ಕಲ್ಲುಗಣಿಯಲ್ಲಿ ಸ್ಪೋಟ : 10 ಮಂದಿ ಕಾರ್ಮಿಕರ ದುರ್ಮರಣ

ಆಂಧ್ರಪ್ರದೇಶ : ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ವೇಳೆಯಲ್ಲಿ ಸ್ಪೋಟ ಸಂಭವಿಸಿದ್ದು, 10 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಡಪದ ಬಳಿಯಲ್ಲಿ ನಡೆದಿದೆ.

ಕಡಪದ ಮಾಮಿಲ್ಲಪಲ್ಲೆ ಗ್ರಾಮದ ಸಮೀಪದಲ್ಲಿರುವ ಕಲ್ಲುಗಣಿಯಲ್ಲಿ ಕಾರ್ಮಿಕರು ಬಂಡೆಯನ್ನು ಕೊರೆಯುವ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮೃತ ಕಾರ್ಮಿಕರಲ್ಲಿ ಬಹುತೇಕರು ಆಂಧ್ರಪ್ರದೇಶದ ಪುಲಿವೆಂಡುಲ ಮೂಲದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕಡಪ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

Comments are closed.