threw eggs at the savarkar : ಸಾವರ್ಕರ್​ ಫೋಟೋ ತುಳಿದು, ಮೊಟ್ಟೆ ಹೊಡೆದು ಅಗ್ನಿಗಾಹುತಿ : ಸ್ವಾತಂತ್ರ್ಯ ಹೋರಾಟಗಾರನ ಫೋಟೋಗೆ ಭಾರೀ ಅವಮಾನ

ಧಾರವಾಡ : threw eggs at the savarkar : ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕೊಡಗು ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಾಹನಕ್ಕೆ ಬಿಜೆಪಿ ಕಾರ್ಯಕರ್ತರು ಮೊಟ್ಟೆಯಿಂದ ಹೊಡೆದಿರುವ ವಿಚಾರ ರಾಜ್ಯದಲ್ಲಿ ಭಾರೀ ಹೈಡ್ರಾಮಾಗೆ ಕಾರಣವಾಗಿದೆ. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದಿರುವುದನ್ನು ಖಂಡಿಸಿ ಧಾರವಾಡದಲ್ಲಿ ನಿನ್ನೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವೀರ ಸಾವರ್ಕರ್​​ ಫೋಟೋವನ್ನು ಕಾಲಿನಲ್ಲಿ ತುಳಿದಿದ್ದು ಮಾತ್ರವಲ್ಲದೇ ಫೋಟೋಗೆ ಮೊಟ್ಟೆ ಹೊಡೆದು ಬಳಿಕ ಸುಟ್ಟು ಹಾಕಿದ ಘಟನೆಯು ವರದಿಯಾಗಿದೆ.

ಸಿದ್ದರಾಮಯ್ಯ ವಾಹನಕ್ಕೆ ಮೊಟ್ಟೆ ಹೊಡೆದಿದ್ದನ್ನು ಖಂಡಿಸಿ ಕಾಂಗ್ರೆಸ್​ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು. ಇದರಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್​ ಪಕ್ಷವು ಜಿಲ್ಲಾಧಿಕಾರಿಗಳು ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್​ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಫೋಟೋವನ್ನು ಸುಟ್ಟು ಹಾಕಿದ್ದಾರೆ.

ವೀರ ಸಾವರ್ಕರ್​ ಫೋಟೋ ದಹಿಸಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ ಪ್ರತಿಭಟನೆ ನೇತೃತ್ವ ವಹಿಸಿದ್ದ ದೀಪಕ ಚಿಂಚೋರೆ, ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದೆವು. ಆದರೆ ಈ ಸಂದರ್ಭದಲ್ಲಿ ಆಕ್ರೋಶಭರಿತರಾಗಿ ಕಾಂಗ್ರೆಸ್​ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರರ ಪ್ರತಿಕೃತಿಯನ್ನು ದಹಿಸುರುವುದು ನಿಜ. ಆದರೆ ನಾವು ಸಾರ್ವಕರ್​​ ಫೋಟೋವನ್ನು ದಹಿಸಿಲ್ಲ. ಈ ವಿಚಾರ ನಮ್ಮ ಗಮನಕ್ಕೂ ಬಂದಿಲ್ಲ. ಇದು ಕಾಂಗ್ರಸ್ಸಿಗರ ಮೇಲೆ ಗೂಬೆ ಕೂರಿಸುವ ಯತ್ನ ಎಂದು ಹೇಳಿದ್ದಾರೆ.

ಇನ್ನು ವೀರ ಸಾವರ್ಕರ್​ ಫೋಟೋಗೆ ಮೊಟ್ಟೆ ಹೊಡೆದು ದಹಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆಯೇ ಆಕ್ರೋಶಭರಿತರಾದ ಬಿಜೆಪಿ ಕಾರ್ಯಕರ್ತರು ತಡರಾತ್ರಿ ಉಪನಗರ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರನ ಭಾವಚಿತ್ರಕ್ಕೆ ಅವಮಾನ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ .

ಇದನ್ನು ಓದಿ : Amulya Twins Children Photo: ಅಮೂಲ್ಯ ಅವಳಿ ಮಕ್ಕಳ ಪೋಟೋ ರಿವೀಲ್: ಮುದ್ದು ಮಕ್ಕಳ ಮುಖ ತೋರಿಸಿದ ನಟಿ

ಇದನ್ನೂ ಓದಿ : Uttarakhand Flood : ಉತ್ತರಾಖಂಡ್ ನಲ್ಲಿ ಮತ್ತೆ ಜಲಪ್ರಳಯ..!

threw eggs at the Savarkar photo and burnt it Dharwad congress

Comments are closed.