ಹೈಕಮಾಂಡ್ ಹಂಗು ತೊರೆದು ಕೆಲಸ ಮಾಡಿ…! ಬೊಮ್ಮಾಯಿಗೆ ಬಂತು ಸಲಹೆ…!!

ಬೆಂಗಳೂರು : ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ‌ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಸಿಎಂಗೆ ಎಲ್ಲೆಡೆಯಿಂದ ಶುಭಾಶಯಗಳ‌ ಮಹಾಪೂರವೇ ಹರಿದು ಬಂದಿದ್ದರೇ, ಸ್ಯಾಂಡಲ್ ವುಡ್ ನಿಂದ ಮಹತ್ವದ ಸಲಹೆಯೊಂದು ಬಂದಿದೆ.

ಸ್ಯಾಂಡಲ್ ವುಡ್ ಹಿರಿಯ ಚಿತ್ರ ನಿರ್ದೇಶಕ‌ ನಾಗತಿಹಳ್ಳಿ ಚಂದ್ರಶೇಖರ್ ನೂತನ ಸಿಎಂಗೆ ಶುಭಕೋರಿದ್ದು, ಸಮಾಜದ ಕಟ್ಟ ಕಡೆಯ ಜೀವದ ಬಗ್ಗೆ ಕಾಳಜಿ ಇರಲಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಾಗತಿಹಳ್ಳಿ ಚಂದ್ರಶೇಖರ್, ಪ್ರೀತಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮನುಷ್ಯ ಪ್ರೀತಿ, ಸಾಹಿತ್ಯಪ್ರೀತಿ, ಪ್ರಾಣಿ ಪ್ರೀತಿ ಉಳ್ಳಂತ‌ನೀವು ನನಗೆ ಆಸೆ ಹುಟ್ಟಿಸಿದ್ದೀರಿ. ನೀವು ಹೈಕಮಾಂಡ್, ಲೋ ಕಮಾಂಡ್ ಗಳ ಹಂಗು ಮೀರಿ ಅದ್ಭುತ ಕೆಲಸ ಮಾಡಿ. ಚಮಚೆಗಳನ್ನು ದೂರವಿಡಿ. ಸಮಾಜದ ಕಟ್ಟ‌ಕಡೆಯ ಜೀವದ ಬಗ್ಗೆ ಕಾಳಜಿ ವಹಿಸಿ. ನೆನಪಿರಲಿ ಅಧಿಕಾರ ಅಲ್ಪಕಾಲೀನ ಎಂದು ನಾಗತಿಹಳ್ಳಿ ಬೊಮ್ಮಾಯಿಯವರನ್ನು ಎಚ್ಚರಿಸಿದ್ದಾರೆ.

ಕೇವಲ ನಾಗತಿಹಳ್ಳಿ ಮಾತ್ರವಲ್ಲ ನಟ ಸುದೀಪ್ ಕೂಡಾ ಶುಭಹಾರೈಸಿದ್ದು, ಅವರ ಸರಳತೆಯನ್ನು ನೋಡಿ ಬೆಳೆದವನು‌ ನಾನು. ನನ್ನ ವೃತ್ತಿ ಬದುಕಿನ ಆರಂಭದಲ್ಲಿ ನನಗೆ ಉತ್ತಮ ಪ್ರೋತ್ಸಾಹ,ಬೆಂಬಲ ನೀಡಿದ್ದರು. ಒಳ್ಳೆಯದಾಗಲಿ ಮಾಮಾ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ನೂತನ ಸಿಎಂ ಆಯ್ಕೆ ಸ್ಯಾಂಡಲ್ ವುಡ್ ನಲ್ಲೂ ಒಂದಷ್ಟು ಹೊಸ ನೀರಿಕ್ಷೆಗಳನ್ನು ಹುಟ್ಟುಹಾಕಿದ್ದು, ಬೊಮ್ಮಾಯಿ ಇದಕ್ಕೆ ಹೇಗೆ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.

Comments are closed.