Shobha Karandlaje:ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್​​ನಿಂದ ಆರ್​ಎಸ್​ಎಸ್​ ಬ್ಯಾನ್​ ಹೇಳಿಕೆ : ಶೋಭಾ ಕರಂದ್ಲಾಜೆ ಗುಡುಗು

ಉಡುಪಿ : Shobha Karandlaje : ದೇಶದಲ್ಲಿ ಐದು ವರ್ಷಗಳ ಕಾಲ ಪಿಎಫ್​ಐ ಬ್ಯಾನ್​ ಮಾಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಿಎಫ್​ಐ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಪಿಎಫ್​ಐ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, ಪಿಎಫ್​ಐ ಹಿಂದೂ ಯುವಕರ ಕೊಲೆಯಲ್ಲಿ ಭಾಗಿಯಾಗಿದೆ. ಎನ್​ಐಎ ಮೂರು ವರ್ಷ ದಾಖಲೆ ಸಂಗ್ರಹ ಮಾಡಿದೆ.ಎಸ್​ಡಿಪಿಐ ಒಂದು ರಾಜಕೀಯ ಪಕ್ಷ. ಹೀಗಾಗಿ ಎಸ್​ಡಿಪಿಐ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.


ಎಸ್​ಡಿಪಿಐನಲ್ಲಿರುವ ಪಿಎಫ್​ಐ ಕಾರ್ಯಕರ್ತರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ಗೃಹ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ದೇಶಾದ್ಯಂತ ಜಿಲ್ಲಾಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ. ಬಾಂಬ್​ ತಯಾರಿಕೆ,ಶಸ್ತ್ರಾಸ್ತ್ರ ಬಳಕೆ ಮಾಡಲು ಪಿಎಫ್​​ಐ ತರಬೇತಿ ನೀಡುತ್ತಿತ್ತು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗುತ್ತಿತ್ತು. ಶಿವಮೊಗ್ಗದಲ್ಲಿ ಮೂವರು ಇಂಜಿನಿಯರ್​ಗಳನ್ನು ಬಂಧಿಸಿದ ಬಳಿಕ ಈ ಮಾಹಿತಿ ಸಿಕ್ಕಿದೆ. ತುಂಗಾ ನದಿ ತೀರದಲ್ಲಿ ಬಾಂಬ್​​ ಪ್ರಯೋಗ ಯಶಸ್ವಿಯಾದ ಬಳಿಕ ರಾಷ್ಟ್ರಧ್ವಜವನ್ನು ಅರ್ಧ ಸುಟ್ಟು ಸಂಭ್ರಮಿಸಿದ್ದಾರೆ ಎಂದು ಗುಡುಗಿದ್ದಾರೆ .


ಭಾರತವನ್ನು ದುರ್ಬಲಗೊಳಿಸಬೇಕು ಎನ್ನುವುದು ಪಿಎಫ್​ಐ ಉದ್ದೇಶವಾಗಿತ್ತು. ಭಾರತದ ಎಲ್ಲಾ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ದೇಶದ ವಿರುದ್ಧ ಇರುವವರ ಮಾನಸಿಕತೆಯನ್ನು ಬದಲಿಸುವುದು ಪಿಎಫ್​ಐ ಉದ್ದೇಶವಾಗಿತ್ತು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.


ಆರ್​ಎಸ್​ಎಸ್​ ಬ್ಯಾನ್​ ಮಾಡುವಂತೆ ಕಾಂಗ್ರೆಸ್​ ಬೇಡಿಕೆ ಇಟ್ಟಿರುವ ವಿಚಾರವಾಗಿಯೂ ಇದೇ ವೇಳೆ ಟಾಂಗ್​ ನೀಡಿದ ಅವರು, ಕಾಂಗ್ರೆಸ್​ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ನಾವಿಕನಿಲ್ಲದ ದೋಣಿಯೆಂದರೆ ಅದು ಕಾಂಗ್ರೆಸ್​ . ಆರ್​ಎಸ್​ಎಸ್​ ನಿಷೇಧ ಮಾಡಿದಾಗ ಕಾಂಗ್ರೆಸ್​ಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಆರ್​ಎಸ್​ಎಸ್​​​ ಬ್ಯಾನ್​ ಮಾಡಿದ ಇಂದಿರಾ ಗಾಂಧಿಯನ್ನು ಜನತೆ ಸೋಲಿಸಿದ್ದರು. ಆರ್​ಎಸ್​ಎಸ್​ ಯಾವ ದೇಶದ್ರೋಹಿ ಚಟುವಟಿಕೆ ಮಾಡಿದೆ..? ಒಂದು ಬಾರಿ ಆರ್​ಎಸ್​ಎಸ್​​ ಶಾಖೆಗೆ ಭೇಟಿ ಕೊಡಿ. ಮುಸಲ್ಮಾನರನ್ನು ಓಲೈಸಲು ಈ ರೀತಿ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದಾರೆ.


ರಾಹುಲ್​ ಗಾಂಧಿಯ ಭಾರತ್​ ಜೋಡೋ ಯಾತ್ರೆಯ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ಭಾರತವನ್ನು ಎಲ್ಲೆಲ್ಲಿ ವಿಭಜನೆ ಮಾಡಿದ್ದೀರೋ ಅಲ್ಲೆಲ್ಲ ಹೋಗಿ ಭಾರತ್​ ಜೋಡೋ ಯಾತ್ರೆ ಮಾಡಿ. ಪಾಕ್​ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ..? ಹಿಮಾಲಯ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯೋದಿಲ್ಲ ಅಂತಾ ನೆಹರೂ ಹೇಳಿದ್ದರು. ಹಾಗಾಗಿ ಹಿಮಾಲಯನ್ನು ಬಿಟ್ಟುಕೊಟ್ಟಿದ್ದೆವು. ರಾಹುಲ್​ ಗಾಂಧಿ ಪಾಕ್​, ಚೀನಾ ಹಾಗೂ ಬಾಂಗ್ಲಾ ಗಡಿಗಳಲ್ಲಿ ಭಾರತ್​ ಜೋಡೋ ಯಾತ್ರೆ ಮಾಡಲಿ ಎಂದು ಗುಡುಗಿದ್ದಾರೆ.

ಇದನ್ನು ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್

ಇದನ್ನೂ ಓದಿ : Sabbakki Paddu : ಉಪವಾಸದ ದಿನದಂದು ಮನೆಯಲ್ಲೇ ಮಾಡಿ ಸಬ್ಬಕ್ಕಿ ಪಡ್ಡು

RSS ban statement by Congress for Muslim vote bank :shobha Karandlaje Gudugu

Comments are closed.