Kumaraswamy promises to DeveGowda: 60 ವರ್ಷದಲ್ಲಿ ನೀವು ಮಾಡದ ಸಾಧನೆಯನ್ನು ನಾನು ಮಾಡುತ್ತೇನೆ: ದೇವೇಗೌಡರಿಗೆ ಕುಮಾರಸ್ವಾಮಿ ಶಪಥ

ಬೆಂಗಳೂರು : (Kumaraswamy promises to DeveGowda) ಟಿ. ನರಸಿಪುರದಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡುವ ವೇಳೆ ತಂದೆಯ ಅನಾರೋಗ್ಯವನ್ನು ನೆನೆದು ಭಾವುಕರಾದ ಕುಮಾರಸ್ವಾಮಿ ಅವರು 60 ವರ್ಷದಲ್ಲಿ ನೀವು ಮಾಡದ ಸಾಧನೆಯನ್ನು ನಾನು ಮಾಡುತ್ತೇನೆ. ಅಲ್ಲಿಯವರೆಗೆ ನೀವು ಸಾಯಬಾರದು ಎಂದು ದೇವೇಗೌಡರ ಮುಂದೆ ಶಪಥ ಮಾಡಿರುವ ಬಗ್ಗೆ ಭಾವುಕರಾಗಿ ಹೇಳಿದ್ದಾರೆ.

ಅನಾರೋಗ್ಯದ ಕಾರಣ ದೇವೇಗೌಡರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕಾರಣದಿಂದಾಗಿ ಅವರು ಹಲವು ಕಾರ್ಯಕ್ರಮಗಳಲ್ಲಿ ಗೈರಾಗಿದ್ದರು. ತಂದೆಯ ಆರೋಗ್ಯ ಸ್ಥೀತಿಯನ್ನು ನೆನೆದು ಭಾವುಕರಾಗಿದ್ದ ಕುಮಾರಸ್ವಾಮಿ ಅವರು ವೇದಿಕೆಯ ಮೇಲೆ ಕಣ್ಣೀರಿಟ್ಟಿದ್ದಾರೆ. ಅಂದು ನಾನು ಆಸ್ಪತ್ರೆಗೆ ಹೋಗಿದ್ದಾಗ ತಂದೆಯವರಲ್ಲಿ ಶಪಥ ಮಾಡಿ ಬಂದಿರುವೆ. ನೀವು 60 ವರ್ಷದಲ್ಲಿ ಮಾಡದ ಸಾಧನೆಯನ್ನು ನಾನು ಮಾಡಿ ತೋರಿಸುತ್ತೇನೆ. ಅಲ್ಲಿಯವರೆಗೂ ನೀವು ಸಾಯಬೇಡಿ ಎಂದಿದ್ದೇನೆ ಎನ್ನುವುದಾಗಿ ವೇದಿಕೆಯ ಮೇಲೆ ಭಾವುಕ ನುಡಿಗಳನ್ನಾಡಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸರಕಾರ ಅಧಿಕಾರಕ್ಕೆ ಬರಲಿದೆ. ನನ್ನ ಜನಪರ ಆಡಳಿತವನ್ನು ನೋಡಿದ ಬಳಿಕ ಶಿವಪಾದವನ್ನು ಸೇರಿಕೊಳ್ಳಿ. ಅಲ್ಲಿಯವರೆಗೂ ನೀವು ಸಾಯಬಾರದು ಎಂದು ಕೈಮುಟ್ಟಿ ಶಪಥ ತೆಗೆದುಕೊಂಡಿದ್ದೇನೆ ಎಂದರು. ಇನ್ನೂ ಕುಮಾರಸ್ವಾಮಿಯವರ ಭಾವುಕ ನುಡಿಗೆ ಪಕ್ಷದ ಕಾರ್ಯಕರ್ತರ ಕಣ್ಣುಗಳು ಕೂಡ ತೇವಗೊಂಡಿದ್ದವು. ಇನ್ನೂ ಪಂಚರತ್ನ ಯಾತ್ರೆಯ ಮೂಲಕ ಮಿಂಚಿನ ಸಂಚಾರ ನಡೆಸುತ್ತಿರುವ ಕುಮಾರಸ್ವಾಮಿ ಅವರು ಹಲವು ಕಡೆ ಪ್ರಚಾರಗಳನ್ನು ನಡೆಸಿದ್ದಾರೆ. ಇದಲ್ಲದೇ ಜೆಡಿಎಸ್‌ ಅಭ್ಯರ್ಥಿಯಾದ ಅಶ್ವಿನ್‌ ಕುಮಾರ್‌ ಅವರನ್ನು ಬೆಂಬಲಿಸುವಂತೆಯೂ ಮನವಿ ಮಾಡಿದ್ದಾರೆ.

60 ವರ್ಷದಲ್ಲಿ ನೀವು ಮಾಡದ ಸಾಧನೆಯನ್ನು ನಾನು ಮಾಡುತ್ತೇನೆ. ಅಲ್ಲಿಯವರೆಗೂ ನೀವು ಸಾಯಬೇಡಿ. ನನ್ನ ಸಾಧನೆಯನ್ನು ನೋಡಿದ ಬಳಿಕ ಬೇಕಿದ್ದರೆ ನೀವು ಶಿವನ ಪಾದ ಸೇರಿಕೊಳ್ಳಿ” ಎಂದು ದೇವೇಗೌಡರ ಕೈಮುಟ್ಟಿ ಶಪಥ ಮಾಡಿರುವುದಾಗಿ ಸಭೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ವಿರಾಜಪೇಟೆಗೆ ಎ.ಎಸ್.ಪೊನ್ನಣ್ಣ, ಮಡಿಕೇರಿಗೆ ಡಾ.ಮಂತರ್ ಗೌಡ, ಸುಳ್ಯಕ್ಕೆ ನಂದಕುಮಾರ್ ಕಾಂಗ್ರೆಸ್ ಅಭ್ಯರ್ಥಿ

ಇದನ್ನೂ ಓದಿ : Karnataka MLA Election 2023 : ಟಿಕೆಟ್‌ಗಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಪೈಪೋಟಿ

ಇದನ್ನೂ ಓದಿ : Karnataka MLA Election 2023 : ಪ್ರಜಾಕೀಯ ನಾಮನಿರ್ದೇಶನಕ್ಕೆ ಮಾರ್ಚ್ 24 ಕೊನೆಯ ದಿನ

Kumaraswamy promises to DeveGowda: I will do what you have not done in 60 years: Kumaraswamy vows to DeveGowda

Comments are closed.