MLA Renukacharya : ಶಾಸಕ ರೇಣುಕಾಚಾರ್ಯ ಸೋದರನ ಮಗ ನಾಪತ್ತೆ ಪ್ರಕರಣ ; ಕಣ್ಣೀರಿಟ್ಟ ಶಾಸಕ

ದಾವಣಗೆರೆ : (MLA Renukacharya) ಶಾಸಕ ಎಂ.ಪಿ ರೇಣುಕಾಚಾರ್ಯ ಸೋದರನ ಪುತ್ರ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಭಾರೀ ಅನುಮಾನವನ್ನು ಹುಟ್ಟುಹಾಕಿದೆ. ಶಾಸಕ ರೇಣುಕಾಚಾರ್ಯರ (MLA Renukacharya)ಸಹೋದರನ ಮಗ 27 ವರ್ಷದ ಚಂದ್ರಶೇಖರ್ ನಾಪತ್ತೆಯಾಗಿದ್ದು, ಶಾಸಕರು ಕಣ್ಣೀರಿಟ್ಟಿದ್ದಾರೆ.

ಭಾನುವಾರ ಶಿವಮೊಗ್ಗ ಮೂಲಕವಾಗಿ ಚಂದ್ರಶೇಖರ್‌ ಅವರ ಕಾರು ಹೊನ್ನಾಳಿ ಕಡೆ ಬಂದಿತ್ತು. ಆದರೆ ಆ ಕಾರು ಹೊನ್ನಾಳಿಗೆ ತಲುಪಿಲ್ಲ ಎನ್ನುವ ಮಾಹಿತಿ ಕೆಲವು ಮೂಲಗಳಿಂದ ತಿಳಿದುಬಂದಿದೆ . ಶಿವಮೊಗ್ಗ ಹಾಗೂ ನ್ಯಾಮತಿ ನಡುವೆ ಇರುವ ಸುರಹೊನ್ನೆ ಎಂಬಲ್ಲಿ ಚಂದ್ರಶೆಖರ್‌ ಅವರ ಕೆಎ-17 ಎಂಎ 2534 ನಂಬರ್‌ ನ ಹೊಂಡಾಯ್ ಕ್ರೇಟಾ ಕಾರು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಇದೀಗ ಚಂದ್ರಶೇಖರ್‌ ಕಾಣೆಯಾಗಿರುವ ವಿಚಾರ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ .

ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟ ಗಾಡಿಯಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಅವರ ಜೊತೆ ಸ್ವಲ್ಪ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು. ಆದರೆ ಸುರಹೊನ್ನೆ ಮೂಲಕವಾಗಿ ಹೊನ್ನಾಳಿಯ ಕಡೆ ಬಂದಿದ್ದ ಚಂದ್ರಶೇಖರ್‌ ನಾಪತ್ತೆಯಾಗಿದ್ದು, ಮತ್ತೇ ಯಾವ ಕಡೆ ಹೋಗಿದ್ದಾರೆ ಎನ್ನುವ ಮಾಹಿತಿ ಇನ್ನೂ ಸಿಕ್ಕಿಲ್ಲ. ಬಳಿಕ ಚಂದ್ರಶೇಕರ್‌ ನ ಮೊಬೈಲ್‌ ಲೊಕೇಷನ್‌ ಹೊನ್ನಾಳಿಯಲ್ಲಿ ಕೊನೆಯದಾಗಿ ತೋರಿಸುತ್ತಿದ್ದು, ನಂತರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ .

ಇದನ್ನೂ ಓದಿ : ಪ್ರಭಾವಿ ಬಿಜೆಪಿ ಶಾಸಕರಿಗೆ ನಗ್ನ ವಿಡಿಯೋ ಕಾಲ್ ಮಾಡಿ ಹನಿಟ್ರ್ಯಾಪ್ ಯತ್ನ : ಪ್ರಕರಣ ದಾಖಲು

ಚಂದ್ರಶೇಖರ್ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ರೇಣುಕಾಚಾರ್ಯ ಅವರಿಗೆ ಸಂಬಂಧಿಸಿದ ರಾಜಕೀಯ ಕಾರ್ಯಕ್ರಮ ಗಳಲ್ಲಿಯೂ ಚಂದ್ರಶೇಖರ್ ಭಾಗಿಯಾಗುತ್ತಿದ್ದರು.ಯಾವಾಗಲೂ ಸ್ನೇಹಿತರ ಜೊತೆಯಲ್ಲಿಯೇ ಇರುತ್ತಿದ್ದ ಚಂದ್ರಶೇಖರ್ ಭಾನುವಾರ ಮಾತ್ರ ಒಬ್ಬನೇ ಗೌರಿಗದ್ದೆಗೆ ಹೋಗಿದ್ದಾನೆ ಎಂದು ಸಚಿವರು(MLA Renukacharya) ಮಾಹಿತಿ ನೀಡಿದರು.

ಇದನ್ನೂ ಓದಿ : ಕರ್ನಾಟಕ ಬಿಜೆಪಿಯಲ್ಲಿ ಭರ್ಜರಿ ಸರ್ಜರಿ : ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್, ಹಾಲಿ ಶಾಸಕರಿಗೆ ಟೆನ್ಶನ್

ನಾಪತ್ತೆಯಾದ ಸಹೋದರನ ಮಗನ ಕುರಿತು ಮಾಧ್ಯಮಗಳ ಜೊತೆ ಮಾತನಾಡುತ್ತಲೇ ರೇಣುಕಾಚಾರ್ಯ ಅವರು, ಚಂದ್ರಶೇಖರ್‌ ಸದಾ ನನ್ನ ಜೊತೆಯಲ್ಲಿಯೇ ಇರುತ್ತಿದ್ದ. ಚಂದ್ರಶೇಖರ್ ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದನು.ಮಗ ಚಂದ್ರು ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂದು ನಂಬಿದ್ದೇನೆ. ಆತ ಬಂದ ಕೂಡಲೇ ಮಗನನ್ನು ಮುದ್ದಾಡಬೇಕೆಂಬ ಆಸೆ ಆಗ್ತಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : Congress Twitter war: ಕೇಂದ್ರದ ಆರ್ಥಿಕತೆಯಿಂದ ರಾಜ್ಯ ಕಂದಾಯ ಸಚಿವರಿಗೆ ಪಕೋಡಾ ಮಾರುವ ಸ್ಥಿತಿ ಬಂದಿದೆ; ಕಾಂಗ್ರೆಸ್ ಲೇವಡಿ

ಹೊನ್ನಾಳಿ ಪೊಲೀಸರರು ನಾಪತ್ತೆಯಾಗಿರುವ ಚಂದ್ರಶೇಕರ್‌ ಅವರ ಹುಡುಕಾಟ ನಡೆಸುತ್ತಿದ್ದು, ಈ ಕುರಿತು ಹೊನ್ನಾಳಿ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಹಿನ್ನೆಲೆ ಇಡೀ ಕುಟುಂಬ ಚಂದ್ರಶೇಖರ್ ಹುಡುಕಾಟದಲ್ಲಿದ್ದು, ಪೊಲೀಸರಿಗೆ ಕೊಟ್ಟ ದೂರಿನಲ್ಲೂ ಕೂಡ ನಾಪತ್ತೆ ಅಂತಷ್ಟೇ ಉಲ್ಲೇಖಿಸಲಾಗಿದೆ

(MLA Renukacharya) MLA MP Renukacharya’s brother’s son has been missing for the past three days, raising huge suspicion. MLA Renukacharya’s brother’s son Chandrasekhar, 27, has gone missing, MLAs are in tears.

Comments are closed.