son ran away :ಪಕ್ಕದ ಮನೆಯವಳ ಜೊತೆ ಓಡಿ ಹೋದ ಪುತ್ರ : ಕ್ರೂಸರ್​ ಕಟ್ಟಿ ಹಾಕಿ ಯುವಕನ ಪೋಷಕರಿಗೆ ಚಿತ್ರಹಿಂಸೆ

ವಿಜಯಪುರ : son ran away : ಪ್ರೀತಿ -ಪ್ರೇಮ ಅನ್ನೋದು ಒಂದು ರೀತಿ ಮಾಯೆಯಿದ್ದಂತೆ. ಅದು ಕೆಲವರಿಗೆ ಖುಷಿಯನ್ನು ತಂದುಕೊಟ್ಟರೆ ಮತ್ತೊಬ್ಬರಿಗೆ ದುಸ್ವಪ್ನವಾಗಿ ಬದಲಾಗಬಹುದು. ಇನ್ನೂ ಹಲವು ಪ್ರಕರಣಗಳಲ್ಲಿ ಮಕ್ಕಳು ಪ್ರೀತಿ – ಪ್ರೇಮ ಅಂತಾ ಮಾಡಿದ್ದಕ್ಕೆ ಪೋಷಕರು ಜೀವಮಾನವಿಡೀ ಅನುಭವಿಸಬೇಕಾದ ಪರಿಸ್ಥಿತಿಗಳೂ ಸಹ ಎದುರಾಗಬಹುದು. ವಿಜಯಪುರ ತಾಲೂಕಿನ ಜಾಲಗೇರಿ ಎಂಬ ಗ್ರಾಮದಲ್ಲಿ ಇಂತಹದ್ದೇ ಒಂದು ಪ್ರಕರಣ ನಡೆದು ಹೋಗಿದೆ.


ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆ ಮಾತಿನಂತೆ ಪುತ್ರನ ಲವ್​ ಕಹಾನಿಯಿಂದಾಗಿ ಆತನ ಪೋಷಕರ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಪೋಷಕರ ಮೇಲೆ ಹಲ್ಲೆ ನಡೆಸಿ ಹೆದರಿಸಿ ಬೆದರಿಸಿ ಇವರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುಡುಗಿಯ ಕಡೆಯವರು ಯತ್ನಿಸಿದ್ದಾರೆ .ಸಪ್ಟೆಂಬರ್​ 11ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


ಅಕ್ಕ ಪಕ್ಕದ ಮನೆಯವರೇ ಆಗಿದ್ದ ಅಮರ್ ಹಾಗೂ ಅರ್ಚನಾ ಪರಸ್ಪರ ಪ್ರೀತಿಸಿದ್ದು ಮಾತ್ರವಲ್ಲದೇ ಮನೆಯಿಂದ ಓಡಿ ಹೋಗಿದ್ದರು. ಇದು ಅರ್ಚನಾ ಪೋಷಕರಾದ ಬಾಬು ಪವಾರ್​ ಹಾಗೂ ಅವರ ಕುಟುಂಬಸ್ಥರಿಗೆ ಅಮರ್​ ಮನೆಯವರ ಮೇಲೆ ಕೋಪ ಬರುವಂತೆ ಮಾಡಿತ್ತು. ಅಮರ್​ ಮೇಲಿನ್​ ಕೋಪಕ್ಕೆ ಬಾಬು ಪವಾರ್​ ಒಂದಿಷ್ಟು ಜನರನ್ನು ಸೇರಿಸಿಕೊಂಡು ಬಂದು ಅಮರ್​ ತಂದೆ ಗೋರಖನಾಥ್​ ಅವರ ಪತ್ನಿ ಕವಿತಾ ಹಾಗೂ ಮತ್ತೋರ್ವ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಗೋರಖನಾಥ್​​ರ ಕೈ ಕಾಲುಗಳನ್ನು ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆದಿದ್ದಾರೆ.


