ಪ್ರಧಾನಮಂತ್ರಿ ಜನಧನ ಯೋಜನೆಗೆ ಏಳು ವರ್ಷ ಪೂರ್ಣ
ನವದೆಹಲಿ : ಪ್ರಧಾನಮಂತ್ರಿ ಜನಧನ ಯೋಜನೆಯು ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ನೆರವಾಗುವುದರ ಜತೆಗೆ ಭಾರತದ ಅಭಿವೃದ್ಧಿ ದಾರಿಯನ್ನು ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಶನಿವಾರ ಮಾತನಾಡಿದ ಅವರು, ಈ ಯೋಜನೆಯು ಅಸಂಖ್ಯಾತ ಭಾರತೀಯರ ಹಣಕಾಸಿನ ಲಭ್ಯತೆ, ಘಟನೆ ಮತ್ತು ಸಬಲೀಕರಣಕ್ಕೆ ನೆರವಾಗಿದೆ. ಇದು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ’ ಎಂದು ಎಂದಿದ್ದಾರೆ.
‘ಪ್ರಧಾನ ಮಂತ್ರಿ ಜನಧನ’ ಯೋಜನೆಗೆ ಏಳು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ಈ ಯೋಜನೆಯ ಯಶಸ್ವಿಗಾಗಿ ಶ್ರಮಿಸಿದ ಎಲ್ಲರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಅವರ ಪ್ರಯತ್ನವು ಭಾರತದ ಜನರು ಉತ್ತಮ ಗುಣಮಟ್ಟದ ನಡೆಸಲು ನೆರವಾಗಿದೆ’ ಎಂದರು.
ಇದನ್ನೂ ಓದಿ: Bharat Bandh : ಸೆಪ್ಟೆಂಬರ್ 25 ರಂದು ಭಾರತ್ ಬಂದ್
Comments are closed.