ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಪಿಪಿಇ ಗಣೇಶ ! ಇಲ್ಲಿ ದೇವರೆ ಡಾಕ್ಟರ್ !

ಅಹಮದಾಬಾದ್‌ : ಕೋವಿಡ್ ಸಾಂಕ್ರಾಮಿಕದಿಂದ ರಕ್ಷಣೆಗಾಗಿ ಲಸಿಕೆ ಪಡೆಯಲು ದೇಶದೆಲ್ಲೆಡೆ ಜಾಗೃತಿ ಅಭಿಯಾನಗಳು ಜೋರಾಗುತ್ತಿದೆ. ಗಣೇಶೋತ್ಸವದ ಪ್ರಯುಕ್ತ ಗುಜರಾತ್‌ನಲ್ಲಿ ಖುದ್ದು ಗಣೇಶನ ಮೂರ್ತಿಗಳ ಮೂಲಕ ಲಸಿಕೆ ಪಡೆಯಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.

ಅಹಮದಾಬಾದ್‌ನ ವೆಜಾಲ್ಪುರದ ಗಣೇಶ ಯುವ ಮಂಡಲ ಆಯೋಜಿಸಿರುವ ಗಣೇಶೋತ್ಸವದಲ್ಲಿ ಕೋವಿಡ್‌-19 ಥೀಂನಲ್ಲಿ ಪೆಂಡಾಲ್‌ ಅನ್ನು ಸಿಂಗರಿಸಲಾಗಿದೆ. ಖುದ್ದು ಗಣೇಶನನ್ನೇ ವೈದ್ಯರ ರೂಪದಲ್ಲಿ ಮೂರ್ತಿಯನ್ನಾಗಿಸಿ ಕೂರಿಸಲಾಗಿದ್ದು, ಪಿಪಿಇ ಕಿಟ್‌ನಲ್ಲಿರುವ ವಿಘ್ನೇಶ್ವರ ಸ್ಟೆತೋಸ್ಕೋಪ್ ಹಿಡಿದು ಆರೋಗ್ಯ ಸೇವಾ ಕಾರ್ಯಕರ್ತರು ಸೇರಿದಂತೆ ಸಾಂಕ್ರಾಮಿಕದ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಮಂದಿಗೆ ಗೌರವ ಸಲ್ಲಿಸುವಂತೆ ಮಾಡಲಾಗಿದೆ.

ಇದನ್ನೂ ಓದಿ: India Corona Updates : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ : ಒಂದೇ ದಿನದಲ್ಲಿ 338 ಜನ ಬಲಿ !

ಹಿನ್ನೆಲೆಯಲ್ಲಿ ಆಸ್ಪತ್ರೆಯ ಪೇಂಟಿಂಗ್ ಇದ್ದು, ಲೌಡ್‌ಸ್ಪೀಕರ್‌ಗಳಲ್ಲಿ ಸಂದೇಶ ಸಾರುವ ಮೂಲಕ ಲಸಿಕೆ ವಿರುದ್ಧ ಇರುವ ಮಿಥ್ಯೆಗಳನ್ನು ಹೋಗಲಾಡಿಸು ಪ್ರಯತ್ನ ಮಾಡಲಾಗಿದೆ. ವೈರಸ್‌ನಿಂದ ತೀವ್ರತರನಾದ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಲಸಿಕೆ ಅತ್ಯಗತ್ಯ ಎಂದು ಸಂದೇಶ ಸಾರುತ್ತಿದ್ದಾನೆ ಈ ಡಾ. ಗಣೇಶ.

ಇದನ್ನೂ ಓದಿ: Corona 4th Dose : ಕೊರೊನಾ ಲಸಿಕೆಯ 4ನೇ ಡೋಸ್ ಅನಿವಾರ್ಯ : ಇಸ್ರೇಲ್ ತಜ್ಞರು ಕೊಟ್ಟ ಸಲಹೆ ಏನು ಗೊತ್ತಾ ?

ಗಣೇಶೋತ್ಸವ ಸಮಿತಿಯ ಸಿಬ್ಬಂದಿಯಲ್ಲಿ ಒಬ್ಬರಾದ ಪ್ರಶಾಂತ್‌ ಲಗಾದ್ ಮತನಾಡಿ, “ಪ್ರಚಲಿತ ವಿದ್ಯಮಾನಗಳನ್ನು ಥೀಂ ಮಾಡಿಕೊಂಡು ಗಣೇಶ ಪೆಂಡಾಲ್ ಮಾಡಿದ್ದೇವೆ. 2019ರಲ್ಲಿ ಸರ್ಜಿಕಲ್ ದಾಳಿಯಾದ ವೇಳೆ ನಾವು ವಿಂಗ್ ಕಮಾಂಡರ್‌ ಅಭಿನಂದನ್ ವರ್ತಮಾನ್‌ರನ್ನು ತೋರಿದ್ದೆವು. ಹೀಗಾಗಿ ಈ ಬಾರಿ ನಾವು ಕೋವಿಡ್ ಥೀಂನಲ್ಲಿ ಉತ್ಸವ ಆಚರಿಸುವುದು ಸಹಜವೇ ಆಗಿದೆ” ಎಂದಿದ್ದಾರೆ.

(Ganesha idol designed to looks like wearing PPE kit to create awareness amongst people)

Comments are closed.