Minister R Ashok : ಕಾಂಗ್ರೆಸ್​ನದ್ದು ಗೂಂಡಾ ಸಂಸ್ಕೃತಿ, ಬಿಜೆಪಿ ಇದನ್ನು ಸಹಿಸೋದಿಲ್ಲ : ಸಚಿವ ಆರ್​.ಅಶೋಕ್​​ ಕಿಡಿ

ಕಲಬುರಗಿ : Minister R Ashok : ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​ ಫೋಟೋ ಏಕೆ ಹಾಕಬೇಕಿತ್ತು ಎಂಬ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಂದಾಯ ಸಚಿವ ಆರ್​.ಅಶೋಕ್​ ಟಾಂಗ್​ ನೀಡಿದ್ದಾರೆ. ಕಲಬುರಗಿಯ ಅಡಕಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಆ ಏರಿಯಾ ಏನು ಪಾಕಿಸ್ತಾನದಲ್ಲಿ ಇದೆಯಾ..? ಅಥವಾ ಅಫ್ಘಾನಿಸ್ತಾನದಲ್ಲಿ ಇದೆಯಾ..? ಪದೇ ಪದೇ ಹಿಂದೂ ನಾಯಕರನ್ನು ಟಾರ್ಗೆಟ್​ ಮಾಡಿದರೆ ಜನರು ಅದನ್ನು ಸಹಿಸೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ .


ನಮ್ಮ ದೇಶ ಅಂದಮೇಲೆ ಹಿಂದೂ ನಾಯಕರ ಫೋಟೋವನ್ನು ಎಲ್ಲಿ ಬೇಕಾದರೂ ಹಾಕುತ್ತೇವೆ. ಸಾವರ್ಕರ್​ ಬಗ್ಗೆ ಸಿದ್ದರಾಮಯ್ಯಗೆ ಏನೂ ತಿಳಿದಿಲ್ಲ. ಅದಿಕ್ಕೆ ಅವರು ಈ ರೀತಿ ಎಲ್ಲ ಮಾತನಾಡುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಕಂದಾಯ ಸಚಿವ ಆರ್​.ಅಶೋಕ್​ ಹೇಳಿದರು.


ಮೊಟ್ಟೆ ಪ್ರಕರಣದ ಬಳಿಕ ಸಿದ್ದರಾಮಯ್ಯರನ್ನು ಟಚ್​ ಮಾಡಲಿ ನೋಡೋಣ ಎಂದಿದ್ದ ಕಾಂಗ್ರೆಸ್ ನಾಯಕರಿಗೆ ಇದೇ ವೇಳೆ ಟಾಂಗ್​ ನೀಡಿದ ಸಚಿವ ಆರ್.ಅಶೋಕ್​, ಟಚ್​ ಆಯ್ತಲ್ಲ, ಮೊನ್ನೆ ಟಚ್​ ಮಾಡಿದ್ದಾರಲ್ಲ. ಬಿಜೆಪಿ ಬಗ್ಗೆ ಭಯ ಇದೆ ಅಲ್ವಾ..? ಎಲ್ಲಿ ತಮಗೆ ತಡೆ ಹಾಕುತ್ತಾರೋ ಎಂಬ ಭಯ ಇದೆ ಅಲ್ವಾ ಅಷ್ಟೇ ಸಾಕು ಎಂದು ವ್ಯಂಗ್ಯವಾಡಿದರು.


ಚಾಮರಾಜಪಟೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಕುರಿತಂತೆ ಮಾತನಾಡಿದ ಆರ್.ಅಶೋಕ್​, ಕಳೆದ 75 ವರ್ಷಗಳಿಂದ ಈ ಜಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಯಾಕೆ ಮಾಡಿಲ್ಲ..? ಬರುವ ಜನವರಿ 26ಕ್ಕೂ ನಾವು ಅಲ್ಲಿಯೇ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದು ಸವಾಲ್​ ಎಸೆದರು.


ಸಿದ್ದರಾಮಯ್ಯ ಕೇವಲ ಕೊಡಗಿಗೆ ನುಗ್ಗುತ್ತೇವೆ ಅಂತಾ ಹೇಳಿಕೆ ನೀಡುವುದರ ಬದಲು ನಾವು ರಾಷ್ಟ್ರಧ್ವಜವನ್ನೋ ಅಥವಾ ನಾಡಧ್ವಜವನ್ನೋ ಹಾರಿಸಲು ಕೊಡಗಿಗೆ ನುಗ್ಗುತ್ತೇವೆ ಎಂದು ಹೇಳಿದ್ದರೆ ಜನರು ಅವರನ್ನು ರಾಷ್ಟ್ರಪ್ರೇಮಿ ಅಂತಾ ಪರಿಗಣಿಸ್ತಾ ಇದ್ದರು. ಕೊಡಗಿನ ಜನರು ಅವರನ್ನು ಮೆಚ್ಚಿಕೊಳ್ತಾ ಇದ್ದರು. ನಾವೇನು ಮೊಟ್ಟೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿಲ್ಲ. ಮೊಟ್ಟೆಗಳ ಮೂಲಕ ಹಲ್ಲೆ ಮಾಡುವುದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಸಚಿವ ಆರ್​.ಅಶೋಕ್​ ಹೇಳಿದರು.


ಮ್ಯಾನ್​ ಹ್ಯಾಡಲಿಂಗ್​ ಬಿಜೆಪಿ ಸಂಸ್ಕೃತಿಯಲ್ಲ. ವಿರೋಧಿಗಳನ್ನು ಸೈದ್ಧಾಂತಿಕವಾಗಿ ಎದುರಿಸಬೇಕು. ಆದರೆ ಕಾಂಗ್ರೆಸ್​ನದ್ದು ಗೂಂಡಾ ಸಂಸ್ಕೃತಿ. ಹಿಂದೂ ಕಾರ್ಯಕರ್ತರು ಯಾರೇ ಇದ್ದರೂ ಈ ರೀತಿ ನಡೆದುಕೊಳ್ಳಬೇಡಿ. ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಎನಿಸಿದರೆ ಕಾನೂನಾತ್ಮಕವಾಗಿ ಪ್ರತಿಭಟನೆ ಮಾಡಿ. ಆದರೆ ಮೊಟ್ಟೆಗಳನ್ನು ಎಸೆಯಬೇಡಿ ಎಂದು ಸೇಡಂನ ಆಡಕಿ ಗ್ರಾಮದಲ್ಲಿ ಸಚಿವ ಆರ್​.ಅಶೋಕ್​ ಹೇಳಿಕೆ ನೀಡಿದರು.

ಇದನ್ನು ಓದಿ : Govinda Karjola’s outrage : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದಿದ್ದು ತಪ್ಪು ಅಂದಮೇಲೆ ಅವರ ಹಿಂದೂ ವಿರೋಧಿ ಹೇಳಿಕೆಗಳೂ ತಪ್ಪೇ ಅಲ್ಲವೇ : ಕಾರಜೋಳ ಪ್ರಶ್ನೆ

ಇದನ್ನೂ ಓದಿ : Minister Ashwattha Narayan : ಮೊಟ್ಟೆ ರಾಜಕೀಯದಲ್ಲಿ ಡಿಕೆಶಿ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತೆ : ಅಶ್ವತ್ಥ ನಾರಾಯಣ ವ್ಯಂಗ್ಯ

Minister R Ashok outraged against Siddaramaiah

Comments are closed.