Mallikarjun Kharge : ಕಾಂಗ್ರೆಸ್‌ ಅಧ್ಯಕ್ಷರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ : ಭವಿಷ್ಯ ನುಡಿದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು : ಕಾಂಗ್ರೆಸ್‌ ಪಕ್ಷದ ರಾಷ್ಟೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಮಾಜಿ ಸಚಿವ ಕೆ.ಎನ್‌.ತ್ರಿಪಾಠಿ, ಸಂಸದ ಶಶಿ ಶಿರೂರು ಹಾಗೂ ಗಾಂಧಿ ಪರಿವಾರದ ನಿಷ್ಠ ಮತ್ತು ಪಕ್ಷದ ಮಾಜಿಸಂಸದ ಹಾಗೂ ಹಾಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕೂಡ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ ಪಕ್ಷದ ಮಾಸ್ಟರ್ ಕೀ ಎನ್ನಿಸಿ ಕೊಂಡಿರುವ ಈ ಹುದ್ದೆಗೆ ಖರ್ಗೆ ಅರ್ಜಿ ಸಲ್ಲಿಸಿರೋದು ರಾಜ್ಯ ಕಾಂಗ್ರೆಸ್ ಪಾಲಿಗೆ ಗೌರವದ ಸಂಗತಿಯಾಗಿದೆ. ಈ ಮೂವರು ನಾಯಕರು ನಿನ್ನೆಯಷ್ಟೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈಗಾಗಲೇ ಮುಂದಿನ ಅಧ್ಯಕ್ಷ ಸ್ಥಾನವನ್ನು ಯಾರು ಅಂಗೀಕರಿಸಲಿದ್ದಾರೆ ಎನ್ನುವುದು ಬಹಳ ಕುತೂಹಲವನ್ನು ಮೂಡಿಸಿದೆ. ಈ ನಡುವಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜೀವನದ ಕುರಿತು ಭವಿಷ್ಯವೊಂದು ಕೇಳಿಬಂದಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಖರ್ಗೆ (Mallikarjun Kharge)ಅವರ ರಾಜಕೀಯ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸ್ವಾಮೀಜಿ ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಬಾರಿಯ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.

ಖರ್ಗೆ ಬಗ್ಗೆ ಸ್ವಾಮೀಜಿ ಭವಿಷ್ಯ ನುಡಿದಿದ್ದೇನು ?

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸದ್ಯದ ದಶಾಬುಕ್ತಿಯಲ್ಲಿ ಅತ್ಯಂತ ಅನುಕೂಲಕರ ಸ್ಥಿತಿಗತಿಗಳು ನಡೆಯುತ್ತಿದೆ ಇದರಿಂದಾಗಿ ಖರ್ಗೆ ಅವರಿಗೆ ಅಧಿಕಾರ ಪ್ರಾಪ್ತಿಯಾಗಲಿದೆ. ಆದ್ದರಿಂದ ಶ್ರೀಯುತರಿಗೆ ಆಶೀರ್ವಾದ ಮಾಡುತ್ತಾ ದೀನದಲಿತರಿಗೆ , ಬಡವರಿಗೆ, ನಿರುದ್ಯೋಗಿಗಳನ್ನು ಗುರುತಿಸಿ ಅವರಿಗೆ ಸಹಾಯವನ್ನು ಮಾಡಿ, ಮೇಲಾಗಿ ನಮ್ಮ ದೇಶ ನಿಂತಿರುವುದು ಕೃಷಿಯ ಮೇಲೆ ಆದ್ದರಿಂದ ರೈತರನ್ನು ಗಮನಿಸಿ, ಆದಷ್ಟು ರೈತರಿಗೆ ಆರ್ಥಿಕತೆಗೆ ಸಹಾಯ ಮಾಡಿ. ರೈತರ ಕುಟುಂಬದ ಶಿಕ್ಷಿತರಿಗೆ ನೆರವಾಗಿ, ಇದು ನಿಮಗೆ ನೆನಪಿರಲಿ, ಇದರಿಂದ ನಿಮಗೆ ಶ್ರೀ ಭಗವತಿ ಚಂಡಿಕಾ ಪರಮೇಶ್ವರಿಯು ಅನುಗ್ರಹ ಮಾಡುತ್ತಾಳೆ. ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭ ಆಶೀರ್ವಾದಗಳನ್ನು ನೀಡುತ್ತಾ. ಎಲ್ಲರೂ ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೆ ಮಾಡಿ, ನಿಮಗೂ ಒಳ್ಳೆಯದೇ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಎಐಸಿಸಿ ಅಧ್ಯಕ್ಷರಾಗ್ತಾರಾ ಖರ್ಗೆ: ದಲಿತ ನಾಯಕನ ಆಯ್ಕೆಗೆ ಕಾರಣಗಳೇನು ಗೊತ್ತಾ?

ಇದನ್ನೂ ಓದಿ : ಪೇ ಸಿಎಂ ಮುಜುಗರದ ಬಳಿಕ ಎಚ್ಚೆತ್ತ ಹೈಕಮಾಂಡ್: ರಾಜ್ಯ ಬಿಜೆಪಿ ಮೇಲೆ‌ಕಣ್ಣಿಡಲು ಸಂತೋಷ್ ಗೆ ಸೂಚನೆ

ಇದನ್ನೂ ಓದಿ : ‘ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ,ಸಿದ್ದರಾಮಯ್ಯರಂತೆ ಪಕ್ಷಾಂತರಿ ನಾನಲ್ಲ’ : ಈಶ್ವರಪ್ಪ ಗುಡುಗು

ಎನಗಿಂತ ಕಿರಿಯರಿಲ್ಲ, ಸದ್‌ ಭಕ್ತರಿಗಿಂತ ಹಿರಿಯರಿಲ್ಲ ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಹಾಗೆ ಮಲ್ಲಿಕಾರ್ಜುನ ಖರ್ಗೆಯವರಿಗೆ “ಕಾಂಗ್ರೆಸ್‌ ಅಧ್ಯಕ್ಷ”ಕ್ಕಿಂತ “ಜನಾಧ್ಯಕ್ಷ” ನಾಗು ಎಂದು ಆಶೀರ್ವಾದ ಮಾಡಿದ್ದಾರೆ. ಇನ್ನೂ ಸಿದ್ದಲಿಂಗ ಸ್ವಾಮೀಜಿಗಳ ಭವಿಷ್ಯ ನುಡಿದಂತೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಪಟ್ಟವನ್ನು ಮಲ್ಲಿಕಾರ್ಜುನ ಖರ್ಗೆಯವರು ಅಂಗೀಕರಿಸುತ್ತಾರಾ ? ಈ ಬಾರಿಯೂ ಸ್ವಾಮೀಜಿ ಅವರ ಭವಿಷ್ಯ ನಿಜವಾಗುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

Siddhalinga Shivacharya Swamiji predicts Mallikarjun Khar to become Congress President

Comments are closed.