Syed Mushtaq Ali Trophy : ಮನೀಶ್‌ ಪಾಂಡೆ, ಕದಂ ಆರ್ಭಟ : ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ದೆಹಲಿ : ಸಯ್ಯದ್‌ ಮುಷ್ತಾಕ್‌ ಆಲಿ ಟ್ರೋಫಿಯಲ್ಲಿ (Syed Mushtaq Ali Trophy) ವಿದರ್ಭ ತಂಡದ ವಿರುದ್ದ ಕರ್ನಾಟಕ ರೋಚಕ ಗೆಲುವು ದಾಖಲಿಸಿದೆ. ಕ್ವಾಟರ್‌ ಫೈನಲ್‌ ಪಂದ್ಯದಲ್ಲಿ ಸೂಪರ್‌ ಓವರ್‌ ಮೂಲಕ ಗೆಲುವು ಕಂಡಿದ್ದ ಕರ್ನಾಟಕ ಇದೀಗ ಸೆಮಿಫೈನಲ್‌ ಪಂದ್ಯದಲ್ಲಿ ವಿದರ್ಭ ತಂಡದ ವಿರುದ್ದ 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಫೈನಲ್‌ ಗೆ ಎಂಟ್ರಿ ಕೊಟ್ಟಿದ್ದು, ತಮಿಳುನಾಡು ತಂಡವನ್ನು ಎದುರಿಸಲಿದೆ.

ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡಕ್ಕೆ ಆರಂಭಿಕರಾದ ರೋಹನ್‌ ಕದಂ ಹಾಗೂ ಮನೀಶ್‌ ಪಾಂಡೆ ಉತ್ತಮ ಜೊತೆಯಾಟ ನೀಡಿದ್ರು. ರೋಹನ್‌ ಕದಂ 56 ಎಸೆತಗಳಲ್ಲಿ 87 ರನ್‌ ಬಾರಿಸಿದ್ರೆ, ನಾಯಕ ಮನೀಶ್‌ ಪಾಂಡೆ 42 ಎಸೆತಗಳಲ್ಲಿ 54ರನ್‌ ಸಿಡಿಸುವ ಮೂಲಕ ಮೊದಲ ವಿಕೆಟ್‌ಗೆ 132 ರನ್‌ ಜೊತೆಯಾಟ ನೀಡಿದ್ರು. ರೋಹನ್‌ ಕದಂ ಔಟಾಗುತ್ತಲೇ ಕ್ರೀಸ್‌ಗೆ ಬಂದ ಅಭಿನವ್‌ ಮನೋಹರ್‌ 27 ರನ್‌ ಬಾರಿಸಿದ್ದಾರೆ. ಆದರೆ ನಂತರದಲ್ಲಿ ಕರುಣ್‌ ನಾಯರ್‌, ಅನಿರುದ್ದ ಜೋಷಿ, ಬಿ.ಆರ್.‌ ಶರತ್‌ ಹಾಗೂ ಜೆ.ಸುಜಿತ್‌ ನಿರಾಸೆ ಅನುಭವಿಸಿದ್ರು. ಅಂತಿಮವಾಗಿ ಕರ್ನಾಟಕ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಿದೆ. ವಿದರ್ಭ ಪರ ದರ್ಶನ್‌ ನಲ್ಕಂಡೆ 4 ವಿಕೆಟ್‌ ಪಡೆರೆ, ಲಲಿತ್‌ ಯಾದವ್‌ 2 ಹಾಗೂ ಯಶ್‌ ಟಾಕೂರ್‌ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ಕರ್ನಾಟಕ ನೀಡಿದ ಸವಾಲಿನ ಮೊತ್ತವನ್ನು ಬೆನ್ನತಿದ ವಿದರ್ಭ ತಂಡಕ್ಕೆ ಆರಂಭಿಕರಾದ ಅತರ್ವ 32 ಹಾಗೂ ಗಣೇಶ್‌ ಸತೀಶ್‌ 31 ರನ್‌ ಗಳ ಉತ್ತಮ ಜೊತೆಯಾಟ ನೀಡಿದ್ರು. ನಂತರದಲ್ಲಿ ಅಕ್ಷಯ್‌ 15 ಹಾಗೂ ಶುಭಂ ದುಬೆ 24 ರನ್‌ ಬಾರಿಸಿದ್ದಾರೆ. ಜಿತೇಶ್‌ ಶರ್ಮಾ 12, ಅಪೂರ್ವ ವಾಖಂಡೆ 27 ಹಾಗೂ ಅಕ್ಷಯ್‌ ಕರ್ನೆವರ್‌ 22ರನ್‌ ಬಾರಿಸಿದ್ರು. ಆದರೆ ಅಂತಿಮವಾಗಿ ವಿದರ್ಭ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಸವಾಲಿನ 172ರನ್‌ ಗಳಿಸಲು ಮಾತ್ರವೇ ಸಾಧ್ಯವಾಯ್ತು. ಈ ಮೂಲಕ ಕರ್ನಾಟಕ ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿ : SMA T20 Karnataka win : ಬಂಗಾಳ ವಿರುದ್ದ ಸೂಪರ್‌ ಓವರ್‌ನಲ್ಲಿ ಗೆದ್ದಕರ್ನಾಟಕ ಸೆಮಿಫೈನಲ್‌ಗೆ ಎಂಟ್ರಿ

ಇದನ್ನೂ ಓದಿ : ರಾಹುಲ್‌ – ರೋಹಿತ್‌ ಆರ್ಭಟ, ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ

( Syed Mushtaq Ali Trophy Karnataka vs vidarbha semi final Karnataka win and enter final)

Comments are closed.