Nirmala Sitharaman : ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಏಮ್ಸ್‌ ಆಸ್ಪತ್ರೆಗೆ ದಾಖಲು

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸೋಮವಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಾಗಿದ್ದಾರೆ.

ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ವಾಡಿಕೆಯ ತಪಾಸಣೆ ಮತ್ತು ಸಣ್ಣ ಹೊಟ್ಟೆ ನೋವಿನ ಸೋಂಕಿಗಾಗಿ ಸೀತಾರಾಮನ್ ಅವರನ್ನು ಕರೆದೊಯ್ಯಲಾಗಿದೆ. ಹಾಗಾಗಿ ಆಸ್ಪತ್ರೆಯಿಂದ ಬೇಗನೆ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 63 ವರ್ಷದ ಅವರನ್ನು ಆಸ್ಪತ್ರೆಯ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿದೆ. ನಿನ್ನೆ ನಿರ್ಮಲ ಸೀತಾರಾಮನ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ದೆಹಲಿಯ ‘ಸದೈವ್ ಅಟಲ್’ ನಲ್ಲಿ ಪುಷ್ಪ ನಮನ ಸಲ್ಲಿಸಿದರು.

ಡಿಸೆಂಬರ್ 24 ರಂದು ಅವರು ತಮಿಳುನಾಡು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ತಮಿಳು ಭಾಷೆಯಲ್ಲಿ ಕಲಿಸಬೇಕು. ಏಕೆಂದರೆ ಅದನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಅವಶ್ಯಕತೆಯಿದೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ, ಚೀನಾ, ಜಪಾನ್ ಮತ್ತು ಕೊರಿಯಾದಂತಹ ದೇಶಗಳಲ್ಲಿ ಕಂಡುಬರುವ ಕೋವಿಡ್‌-19 ಉಲ್ಬಣವನ್ನು ಎದುರಿಸುವಲ್ಲಿ ನಮ್ಮ ದೇಶವು ‘ಉತ್ತಮ ಸ್ಥಾನದಲ್ಲಿದೆ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ : PM Modi Mann Ki Baat : ಮನ್ ಕಿ ಬಾತ್ : ಈ ವರ್ಷದ ಪ್ರಮುಖ ಘಟನೆಗಳನ್ನು ನೆನಸಿಕೊಂಡ ಮೋದಿ

ಇದನ್ನೂ ಓದಿ : Janardhan Reddy press meet: ಮಡಿಕೇರಿಯಲ್ಲಿ ರೆಡ್ಡಿ ಕುಟುಂಬಸ್ಥರಿಗೆ ಅವಮಾನ: ರೆಡ್ಡಿ ಬಿಚ್ಚಿಟ್ಟ ಸತ್ಯವೇನು ಗೊತ್ತಾ?

ಇದನ್ನೂ ಓದಿ : Janardhan Reddy: ಹೊಸ ಪಕ್ಷ ಘೋಷಿಸಿದ ಜನಾರ್ದನ್‌ ರೆಡ್ಡಿ: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಘೋಷಣೆ

“ನಾನು ಅದನ್ನು ತಮಿಳುನಾಡಿನ ಆರೋಗ್ಯ ಸಚಿವರ (ಮಾ ಸುಬ್ರಮಣಿಯನ್) ಮುಂದೆ ಹೇಳುತ್ತಿದ್ದೇನೆ. ವೈದ್ಯಕೀಯ ಶಿಕ್ಷಣವನ್ನು ಬಲಪಡಿಸುವ ಅಗತ್ಯವಿದೆ. ನಮಗೆ ವೈದ್ಯಕೀಯ ಶಿಕ್ಷಣವು ಉತ್ತಮ ನೆಲೆಯಾಗಿರಬೇಕು ಮತ್ತು ವೈದ್ಯಕೀಯ ಶಿಕ್ಷಣವನ್ನು ತಮಿಳಿನಲ್ಲಿ (ಭಾಷೆಯಲ್ಲಿ) ಕಲಿಸಿದರೆ ಅದನ್ನು ಮಹತ್ತರವಾಗಿ ಸಾಧಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.

Finance Minister Nirmala Sitharaman admitted to AIIMS Hospital

Comments are closed.