KS Eshwarappa : ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡೋದನ್ನು ನೋಡಬೇಕು : ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ : KS Eshwarappa : ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡಿ ತೆರಳಿರುವ ವಿಚಾರ ಹಿಂದೂವಾದಿಗಳ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದಾರೆ. ಇಂದು ಈ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಸಿದ್ದರಾಮಯ್ಯಗೆ ಟಾಂಗ್​ ನೀಡಿದರು.


ಸಿದ್ದರಾಮಯ್ಯ ವೆಜ್​ ತಿನ್ನೋದು ತಿನ್ನದೇ ಇರೋದು ಇವತ್ತಿನ ಮಾತಲ್ಲ. ನಾನ್​ ವೆಜ್​​ ದೇವಸ್ಥಾನಕ್ಕೆ ಹೋಗ್ತಾರೆ, ಮತ್ತೆ ಬರ್ತಾರೆ, ಏನೇನೋ ಮಾಡ್ತಾರೆ. ಮಾಂಸ ತಿಂದು ಹೋಗಿರುವ ಸಣ್ಣ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ದರಾಮಯ್ಯ ಈಗಾಗಲೇ ಕನಕ ಗುರು ಪೀಠಕ್ಕೆ ಹಾಗೂ ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದೇ ಸಂತೋಷ ಎಂದು ಹೇಳಿದರು .


ನನಗೊಂದು ಆಸೆಯಿದೆ. ಸಿದ್ದರಾಮಯ್ಯ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ವಿಶ್ವಪ್ರಸಿದ್ಧ ಉಡುಪಿ ಕೃಷ್ಣನ ದರ್ಶನ ಪಡೆಯಬೇಕು. ಕನಕದಾಸರ ಭಕ್ತಿಗೆ ಮೆಚ್ಚಿ ಕೃಷ್ಣನು ದರ್ಶನ ನೀಡಿದ್ದಾರೆ. ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಹೋಗಿಲ್ಲ ಎಂಬ ಅನುಮಾನ ಎಲ್ಲರಂತೆ ನನಗೂ ಇದೆ .


ರಾಜ್ಯದ ಜನತೆಯ ಈ ಅನುಮಾನವನ್ನು ದೂರ ಮಾಡಲು ಸಿದ್ದರಾಮಯ್ಯ ಉಡುಪಿಗೆ ತೆರಳಿ ಶ್ರೀಕೃಷ್ಣನ ದರ್ಶನವನ್ನು ಪಡೆಯಬೇಕು. ಸಿದ್ದರಾಮಯ್ಯಗೆ ಶ್ರೀಕೃಷ್ಣನ ಆಶಿರ್ವಾದ ಸಿಗುತ್ತದೆ. ಅವರಿಗೆ ಒಳ್ಳೆಯದಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯರ ಕಾಲೆಳೆದಿದ್ದಾರೆ.

ಇದನ್ನು ಓದಿ : Naleen Kumar Kateel : ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ : ನಳೀನ್​ ಕುಮಾರ್​ ವಿರುದ್ಧ ಶುರುವಾಯ್ತು ಅಭಿಯಾನ

ಇದನ್ನೂ ಓದಿ : Ganeshotsav at Chamarajpet Idga : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ : ಸಿಎಂಗೆ ಸಿ.ಟಿ.ರವಿ ಪತ್ರ

KS Eshwarappa expressed outrage against Siddaramaiah

Comments are closed.