
ಬಾಗಲಕೋಟೆ : ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ರಾಷ್ಟ್ರಪಕ್ಷಿ ನವಿಲನ್ನ ಸ್ಥಳೀಯರು ರಕ್ಷಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನ ಚೊಳಚಗುಡ್ಡ ಸೇತುವೆ ಬಳಿ ಈ ಘಟನೆ ಸಂಭವಿಸಿದ್ದು, ನವಿಲು ತನ್ನ ಪ್ರಾಣ ರಕ್ಷಣೆಗಾಗಿ ಹಲವು ಗಂಟೆಗಳಕಾಲ ನದಿ ಮಧ್ಯದ ಚಿಕ್ಕ ಮರವೇರಿ ಕುಳಿತಿತ್ತು.

ಆದರೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನವಿಲು ಕುಳಿತಿದ್ದ ಮರ ಮುಳುಗಿತ್ತು. ನೀರಿನ ರಭಸಕ್ಕೆ ಈಜಲು ಆಗದೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ನವಿಲು ಸೇತುವೆ ಬಳಿ ತೇಲಿ ಬಂದಾಗ ಇದನ್ನ ಗಮನಿಸಿದ ಗ್ರಾಮಸ್ಥರು ನೀರನ್ನ ರಕ್ಷಣೆ ಮಾಡಿದ್ದಾರೆ.