ಸೋಮವಾರ, ಜೂನ್ 16, 2025
HomeSportsCricketGautam Gambhir Warning: ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ಗಂಭೀರ್ ಖಡಕ್ ವಾರ್ನಿಂಗ್ 

Gautam Gambhir Warning: ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ಗಂಭೀರ್ ಖಡಕ್ ವಾರ್ನಿಂಗ್ 

- Advertisement -

India vs Sri Lanka ODI : ಕೊಲೊಂಬೊ: ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir), ಟೀಮ್ ಇಂಡಿಯಾ ಆಟಗಾರರಿಗೆ ಖಡಕ್ ವಾರ್ನಿಂಗ್ ಒಂದನ್ನು ಕೊಟ್ಟಿದ್ದಾರೆ.

India vs Sri Lanka ODI Gautam Gambhir warning for Team India players
Image Credit : Inside Sports

ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ ಭಾರತ ತಂಡದ ಪ್ರಧಾನ ಕೋಚ್ಆಗಿ ಗೌತಮ್ ಗಂಭೀರ್ ಅವರ ಅಭಿಯಾನ ಆರಂಭಗೊಂಡಿತ್ತು. ಗಂಭೀರ್ ಮಾರ್ಗದರ್ಶನದಲ್ಲಿ ಆಡಿದ ಮೊದಲ ಸರಣಿಯಲ್ಲೇ ಭಾರತ 3-0 ಅಂತರದಲ್ಲಿ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇದರ ಬೆನ್ನಲ್ಲೇ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ ತಂಡ ಏಕದಿನ ಸರಣಿಗೆ ಸಜ್ಜಾಗಿದ್ದು, ಸರಣಿಯ ಮೊದಲ ಪಂದ್ಯ ಇಂದು  (ಶುಕ್ರವಾರ) ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟಿ20 ಸರಣಿಯಲ್ಲಿ ಆಡಿದ್ದ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯ್ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಭಾರತದ ಮುಂದಿನ ಟಿ20 ಸರಣಿ ಇರುವುದು ಅಕ್ಟೋಬರ್ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ. ಆ ಸರಣಿಗೂ ಮುನ್ನ ಫಿಟ್ ಆಗಿದ್ದರಷ್ಟೇ ಭಾರತ ತಂಡದಲ್ಲಿ ಸ್ಥಾನ ಎಂದು ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್’ಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : Rahul Dravid Paris Olympics 2024 : ಬಾಲ್ಯದಲ್ಲಿ ಆಡಿದ ಕ್ರೀಡೆಯನ್ನು ಒಲಿಂಪಿಕ್ಸ್’ನಲ್ಲಿ ವೀಕ್ಷಿಸಿದ ರಾಹುಲ್ ದ್ರಾವಿಡ್

“ನಿಮ್ಮಲ್ಲಿ ಕೆಲ ಆಟಗಾರರು ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ನಿಮಗೆ ಸುದೀರ್ಘ ಸಮಯದ ವಿಶ್ರಾಂತಿ ಸಿಗಲಿದೆ. ಆ ವಿಶ್ರಾಂತಿಗೆ ನೀವು ಅರ್ಹರು. ಆದರೆ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಿ.. ಬಾಂಗ್ಲಾದೇಶ ಸರಣಿಗೆ ನೀವು ತಂಡಕ್ಕೆ ಮರಳು ಮುನ್ನ ನಿಮ್ಮ ಕೌಶಲ್ಯ ಇದೇ ಮಟ್ಟದಲ್ಲಿರಬೇಕು. ವಿಶೇಷವಾಗಿ ಫಿಟ್ನೆಸ್ ವಿಚಾರದಲ್ಲಂತೂ ರಾಜಿಯೇ ಇಲ್ಲ” ಎಂದು ಕೋಚ್ ಗೌತಮ್ ಗಂಭೀರ್ ತಂಡದ ಆಟಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್  

ಗೌತಮ್ ಗಂಭೀರ್ ನೇರ ನಡೆ ನುಡಿಗೆ ಹೆಸರಾದವರು. ಇದ್ದದ್ದನ್ನು ಇದ್ದ ಹಾಗೆ ಹೇಳಿ ಬಿಡುವುದು ಗಂಭೀರ್ ಅವರ ಜಾಯಮಾನ. ಟೀಮ್ ಇಂಡಿಯಾದ ಕೆಲ ಆಟಗಾರರು ಫಿಟ್ನೆಸ್ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದು ಗಂಭೀರ್ ಅವರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಡ್ರೆಸ್ಸಿಂಗ್ ರೂಮ್’ನಲ್ಲೇ ಆಟಗಾರರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಭಾರತ ತಂಡ, ನಾಳೆ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ (India Vs Sri Lanka ODI series) ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಸರಣಿಯ ಮೊದಲ ಪಂದ್ಯ ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಾಳೆ (ಶುಕ್ರವಾರ) ನಡೆಯಲಿದೆ.

ಇದನ್ನೂ ಓದಿ : MS Dhoni IPL 2025 : ಐಪಿಎಲ್-2025ರಲ್ಲಿ ಆಡಲಿದ್ದಾರೆ ‘ತಲಾ’ ಧೋನಿ, ಆದರೆ ಕಂಡಿಷನ್ ಅಪ್ಲೈ 

India vs Sri Lanka ODI Gautam Gambhir warning for Team India players

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular