Rahul Dravid – Karun Nair: ಕರ್ನಾಟಕ ತೊರೆದು ಬೇರೆ ರಾಜ್ಯದ ಪರ ಆಡಲು ಕರುಣ್ ನಾಯರ್’ಗೆ ರಾಹುಲ್ ದ್ರಾವಿಡ್ ಸಲಹೆ

ಬೆಂಗಳೂರು: ಕರ್ನಾಟದ ಸ್ಟಾರ್ ಕ್ರಿಕೆಟಿಗ ಕರುಣ್ ನಾಯರ್ (Karun Nair) ಮುಂಬರುವ ದೇಶೀಯ ಕ್ರಿಕೆಟ್ ಸಾಲಿನಲ್ಲಿ ತವರು ರಾಜ್ಯ ಕರ್ನಾಟಕವನ್ನು ತೊರೆದು ಅನ್ಯರಾಜ್ಯದ ಪರ ಆಡುವುದು (Rahul Dravid – Karun Nair) ಬಹುತೇಕ ಖಚಿತಗೊಂಡಿದೆ.

ಸತತ ವೈಫಲ್ಯಗಳ ಕಾರಣ ಕಳೆದ ಸಾಲಿನ ರಣಜಿ ಟ್ರೋಫಿ ಟೂರ್ನಿಗಾಗಿ ಆಯ್ಕೆ ಮಾಡಲಾಗಿದ್ದ ಕರ್ನಾಟಕ ತಂಡದಿಂದ ಕರುಣ್ ನಾಯರ್ ಅವರನ್ನು ಕೈಬಿಡಲಾಗಿತ್ತು. ಕರುಣ್ ಸ್ಥಾನದಲ್ಲಿ ಆಡಿದ್ದ ಯುವ ಬಲಗೈ ಬ್ಯಾಟ್ಸ್’ಮನ್ ನಿಕಿನ್ ಜೋಸ್ ಭರವಸೆ ಮೂಡಿಸಿರುವ ಕಾರಣ, ಕರುಣ್ ಅವರ ಕಂಬ್ಯಾಕ್ ಕನಸು ಬಹುತೇಕ ಭಗ್ನಗೊಂಡಿದೆ. ಹೀಗಾಗಿ ಕ್ರಿಕೆಟ್ ಭವಿಷ್ಯದ ದೃಷ್ಠಿಯಿಂದ ಕರುಣ್ ಕರ್ನಾಟಕ ತಂಡವನ್ನು ತೊರೆದು ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಬೇರೆ ರಾಜ್ಯದ ಪರ ಆಡಲಿದ್ದಾರೆ ಎನ್ನಲಾಗ್ತಿದೆ.

ಕ್ರಿಕೆಟ್ ಭವಿಷ್ಯದ ಕುರಿತಾದಿ ಕರುಣ್ ನಾಯರ್, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಸಲಹೆ ಪಡೆದಿದ್ದಾರೆ. ಕರ್ನಾಟಕ ತಂಡದಲ್ಲಿ ಅವಕಾಶ ಸಿಗದೇ ಇದ್ದರೆ ರಾಜ್ಯ ತಂಡವನ್ನು ತೊರೆದು ಬೇರೆ ರಾಜ್ಯದ ಪರ ಆಡುವುದೇ ಒಳ್ಳೆಯದು ಎಂದು ಕರುಣ್ ನಾಯರ್ ಅವರಿಗೆ ದ್ರಾವಿಡ್ ಸಲಹೆ ನೀಡಿದ್ದಾರೆಂದು ಕರುಣ್ ಅವರ ಆಪ್ತಮೂಲಗಳು ತಿಳಿಸಿವೆ.

ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಆಟಗಾರನೆಂಬ ದಾಖಲೆ ಕರುಣ್ ನಾಯರ್ (Karun Nair) ಹೆಸರಲ್ಲಿದೆ. 2016ರ ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸುವ ಮೂಲಕ ಕರುಣ್ ನಾಯರ್ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಠಿಸಿದ್ದರು. ಆದರೆ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ಕರುಣ್ ನಾಯರ್, ನಂತರ ಕರ್ನಾಟಕ ತಂಡದಲ್ಲೂ ಸ್ಥಾನ ಕಳೆದುಕೊಂಡಿದ್ದಾರೆ.

ಭಾರತ ಪರ 6 ಟೆಸ್ಟ್ ಪಂದ್ಯಗಳನ್ನಾಡಿರುವ ಕರುಣ್ ನಾಯರ್ 62.33ರ ಸರಾಸರಿಯಲ್ಲಿ ಒಂದು ತ್ರಿಶತಕ ಸಹಿತ 374 ರನ್ ಕಲೆ ಹಾಕಿದ್ದಾರೆ. ಕರ್ನಾಟಕ ಪರ ರಣಜಿ ಪಂದ್ಯಗಳು ಸೇರಿದಂತೆ ವೃತ್ತಿಜೀವನದಲ್ಲಿ ಒಟ್ಟು 85 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಕರುಣ್, 48.94ರ ಸರಾಸರಿಯಲ್ಲಿ 15 ಶತಕ ಹಾಗೂ 27 ಅರ್ಧಶತಕಗಳ ನೆರವಿನಿಂದ 5922 ರನ್ ಗಳಿಸಿದ್ದಾರೆ. 90 ಲಿಸ್ಟ್ ಎ ಪಂದ್ಯಗಳಿಂದ 2 ಶತಕ ಸಹಿತ 2119 ರನ್ ಹಾಗೂ 150 ಟಿ20 ಪಂದ್ಯಗಳಿಂದ 2 ಶತಕ ಹಾಗೂ 16 ಅರ್ಧಶತಕಗಳೊಂದಿಗೆ 2989 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Shikhar Dhawan : ವಿಶ್ವಕಪ್ ರೇಸ್‌ನಿಂದ ಶಿಖರ್ ಧವನ್ ಔಟ್, ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾಗೆ ಗಬ್ಬರ್ ಕ್ಯಾಪ್ಟನ್?

ಇದನ್ನೂ ಓದಿ : Karun Nair : ರಾಜ್ಯ ತೊರೆಯಲಿದ್ದಾರೆಯೇ ಮತ್ತೊಬ್ಬ ಕನ್ನಡಿಗ? ವಿದರ್ಭ ಪರ ಆಡಲಿದ್ದಾರೆಯೇ ಕರುಣ್ ನಾಯರ್?

2014-15ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ತ್ರಿಶತಕ ಬಾರಿಸುವ ಮೂಲಕ ಕರ್ನಾಟಕ ತಂಡ ಸತತ 2ನೇ ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಕರುಣ್ ನಾಯರ್ ಮಹತ್ವದ ಪಾತ್ರ ವಹಿಸಿದ್ದರು. 2013-14ರಲ್ಲೂ ಕರ್ನಾಟಕ ತಂಡ ರಣಜಿ ಚಾಂಪಿಯನ್ ಆದಾಗ ಕರುಣ್ ನಾಯರ್ ತಂಡದಲ್ಲಿದ್ದರು.

Rahul Dravid – Karun Nair: Rahul Dravid advises Karun Nair to leave Karnataka and play for another state

Comments are closed.