ModiKiGuarantee : ಪಂಚರಾಜ್ಯಗಳ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (Election Result 2023) ಇಂದು ಹೊರಬಿದ್ದಿದೆ. ಮಧ್ಯಪ್ರದೇಶ (Madhya Pradesh Election 2023), ರಾಜಸ್ಥಾನ (Rajastan Election 2023), ಛತ್ತೀಸ್ಗಢ (chhattisgarh Election 2023) ದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಉತ್ತರದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಮೋದಿ ಗ್ಯಾರಂಟಿ ಭರ್ಜರಿ ಸದ್ದು ಮಾಡುತ್ತಿದೆ.
ರಾಜಸ್ಥಾನ, ಉತ್ತರಪ್ರದೇಶ, ಛತ್ತೀಸ್ಗಡ, ತೆಲಂಗಾಣ ಹಾಗೂ ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ನಾಲ್ಕು ರಾಜ್ಯಗಳ ಫಲಿತಾಂದ ಪೈಕಿ ಬಿಜೆಪಿ ಮೇಲುಗೈ ಸಾಧಿಸಿದೆ. ಮಿಯೋರಾಂ ವಿಧಾನಸಭಾ ಚುನಾವಣಾ ಫಲಿತಾಂಶ ನಾಳೆ ಹೊರಬೀಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಚ್ಚರಿಯ ಫಲಿತಾಂಶ ಸಾಧಿಸಿದ್ದು, ಬಿಜೆಪಿ ಉತ್ತರದಲ್ಲಿ ಪ್ರಾಬಲ್ಯ ಮೆರೆದಿದೆ.
ದೇಶಕ್ಕೆ "ನಮೋ" ಗ್ಯಾರಂಟಿ.
ಪ್ರಧಾನಿ ಶ್ರೀ @narendramodi ಅವರು ಇದ್ದರೆ ಎಲ್ಲವೂ ಸಾಧ್ಯ.#ModiKiGuarantee pic.twitter.com/llcsnqkLmv
— BJP Karnataka (@BJP4Karnataka) December 3, 2023
ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ರೆ, ಉತ್ತರ ಭಾರತದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಫಲಕೊಡಲಿಲ್ಲ. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಗ್ಯಾರಂಟಿ ಭರ್ಜರಿ ಟ್ರೆಂಡಿಂಗ್ ಆಗುತ್ತಿದೆ.
ಇದನ್ನೂ ಓದಿ : ಬಿಜೆಪಿಗೆ ಬಿಎಸ್ ಯಡಿಯೂರಪ್ಪ ಅನಿವಾರ್ಯ : ಕರ್ನಾಟಕ ರಾಜ್ಯ ಬಿಜೆಪಿಗೆ ಬಿವೈ ವಿಜಯೇಂದ್ರ ಅಧ್ಯಕ್ಷ
ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ನಡೆದ ಪಂಚರಾಜ್ಯ ಚುನಾವಣೆ ಬಿಜೆಪಿ ಹೊಸ ಬಲ ತಂದು ಕೊಟ್ಟಿದೆ. ಕರ್ನಾಟಕ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕೂಡ ದೇಶದಾದ್ಯಂತ ಫಲಕೊಡುತ್ತೆ ಅಂತಾ ನಂಬಿದ್ದ ಕಾಂಗ್ರೆಸ್ಗೆ ಶಾಕ್ ಕೊಟ್ಟಿದೆ.
देश का भरोसा, मोदी की गारंटी।#ModiKiGuarantee pic.twitter.com/1lE9dX6F6r
— Dr. S. Jaishankar (@DrSJaishankar) December 3, 2023
ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲು ಮಾಡುತ್ತಿದ್ದಂತೆಯೇ ಬಿಜೆಪಿ ನಾಯಕರು ದೇಶಕ್ಕೆ ಒಂದೇ ಗ್ಯಾರಂಟಿ.. ಅದು ಮೋದಿ ಗ್ಯಾರಂಟಿ ಅನ್ನೋ ಘೋಷಣೆಯನ್ನು ಆರಂಭಿಸಿದ್ದಾರೆ. ಮಾತ್ರವಲ್ಲ ಕರ್ನಾಟಕ ಬಿಜೆಪಿ ಕೂಡ ಈ ಕುರಿತು ಪೋಸ್ಟ್ ಮಾಡಿದ್ದು, ದೇಶಕ್ಕೆ ನಮೋ ಗ್ಯಾರಂಟಿ. ಪ್ರಧಾನಿ ನರೇಂಧ್ರ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದೆ.
ಇದನ್ನೂ ಓದಿ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ನಿಂದ ರಮಾನಾಥ ರೈ, ಹರೀಶ್ ಕುಮಾರ್ ಕಣಕ್ಕೆ
ಇಷ್ಟೇ ಅಲ್ಲಾ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ದೇಶದ ಜನರು “ಮೋದಿ ಕಿ ಗ್ಯಾರಂಟಿ” ಅನ್ನು ಮಾತ್ರ ನಂಬುತ್ತಾರೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಅವರು ದೇಶದಾದ್ಯಂತ ನಂಬಿಗಸ್ತರಾಗಿದ್ದು, ಭಾರತದ ಜನರು ಒಂದೇ ಒಂದು ಗ್ಯಾರಂಟಿಯನ್ನು ನಂಬುತ್ತಾರೆ. ಅದು ಮೋದಿ ಅವರ ಗ್ಯಾರಂಟಿ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Digital Advocacy: ಡಿಜಿಟಲೀಕರಣ ತಂತ್ರಜ್ಞಾನದ ಕಾನೂನು ವ್ಯವಸ್ಥೆಯತ್ತ ವಕೀಲರು
ತೆಲಂಗಾಣದಲ್ಲಿ ಸೋಲಿಲ್ಲದ ಸರದಾನಂತೆ ಮೆರೆದಿದ್ದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಸರಕಾರಕ್ಕೆ ಬಾರೀ ಮುಖಭಂಗವಾಗಿದೆ. ಕಾಂಗ್ರೆಸ್ ತೆಲಂಗಾಣದಲ್ಲಿ ಅಧಿಕಾರದ ಗದ್ದುಗೆಗೆ ಏರಿದೆ. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಬಿಜೆಪಿ ರಾಜಸ್ಥಾನದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ModiKiGuarantee trend on Social Media After bjp win Madhya Pradesh Rajastana and chhattisgarh Election 2023