Rajasthan BJP Ex-MLA : ಈಗಾಗಲೇ ಐವರನ್ನ ಕೊಂದಿದ್ದೇವೆ ಎಂದ ಬಿಜೆಪಿ ಮಾಜಿ ಶಾಸಕ..!

ಜೈಪುರ : (Rajasthan BJP Ex-MLA) ಗೋ ಹತ್ಯೆ ಮಾಡೋರು ಯಾರೇ ಆಗಲಿ ಅವರನ್ನ ಹಿಡಿದು ಕೊಂದು ಬಿಡಿ ಅಂತಾ ಬಿಜೆಪಿ ಮಾಜಿ ಶಾಸಕ ಹೇಳಿರೋ ವಿಡಿಯೋ ಇದೀಗ ಭಾರಿ ವಿವಾದಕ್ಕ ಕಾರಣವಾಗಿದೆ.

ರಾಜಸ್ಥಾನದ ರಾಮಘರ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜ್ಞಾನ್ ದೇವ್ ಅಹುಜಾ, ಕಾರ್ಯಕರ್ತರ ಜೊತೆ ಸಭೆ ಮಾಡುವಾಗ ಇಂತಹ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಗೋ ರಕ್ಷಣೆ ಕುರಿತು ಸಭೆ ನಡೆಸ್ತಿದ್ದ ಜ್ಞಾನ್ ದೇವ್ ಅಹುಜಾ, ಗೋ ಹತ್ಯೆ ಮಾಡುವವರು ಯಾರೇ ಆಗಲಿ ಅವರನ್ನ ಕೊಂದು ಬಿಡಿ. ನಾವು ಈಗಾಗಲೇ ಐವರನ್ನ ಕೊಂದಿದ್ದೇವೆ ಎಂದು ಜಂಭ ಕೊಚ್ಚಿಕೊಳ್ಳುವ ರೀತಿ ಮಾತುಗಳ್ಳನ್ನಾಡಿದ್ದಾರೆ. ಅಷ್ಟೇ ಅಲ್ದೆ, ಹೀಗೆ ಹೇಳುವಾಗ ತಾವು ಲಾಲ್ವಂಡಿ ಮತ್ತು ಬೆರ್ಹೂರ್ ನಲ್ಲಿ ಈ ರೀತಿ ಗೋ ಹಂತಕರನ್ನ ಕೊಲೆ ಮಾಡಿರೋದಾಗಿ ಹೇಳಿದ್ದಾರೆ. ಈ ಎರಡು ಪ್ರದೇಶದ ಹೆಸರು ಹೇಳಿರೋದು 2017 ಮತ್ತು 2018ರಲ್ಲಿ ನಡೆದ ರಕ್ಬಾರ್ ಖಾನ್ ಮತ್ತು ಪೆಹ್ಲೂ ಖಾನ್ ಅವರ ಹತ್ಯೆ ಮಾಡಿದ ಪರೋಕ್ಷ ಸುಳಿವನ್ನ ಬಿಟ್ಟು ಕೊಟ್ಟಿದೆ.

2017/2018ರಲ್ಲಿ ರಾಮಘರ್ ಕ್ಷೇತ್ರದಲ್ಲೇ ಈ ಎರಡು ಹತ್ಯೆ ನಡೆದಿತ್ತು. ಇಬ್ಬರ ಹತ್ಯೆ ನಡೆದಾಗ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಜ್ಞಾನ್ ದೇವ್ ಅಹುಜಾ ರಾಮಘರ್ ಕ್ಷೇತ್ರದ ಶಾಸಕರಾಗಿದ್ರು. ‘ಗೋ ಹತ್ಯೆ ಮಾಡೋರನ್ನ ಕೊಲ್ಲೋದಕ್ಕೆ, ನಮ್ಮೆಲ್ಲ ಕಾರ್ಯಕರ್ತರಿಗೆ ನಾನು ಕರೆ ನೀಡುತ್ತೇನೆ, ಮುಕ್ತ ಅವಕಾಶವನ್ನೂ ಕೊಟ್ಟಿದ್ದೇನೆ’ ಎಂದು ಜ್ಞಾನ್ ದೇವ್ ಹೇಳಿದ್ದಾರೆ.

ಸದ್ಯ ವಿವಾದಾತ್ಮಕ ಹೇಳಿಕೆಯ  ಈ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಮು ಸಾಮರಸ್ಯ ಕದಡಿದ ಆರೋಪದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 153A ಪ್ರಕಾರ ಜ್ಞಾನ್ ದೇವ್ ಅಹುಜಾ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಬಿಜೆಪಿ ನಾಯಕನ ಹೇಳಿಕೆಯನ್ನ ಖಂಡಿಸಿದ್ರೆ, ಬಿಜೆಪಿ ಪಕ್ಷ ಅಹುಜಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಜ್ಞಾನ್ ದೇವ್ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ. ಅದು ಪಕ್ಷದ ನಿಲುವಲ್ಲ. ಈ ಹೇಳಿಕೆಯನ್ನ ಸಮರ್ಥಿಸಿಕೊಳ್ಳೋದಿಲ್ಲ ಅಂತಾ ರಾಜಸ್ಥಾನ ಬಿಜೆಪಿ ಘಟಕ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ : Throw Eggs At Siddaramaiahs Car : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ : ಕಾರ್ಯಕರ್ತರ ನಡೆಗೆ ಬಿಜೆಪಿ ಅಸಮಾಧಾನ

ಇದನ್ನೂ ಓದಿ : Govinda Karajola : ‘ಮುಪ್ಪಿನಲ್ಲಿ ಸಿದ್ದರಾಮಯ್ಯಗೆ ಮಠ-ಮಾನ್ಯಗಳ ಬಗ್ಗೆ ಜ್ಞಾನೋದವಾಗಿದೆ’ : ಗೋವಿಂದ ಕಾರಜೋಳ ವ್ಯಂಗ್ಯ

Rajasthan BJP Ex-MLA provocative statement- cow slaughter

Comments are closed.