ಸುಮಾರು 20 ರಿಂದ 30 ಮೀಟರ್​ ದೂರದವರೆಗೆ ನನ್ನನ್ನು ಕ್ರೂಸರ್​ ವಾಹನಕ್ಕೆ ಕಟ್ಟಿ ಎಳೆದು ಚಿತ್ರಹಿಂಸೆ ನೀಡಿದ್ದಾರೆ ಎಂದು ಗೋರಖನಾಥ್​ ಆರೋಪಿಸಿದ್ದಾರೆ. ನಿಮ್ಮ ಪುತ್ರ ಅಮರ್​ ನಮ್ಮ ಪುತ್ರಿ ಅರ್ಚನಾಳನ್ನು ಪುಸಲಾಯಿಸಿ ಆಕೆಯ ದಾರಿಯನ್ನು ತಪ್ಪಿಸಿದ್ದಾನೆ. ಈತನೇ ಆಕೆಯನ್ನು ಎಳೆದುಕೊಂಡು ಹೋಗಿದ್ದಾನೆ. ಅಮರ್​ ಈ ರೀತಿ ಕೃತ್ಯ ಎಸಗಲು ನಿಮ್ಮೆಲ್ಲರ ಸಾಥ್​ ಕೂಡ ಇದೆ ಎಂದು ಕೂಗಾಡಿ ಅರ್ಚನಾ ತಂದೆ ಬಾಬು ಈ ರೀತಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅರ್ಚನಾ ತಂದೆ ಬಾಬು ಪವಾರ್​, ಸಹೋದರರಾದ ಅಮರ್​ , ಆಕಾಶ್​ ಹಾಗೂ ಸಂಬಂಧಿಗಳಾದ ಬಾಜಿರಾವ್​, ಶ್ರೀಕಾಂತ್​ ಪವಾರ್​, ಲಕ್ಷ್ಮಣ ಪವಾರ್​, ಅನ್ನು ಪವಾರ್​, ನಾರಾಯಣ ಪವಾರ್​ ಹಾಗೂ ಬೀರಪ್ಪ ಪೂಜಾರಿಯಿಂದ ಈ ಹಲ್ಲೆ ನಡೆದಿದೆ ಎಂದು ಅಮರ್ ತಂದೆ ಗೋರಖನಾಥ್​ ಆರೋಪಿಸಿದ್ದಾರೆ . ನಮ್ಮ ಜೀವಕ್ಕೆ ಅಪಾಯವಿದೆ. ನಮಗೆ ರಕ್ಷಣೆ ಬೇಕು ಎಂದು ಗೋರಖನಾಥ್​ ಹಾಗೂ ಅವರ ಪತ್ನಿ ಕವಿತಾ ಕಣ್ಣೀರು ಹಾಕಿದ್ದಾರೆ.

ಅರ್ಚನಾ ಜೊತೆಯಲ್ಲಿ ಓಡಿ ಹೋಗಿರುವ ಅಮರ್​ ತನ್ನ ತಂದೆ ತಾಯಿಯ ಮೇಲೆ ನಡೆದಿರುವ ಹಲ್ಲೆಯ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅರ್ಚನಾ ತಂದೆ , ಸಹೋದರರು ಹಾಗೂ ಕುಟುಂಬಸ್ಥರು ನನ್ನ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ರಕ್ಷಿಸಿ ಎಂದು ಕೋರಿದ್ದಾರೆ. ಇತ್ತ ಅರ್ಚನಾ ಕೂಡ ನಾನು ಸ್ವಇಚ್ಛೆಯಿಂದ ಅಮರ್​ ಜೊತೆ ಇರಲು ಬಂದಿದ್ದೇನೆ. ನಮ್ಮ ಮನೆಯಲ್ಲಿ ನನ್ನ ಮದುವೆ ಮಾತುಕತೆ ನಡೆಯುತ್ತಿತ್ತು. ಹೀಗಾಗಿ ನಾನು ಪ್ರೀತಿಸಿದ ಅಮರ್​ ಜೊತೆಯಲ್ಲಿ ಮನೆ ಬಿಟ್ಟು ಬಂದಿದ್ದೇನೆ ಎಂದು ಅರ್ಚನಾ ಹೇಳಿದ್ದಾಳೆ.

ಇದನ್ನು ಓದಿ : Anti Conversion Bill : ಪರಿಷತ್​ನಲ್ಲಿ ಇಂದು ಮತಾಂತರ ನಿಷೇಧ ಫೈಟ್

ಇದನ್ನೂ ಓದಿ : Robin Uthappa: ಕಾರ್‌ನಲ್ಲೇ ನಿದ್ದೆ, ಆತ್ಮಹತ್ಯೆಯ ಯೋಚನೆ.. ಗೊತ್ತಾ ಕೊಡಗಿನ ಕುವರ ರಾಬಿನ್ ಉತ್ತಪ್ಪನ ಕಣ್ಣೀರ ಕಥೆ ?

The son ran away with the neighbor’s housemate: The parents of the young man were tortured

Comments are closed.