Cylinder Blast : ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ ; ಗ್ರಾಹಕರು ಸೇರಿ 7 ಜನರಿಗೆ ಗಾಯ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ವೀಕೆಂಡ್ ಮೂಡ್ ಗೆ ಸಿಲೆಂಡರ್ ಸ್ಪೋಟವೊಂದು (Cylinder Blast) ಶಾಕ್ ನೀಡಿದೆ. ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ ಸಾಗರ ಹೊಟೇಲ್ ನಲ್ಲಿ ಕಿಚನ್ ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ.

ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ ಸಾಗರ ಹೋಟೆಲಿನಲ್ಲಿ ಘಟನೆ‌ ನಡೆದಿದ್ದು ಮಧ್ಯಾಹ್ನದ ವೇಳೆ ಗ್ಯಾಸ್ ಸೋರಿಕೆಯಿಂದ ಎರಡು ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಪೋಟದಿಂದ ಹೋಟೆಲಿನಲ್ಲಿದ್ದ ಗ್ರಾಹಕರ ಸಹಿತ ನಾಲ್ಕೈದು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಸನಿಹದಲ್ಲೇ ಇರುವ ಸಿಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಚನ್ ನಲ್ಲಿ ಅಡುಗೆಗಾಗಿ ಜೋಡಿಸಿಡಲಾಗಿದ್ದ ಎರಡು ಸಿಲಿಂಡರ್ ಸ್ಪೋಟಗೊಂಡಿದ್ದು, ಕಿಚನ್ ನಲ್ಲಿ ಇನ್ನೂ 5 ಸಿಲಿಂಡರ್ ಇರುವ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ ಸಿಬ್ಬಂದಿ ಸಹಾಯ ಕೋರಿದ್ದಾರೆ. ತಕ್ಷಣ ಸ್ಥಳಕ್ಕೆ 2 ಅಗ್ನಿಶಾಮಕ ವಾಹನ ದೌಡಾಯಿಸಿದ್ದು ಸಂಭವನೀಯ ಅಪಾಯವನ್ನು ತಪ್ಪಿಸಿದ್ದಾರೆ. ಸಿಲಿಂಡರ್ ಸ್ಫೋಟದಲ್ಲಿ 7 ಜನ ಹೊಟೆಲ್ ಸಿಬ್ಬಂದಿಗೆ ಗಾಯಗೊಂಡಿದ್ದಾರೆ. ಗ್ಯಾಸ್ ಲೀಕ್ ಆಗುತ್ತಿದ್ದ ವೇಳೆ ಹೊಟೇಲ್ ನಲ್ಲಿ ಸಾಕಷ್ಟು ಗ್ರಾಹಕರಿದ್ದು, ಗ್ಯಾಸ್ ಲೀಕ್ ಆಗುತ್ತಿರೋದು ಗಮನಕ್ಕೆ ಬರುತ್ತಿದ್ದಂತೆ ಹೊಟೇಲ್ ಸಿಬ್ಬಂದಿ ಗ್ರಾಹಕರನ್ನು ಹೊರಗಡೆ ಕಳುಹಿಸಿದ್ದಾರೆ. ಇದರಿಂದ ಗಾಯಾಳುಗಳ ಸಂಖ್ಯೆ ಕಡಿಮೆಯಾದಂತಾಗಿದೆ.

ಇನ್ನು ಗ್ಯಾಸ್ ಲಿಕೇಜ್ ಪರಿಶೀಲಿಸುವಷ್ಟರಲ್ಲಿಯೇ ಸಿಲಿಂಡರ್ ಸ್ಪೋಟಗೊಂಡಿದ್ದರಿಂದ ಹೊಟೇಲ್ ಸಿಬ್ಬಂದಿಗಳಾದ ಘಟನೆಯಲ್ಲಿ ಹೊಟೆಲ್ ಸಿಬ್ಬಂದಿಗಳಾದ ನರಸಿಂಹ (50 ವರ್ಷ ) ಜಗ್ಗ (52 ವರ್ಷ ) ಗಂಗಾಧರ (38 ವರ್ಷ ) ಕೃಷ್ಣ (23 ವರ್ಷ) ಕೃಷ್ಣ (54 ವರ್ಷ ) ಸೇರಿದಂತೆ 7 ಜನರಿಗೆ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರು ಉತ್ತರ ಭಾರತ ಮೂಲದ ಸಿಬ್ಬಂದಿಗಳಿದ್ದಾರೆ ಎನ್ನಲಾಗಿದ್ದು, ಪೈಪ್ ಸ್ಫೋಟಗೊಂಡಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಇತರ ಸಿಬ್ಬಂದಿ ಪಾರಾಗಿದ್ದಾರೆ. ಹೆಚ್ಚಿನ ಗಾಯಗೊಂಡ ಗಾಯಾಳುಗಳಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : Government Mobile Apps: ಯಾರ ಕಿರಿಕಿರಿಯಿಲ್ಲದೇ ಪ್ರಯಾಣ ಮಾಡಲು ಸರ್ಕಾರದ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ!

ಇದನ್ನೂ ಓದಿ : Cylinder Blast : ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ ; ಗ್ರಾಹಕರು ಸೇರಿ 7 ಜನರಿಗೆ ಗಾಯ

(cylinder blast in Bangalore hotel, 7 injured)

Comments are closed.