ಬುಧವಾರ, ಏಪ್ರಿಲ್ 30, 2025
HomeNationalMM Naravane :ಸೇನಾ ಸಿಬ್ಬಂದಿ ಮುಖ್ಯಸ್ಥರ ಅಧ್ಯಕ್ಷರಾಗಿ ಜನರಲ್​ ಎಂ.ಎಂ ನರವಾಣೆ ನೇಮಕ

MM Naravane :ಸೇನಾ ಸಿಬ್ಬಂದಿ ಮುಖ್ಯಸ್ಥರ ಅಧ್ಯಕ್ಷರಾಗಿ ಜನರಲ್​ ಎಂ.ಎಂ ನರವಾಣೆ ನೇಮಕ

- Advertisement -

ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಬಿಪಿನ್​ ರಾವತ್​ ನಿಧನದ ಬಳಿಕ ಸಿಡಿಎಸ್​ ಜನರಲ್​ ಹುದ್ದೆ ತೆರವಾಗಿದೆ.ಹೀಗಾಗಿ ಸೇನಾ ಮುಖ್ಯಸ್ಥ ಜನರಲ್​ ಎಂ ಎಂ ನರವಾಣೆ (MM Naravane )ಮೂವರು ಸೇನಾ ಮುಖ್ಯಸ್ಥರನ್ನು ಒಳಗೊಂಡ ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಎನ್ನಲಾಗಿದೆ.


ಮೂವರು ಸೇನಾ ಮುಖ್ಯಸ್ಥರಲ್ಲಿ ಜನರಲ್​ ಎಂ ಎಂ ನರವಾಣೆ ಹಿರಿಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಸಮಿತಿಯ ಅಧ್ಯಕ್ಷರ ಸ್ಥಾನವನ್ನು ನೀಡಲಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ವಿ ಆರ್​ ಚೌಧರಿ ಸೆಪ್ಟೆಂಬರ್​ 30ರಂದು ಹಾಗೂ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್​ ಆರ್​ ಹರಿ ನವೆಂಬರ್​ 30ರಂದು ಅಧಿಕಾರ ವಹಿಸಿಕೊಂಡಿದ್ದರು. ಸೇವೆಯಲ್ಲಿ ನರವಾಣೆ ಇವರಿಬ್ಬರಿಗಿಂತ ಹಿರಿಯವರಾಗಿದ್ದಾರೆ.ಇದೇ ಕಾರಣಕ್ಕೆ ಎಂ ಎಂ ನರವಾಣೆಯವರನ್ನು ಮೂವರು ಸೇನಾ ಮುಖ್ಯಸ್ಥರನ್ನು ಒಳಗೊಂಡ ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.


ಡಿಸೆಂಬರ್​ 8ರಂದು ತಮಿಳುನಾಡಿನ ಕುನೂರಿನಲ್ಲಿ ಎಂಐ 17 ವಿ5 ಹೆಲಿಕಾಪ್ಟರ್​ ಪತನಗೊಂಡಿತ್ತು . ಈ ಅವಘಡದಲ್ಲಿ ಸಿಡಿಎಸ್​ ಜನರಲ್​​ ಬಿಪಿನ್​ ರಾವತ್​​ ಹಾಗೂ ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್​ ಕ್ಯಾಪ್ಟನ್​​​ ವರುಣ್​ ಸಿಂಗ್​​ರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಸಹ ಅವರು ಚಿಕಿತ್ಸೆ ಫಲಕಾರಿಯಾದೇ ಬುಧವಾರ ನಿಧನರಾಗಿದ್ದಾರೆ. ಹಲವು ದಶಕಗಳ ಬಳಿಕ ದೇಶದಲ್ಲಿ ನಡೆದ ಅತ್ಯಂತ ಭೀಕರ ವಾಯುಪಡೆಯ ದುರಂತ ಇದಾಗಿದೆ.

ಹೆಲಿಕಾಪ್ಟರ್​ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ನಿಧನ


ಬೆಂಗಳೂರು : ಡಿಸೆಂಬರ್​ 8ರಂದು ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಇತರೆ 12 ಮಂದಿಯನ್ನು ಬಲಿತೆಗೆದುಕೊಂಡಿದ್ದ ಹೆಲಿಕಾಪ್ಟರ್​ ( Chopper Crash ) ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾನಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್(Group Captain Varun Singh)​ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್​ ದುರಂತದಲ್ಲಿ ರಕ್ಷಿಸಲ್ಪಟ್ಟಿದ್ದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​ರನ್ನು ಮೊದಲು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮಿಲಿಟರಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ವರುಣ್​ ಸಿಂಗ್​​ರನ್ನು ಲೈಫ್​​ ಸಪೋರ್ಟ್​ನಲ್ಲಿ ಇಡಲಾಗಿತ್ತು.

ಡಿಸೆಂಬರ್​ 8ರಂದು ನಡೆದ ಹೆಲಿಕಾಪ್ಟರ್​ ದುರಂತದಲ್ಲಿ ಗಾಯಗೊಂಡು ಇಂದು ಬೆಳಗ್ಗೆ ನಿಧನರಾದ ಕೆಚ್ಚೆದಯ ವೀರ ಗ್ರೂಪ್​ ಕ್ಯಾಪ್ಟನ್​​ ವರುಣ್​ ಸಿಂಗ್​​ ಅವರ ನಿಧನ ವಾರ್ತೆಯನ್ನು ತಿಳಿಸಲು ಭಾರತೀಯ ವಾಯುಪಡೆಯು ದುಃಖಿತವಾಗಿದೆ. ವರುಣ್​ ಸಿಂಗ್​ ನಿಧನಕ್ಕೆ ಭಾರತೀಯ ವಾಯುಪಡೆ ಸಂತಾಪ ಸೂಚಿಸುತ್ತಿದೆ. ಹಾಗೂ ದುಃಖತೃಪ್ತ ಕುಟುಂಬದವರ ಜೊತೆಯಲ್ಲಿ ಐಎಫ್​ ದೃಢವಾಗಿ ನಿಂತಿದೆ ಎಂದು ಟ್ವೀಟ್​ ಮಾಡಲಾಗಿದೆ. ಶೌರ್ಯ ಚಕ್ರ ಪ್ರಶಸ್ತಿ ವಿಜೇತ ವರುಣ್​ ಸಿಂಗ್​ ಬದುಕುಳಿಯಲೆಂದು ದೇಶದ ಮೂಲೆ ಮೂಲೆಯ ಜನರು ಪ್ರಾರ್ಥಿಸಿದ್ದರು. ಮೊನ್ನೆ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದ ಏಕೈಕ ಸೇನಾನಿ ಇವರಾಗಿದ್ದರು.

MM Naravane becoame the new chief of army staff committee president

ಇದನ್ನು ಓದಿ: marriage age of women : ಮಹಿಳೆಯರ ಮದುವೆಯ ಕನಿಷ್ಟ ವಯಸ್ಸು 18 ರಿಂದ 21 ವರ್ಷಕ್ಕೆ ಏರಿಸಲು ಸಂಪುಟ ಅಸ್ತು..!

ಇದನ್ನೂ ಓದಿ: Kerala High Court :‘ಮಗಳ ಮದುವೆಗೆ ಪೋಷಕರು ನೀಡುವ ಉಡುಗೊರೆ ವರದಕ್ಷಿಣೆಯಲ್ಲ’ : ಕೇರಳ ಹೈಕೋರ್ಟ್​ ಮಹತ್ವದ ಆದೇಶ

RELATED ARTICLES

Most Popular