .

ಪೊಲೀಸರು ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ಬಾಲಕನು ನನಗೆ ವಿದ್ಯಾಭ್ಯಾಸ ಇಷ್ಟವಿರಲಿಲ್ಲ. ನಾನು ಹೇಗಾದರೂ ಮಾಡಿ ಶಾಲೆಯಿಂದ ತಪ್ಪಿಸಿಕೊಳ್ಳಬೇಕು ಎಂದು ಇಚ್ಛಿಸಿದ್ದೆ. ಹೀಗಾಗಿ ನಾನು ನನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದೇನೆ. ಇದರಿಂದ ನಾನು ಇನ್ಮುಂದೆ ಜೈಲಿನಲ್ಲಿ ಇರಬಹುದು ಎಂದು ಬಾಲಕ ಹೇಳಿದ್ದಾನೆ. ಈ ಬಗ್ಗೆ ಘಾಜಿಯಾಬಾದ್​​ ಗ್ರಾಮೀಣ ಪೊಲೀಸ್​ ಠಾಣೆಯ ಅಧೀಕ್ಷಕ ಇರಾಜ್​ ರಾಜಾ ಅಧಿಕೃತ ಮಾಹಿತಿ ನೀಡಿದ್ದಾರೆ.


ಆತ ಶಾಲೆಯನ್ನು ತ್ಯಜಿಸಲು ಯೋಚಿಸುತ್ತಿದ್ದ . ಆದರೆ ಇದಕ್ಕೆ ಪೋಷಕರು ಒಪ್ಪಿಗೆ ನೀಡರಲಿಲ್ಲ. ಶಾಲೆಗೆ ಹೋಗುವುದಕ್ಕಿಂತ ಜೈಲಿಗೆ ಹೋಗುವುದೇ ವಾಸಿ ಎಂದು ಯೋಚಿಸಿದ ಈ ಬಾಲಕ ತನ್ನ ಸ್ನೇಹಿತನನ್ನೇ ಕೊಲೆ ಮಾಡಲು ಪ್ಲಾನ್​ ರೂಪಿಸಿದ್ದ. ತಾನು ಜೈಲಿಗೆ ಹೋದರೆ ಶಾಲೆಗೆ ಹೋಗುವುದು ತಪ್ಪುತ್ತದೆ ಎನ್ನುವುದು ಬಾಲಕನ ಉದ್ದೇಶವಾಗಿತ್ತು. ಬಾಲಕನನ್ನು ನಾವು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದೇವೆ ಎಂದು ಪೊಲೀಸ್​ ಅಧಿಕಾರಿ ಇರಾಜ್​ ರಾಜಾ ಹೇಳಿದ್ದಾರೆ.


ಶಾಲೆಯಿಂದ ಮರಳಿದ ಬಳಿಕ ನಮ್ಮ ಪುತ್ರ ಸ್ನೇಹಿತನೊಂದಿಗೆ ಮನೆಯಿಂದ ಹೊರ ನಡೆದಿದ್ದ ಎಂದು ಕೊಲೆಯಾದ ಬಾಲಕನ ತಂದೆ ಹೇಳಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರ ಜೊತೆಯಲ್ಲಿ ನಾವು ಎಕ್ಸ್​​ಪ್ರೆಸ್​ ವೇ ಬಳಿ ತೆರಳಿದ ಬಳಿಕವೇ ನಮಗೆ ಈ ವಿಚಾರ ತಿಳಿದು ಬಂದಿದೆ. ನಮಗೆ ಸರ್ಕಾರದಿಂದ 50 ಲಕ್ಷ ರೂಪಾಯಿ ಪರಿಹಾರ ಹಾಗೂ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಕೊಲೆಯಾದ ಬಾಲಕನ ಸಹೋದರರಿಗೆ ಉಚಿತ ಶಿಕ್ಷಣವನ್ನು ನೀಡಬೇಕು ಎಂದು ಬಾಲಕನ ತಂದೆ ಆಗ್ರಹಿಸಿದ್ದಾರೆ.

ಇದನ್ನು ಓದಿ : satish jarkiholi : ಬಿಜೆಪಿಗರು ಸಾವರ್ಕರ್​ ಫೋಟೋ ಇಟ್ಟರೆ ಗಣೇಶೋತ್ಸವದಲ್ಲಿ ನಾವು ಅಂಬೇಡ್ಕರ್​ ಫೋಟೋ ಇಡ್ತೇವೆ : ಸತೀಶ್​ ಜಾರಕಿಹೊಳಿ

ಇದನ್ನೂ ಓದಿ : Ganesh festival in Shimoga : ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಲಭೆ ನಡೆಸಲು ಹುನ್ನಾರ : ಸಂಚಲನ ಮೂಡಿಸಿದ ಅನಾಮಧೇಯ ಪತ್ರ

UP: Class 10 Student Kills Friend As He Wanted to Avoid Going to School, Surrenders Before Police

Comments are closed.