ನಾಳೆ ದೊಡ್ಡ ಬಾಂಬ್ ಸಿಡಿಸುತ್ತೇನೆ : ಡಿಕೆಶಿಗೆ ಒಳ್ಳೆಯದಾಗಲಿ : ರಮೇಶ್ ಜಾರಕಿಹೊಳಿ

ಬೆಂಗಳೂರು : ಡಿ.ಕೆ.ಶಿವಕುಮಾರ್ ಸಾಕಷ್ಟು ಕಷ್ಟಪಟ್ಟು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ನನ್ನ ಹಳೆಯ ಸ್ನೇಹಿತ. ನಾಳೆ ನಾನು ಇದ್ದಕ್ಕಿಂತಲೂ ದೊಡ್ಡ ಬಾಂಬ್ ಸಿಡಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ, ರಮೇಶ್ ಜಾರಕಿಹೊಳಿ ಅವರು, ಯುವತಿಯ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಆಡಿಯೋ ನಾನು ಕೇಳಿಸಿಕೊಂಡಿಲ್ಲ. ಆ ಆಡಿಯೋ ಬಗ್ಗೆ ನನಗೇನು ಗೊತ್ತಿಲ್ಲ. .ಕೆ.ಶಿವಕುಮಾರ್ ನನ್ನ ಹಳೆಯ ಸ್ನೇಹಿತ ಅವರಿಗೆ ಒಳ್ಳೆಯದಾಗಲಿ. ಅವರು ಸಾಕಷ್ಟು ಕಷ್ಟಪಟ್ಟು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದಿದ್ದಾರೆ.

https://kannada.newsnext.live/cd-lady-audio-leak-big-news/

ಎಫ್ ಐಆರ್ ಹಾಕಿದ ತಕ್ಷಣ ನಾನು ಅಪರಾಧಿಯಾಗೋದಿಲ್ಲ. ನಾನು ನಿರಪರಾಧಿಯಾಗಿ ಹೊರಗೆ ಬರುತ್ತೇನೆ. ನಾನು ಯಾವುದೇ ಕಾರಣಕ್ಕೂ ಜಾಮೀನು ಪಡೆಯೋದಿಲ್ಲ. ಮೊದಲು ನಾನು ಕೊಟ್ಟ ದೂರಿನ ಬಗ್ಗೆ ತನಿಖೆ ನಡೆಯಬೇಕು. ನಾಳೆ ಸಂಜೆ 4 ಗಂಟೆಗೆ ಇನ್ನಷ್ಟು ಮಾಹಿತಿಯನ್ನು ನೀಡುತ್ತೇನೆ ಎಂದಿದ್ದಾರೆ.

Comments are closed.