ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನ್ನಿಸುತ್ತಿದೆ ಎಂದ ಯುವತಿ: ಜಾರಕಿಹೊಳಿ ಅರೆಸ್ಟ್ ಮಾಡಿ ಅಂದ್ರು ಯುವತಿ ಪರ ವಕೀಲರು

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಲೇಡಿ ಇದೀಗ 4ನೇ ವಿಡಿಯೋ ರಿಲೀಸ್ ಮಾಡಿದ್ದಾಳೆ. ವಿಡಿಯೋದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಪ್ರಕರಣದ ಆರೋಪಿ ನರೇಶ್ ಕುರಿತು ಮಾಹಿತಿ ನೀಡಿದ್ದಾಳೆ.

ಸಂತ್ರಸ್ತ ಯುವತಿ ತನ್ನ ಸಹೋದರ ಜೊತೆಯಲ್ಲಿ ಮಾತನಾಡಿರುವ ವಿಡಿಯೋ ರಿಲೀಸ್ ಆಗಿರೋ ಕುರಿತು ಆತಂಕ ವ್ಯಕ್ತಪಡಿಸಿದ್ದಾಳೆ. ತನ್ನ ತಂದೆ, ತಾಯಿ, ಅಜ್ಜಿ ಹಾಗೂ ಸಹೋದರರು ಸೇಫ್ ಆಗಿಲ್ಲ ಅನ್ನೋ ಕುರಿತು ಮಾತನಾಡಿದ್ದಾಳೆ. ಪೊಲೀಸರು ತನ್ನ ಕುಟುಂಬವನ್ನು ಬೆಂಗಳೂರಿಗೆ ಕರೆತಂದು ರಕ್ಷಣೆಯನ್ನು ನೀಡುವಂತೆ ಮನವಿ ಮಾಡಿದ್ದಾಳೆ.

ಮೊಬೈಲ್ ಸಂಭಾಷಣೆಯ ಆಡಿಯೋ ರಿಲೀಸ್ ಆಗಿರೋ ಕುರಿತು ಮಾತನಾಡಿರುವ ಯುವತಿ ನಾನು ಸಂತ್ರಸ್ತೆ, ನನಗೆ ನ್ಯಾಯ ಕೊಡಿಸಿ. ಜಾರಕಿಹೊಳಿ ಹೆಸರು ಬರೆದು ಸಾಯಬೇಕು ಅನಿಸ್ತಿದೆ. ನಾನು ಬದುಕಬೇಕೋ ಸಾಯಬೇಕೋ ಗೊತ್ತಾಗುತ್ತಿಲ್ಲ ಎಂದಿದ್ದಾಳೆ. ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೋಗುತ್ತೇನೆ ಎಂದಿದ್ದು ನಿಜ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆಗೆ ಮಾತನಾಡಿದ್ರೆ ನ್ಯಾಯ ಸಿಗುತ್ತೆ ಅನ್ನೋ ಕಾರಣಕ್ಕೆ ಹೀಗೆ ಹೇಳಿದ್ದೇನೆ. ಇನ್ನು ನರೇಶ್ ಬಗ್ಗೆಯೂ ಗೊತ್ತಿದೆ. ಅವರು ನನಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ.

https://kannada.newsnext.live/cd-lady-audio-leak-big-news/

ಇನ್ನೊಂದೆಡೆ ಯುವತಿ ಪರ ವಕೀಲರಾದ ಜಗದೀಶ್ ಅವರು ಸಿಡಿ ಪ್ರಕರಣದ ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಆರೋಪಿ ಸಾಕ್ಷಿಗಳನ್ನು ಹೆದರಿಸುತ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ಎಸ್ ಐಟಿ, ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಬ್ಬನ್ ಪಾರ್ಕ್ ಪೊಲೀಸರು, ಎಸ್ ಐಟಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

https://kannada.newsnext.live/healthtips-bed-tea-danger-cancer-attack-notgood-for-health/

Comments are closed.