ಸೋಮವಾರ, ಏಪ್ರಿಲ್ 28, 2025
HomeSportsCricketKarnataka Ranji Team : ಕರ್ನಾಟಕ ರಣಜಿ ತಂಡಕ್ಕೆ ಮಯಾಂಕ್ ಸಾರಥ್ಯ, ಕರುಣ್ ನಾಯರ್‌ಗೆ ಇಲ್ಲೂ...

Karnataka Ranji Team : ಕರ್ನಾಟಕ ರಣಜಿ ತಂಡಕ್ಕೆ ಮಯಾಂಕ್ ಸಾರಥ್ಯ, ಕರುಣ್ ನಾಯರ್‌ಗೆ ಇಲ್ಲೂ ಇಲ್ಲ ಸ್ಥಾನ

- Advertisement -

ಬೆಂಗಳೂರು: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ (Ranji Trophy 2022-23) ಮೊದಲೆರೆಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು (Karnataka Ranji Team) ಪ್ರಕಟಿಸಲಾಗಿದ್ದು, ಮಯಾಂಕ್ ಅಗರ್ವಾಲ್’ಗೆ (Mayank Agarwal captain) ನಾಯಕ ಪಟ್ಟ ಕಟ್ಟಲಾಗಿದೆ. ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಅನುಭವಿ ಬ್ಯಾಟ್ಸ್’ಮನ್ ಕರುಣ್ ನಾಯರ್’ಗೆ (Karun Nair) ರಣಜಿ ತಂಡದಲ್ಲೂ ಅವಕಾಶ ನಿರಾಕರಿಸಲಾಗಿದೆ.

ಮತ್ತೊಬ್ಬ ಅನುಭವಿ ಆರಂಭಿಕ ಬ್ಯಾಟ್ಸ್’ಮನ್ ಆರ್.ಸಮರ್ಥ್ ಉಪನಾಯಕನಾಗಿ ನೇಮಕಗೊಂಡಿದ್ದು, ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಮಧ್ಯಮ ಕ್ರಮಾಂಕದ ಯುವ ಬ್ಯಾಟ್ಸ್’ಮನ್ ನಿಕಿನ್ ಜೋಸ್ ರಣಜಿ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಅಭಿಯಾನ ಡಿಸೆಂಬರ್ 13ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸರ್ವಿಸಸ್ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಡಿಸೆಂಬರ್ 20ರಂದು ಬೆಂಗಳೂರನಲ್ಲೇ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಪಾಂಡಿಚೇರಿ ತಂಡವನ್ನು ಎದುರಿಸಲಿದೆ.

ರಣಜಿ ಟ್ರೋಫಿ 2022-23: ಕರ್ನಾಟಕ ತಂಡ (Karnataka Ranji Team)

1.ಮಯಾಂಕ್ ಅಗರ್ವಾಲ್ (ನಾಯಕ), 2.ಆರ್.ಸಮರ್ಥ್ (ಉಪನಾಯಕ), 3.ನಿಕಿನ್ ಜೋಸ್, 4.ವಿಶಾಲ್ ಓನಟ್, 5.ಮನೀಶ್ ಪಾಂಡೆ, 6.ಕೆ.ವಿ ಸಿದ್ಧಾರ್ಥ್, 7.ಬಿ.ಆರ್ ಶರತ್ (ವಿಕೆಟ್ ಕೀಪರ್), 8.ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), 9.ಕೃಷ್ಣಪ್ಪ ಗೌತಮ್, 10.ಶ್ರೇಯಸ್ ಗೋಪಾಲ್, 11.ರೋನಿತ್ ಮೋರೆ, 12.ವಿ.ಕೌಶಿಕ್, 13.ವಿದ್ವತ್ ಕಾವೇರಪ್ಪ, 14.ವೈಶಾಖ್ ವಿಜಯ್ ಕುಮಾರ್, 15.ಶುಭಾಂಗ್ ಹೆಗ್ಡೆ.

ಕೋಚ್: ಪಿ.ವಿ ಶಶಿಕಾಂತ್
ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ
ಫಿಸಿಯೊ: ಜಾಬಾ ಪ್ರಭು
ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಕೆ.ಸಿ ಅವಿನಾಶ್
ಮ್ಯಾನೇಜರ್: ಎ.ರಮೇಶ್ ರಾವ್
ವೀಡಿಯೊ ಅನಾಲಿಸ್ಟ್: ರಾಜ್ ಕಿರೀಟ್ ಕಪಾಡಿಯಾ

ರಣಜಿ ಟ್ರೋಫಿ 2022-23: ಕರ್ನಾಟಕ ತಂಡದ ವೇಳಾಪಟ್ಟಿ (Ranji Trophy Karnataka)
ಡಿಸೆಂಬರ್ 13-16 Vs ಸರ್ವಿಸಸ್ (ಬೆಂಗಳೂರು)
ಡಿಸೆಂಬರ್ 20-23 Vs ಪಾಂಡಿಚೇರಿ (ಬೆಂಗಳೂರು)
ಡಿಸೆಂಬರ್ 27-30 Vs ಗೋವಾ (ಪೊರ್ವರಿಮ್)
ಜನವರಿ 03-06 Vs ಛತ್ತೀಸ್’ಗಢ (ರಾಯ್ಪುರ)
ಜನವರಿ 10-13 Vs ರಾಜಸ್ಥಾನ (TBC)
ಜನವರಿ 17-20 Vs ಕೇರಳ (ತಿರುವನಂತಪುರಂ)
ಜನವರಿ 24-27 Vs ಜಾರ್ಖಂಡ್ (ಚಂಢೀಗಢ)

ಇದನ್ನೂ ಓದಿ : India beat Bangladesh by 227 runs : ಇಶಾನ್ ದ್ವಿಶತಕ, ಕೊಹ್ಲಿ ಶತಕ; ಕ್ಲೀನ್ ಸ್ವೀಪ್ ಅವಮಾನ ತಪ್ಪಿಸಿದ ರಾಹುಲ್ ನಾಯಕತ್ವ

ಇದನ್ನೂ ಓದಿ : PT Usha | ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಪಿ.ಟಿ.ಉಷಾ ಆಯ್ಕೆ : ಉನ್ನತ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ

Mayank Agarwal to lead Karnataka in Ranji Trophy 2022-23 Karnataka Ranji Team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular