5 Latest News Headlines Today: ಈ ದಿನದ ಪ್ರಮುಖ 5 ಸುದ್ದಿಗಳು

ಬೆಂಗಳೂರು :5 Latest News Headlines Today : ರಾಜ್ಯ, ದೇಶ, ವಿದೇಶದಲ್ಲಿ ನಿತ್ಯವೂ ಒಂದಿಲ್ಲೊಂದು ವಿದ್ಯಾಮಾನಗಳು ನಡೆಯುತ್ತಲೇ ಇವೆ. ಇಂತಹ ವಿದ್ಯಾಮಾನಗಳ ಕುರಿತು ಪ್ರಮುಖ 5 ಸುದ್ದಿಗಳನ್ನು ನಿಮ್ಮ ಮುಂದೆ ಇರಿಸುವ ಪ್ರಯತ್ನ ನಮ್ಮದು. ಮುಂಬೈನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಕಾಂತಾರ ಸಿನಿಮಾ ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿದೆ. ಆದರೆ ಇದೀಗ ಸಿನಿಮಾಕ್ಕೆ ಫೈರಸಿ ಕಾಟ ಶುರುವಾಗಿದೆ. ಸ್ಯಾಂಡಲ್‌ವುಡ್ ನ ಖ್ಯಾತ ನಟ ಧ್ರುವ ಸರ್ಜಾ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ದುಬೈನಲ್ಲಿ ಹಿಂದೂ ದೇವಾಲಯ ನಿರ್ಮಾಣವಾಗಿದ್ದು, ಇಂದಿನಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಭಾರೀ ಮಳೆಯ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Road Accident : ಮುಂಬೈನಲ್ಲಿ ಭೀಕರ ಅಪಘಾತ; ಐವರು ಸಾವು, 12 ಮಂದಿಗೆ ಗಾಯ

ಮುಂಬೈ : ವೇಗವಾಗಿ ಬಂದ ಕಾರೊಂದು ಮೂರು ಕಾರು ಹಾಗೂ ಅಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿ, 12 ಮಂದಿ ಸಾವನ್ನಪ್ಪಿರುವ ಘಟನೆ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಕೊಂಡಿಯಲ್ಲಿ ನಡೆದಿದೆ.ಭೀಕರ ಅಪಘಾತ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಬುಧವಾರ ಬೆಳಗ್ಗಿನ ಜಾವ 3.30ರ ಹೊತ್ತಿಗೆ ಮುಂಬೈನ ಬಾಂದ್ರಾ-ವಾರ್ಲಿಯ ರಸ್ತೆಬದಿಯಲ್ಲಿ ಅಪಘಾತ ( Road Accident )ವೊಂದು ಸಂಭವಿಸಿದ್ದು,ಅಪಘಾತಕ್ಕೀಡಾದ ಜನರನ್ನುಸಾಗಿಸಲು ಆಂಬುಲೆನ್ಸ್‌ ಮತ್ತು ಕೆಲವು ಇತರೆ ವಾಹನಗಳು ರಸ್ತೆ ಬದಿಯಲ್ಲಿ ನಿಂತಿದ್ದವು .ಆ ಸಮಯ ವೇಗವಾಗಿ ಬಂದ ಕಾರೊಂದು ಘಟನಾ ಸ್ಥಳದಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಮೊದಲು ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವ ಸಿದ್ಧತೆಯಲ್ಲಿರುವಾಗ ಈ ಘಟನೆ ನಡೆದಿದೆ. ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನೂ 12 ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಷ್ಟು ಓದಿ

Dhruva Sarja :ಅದ್ದೂರಿ ಬರ್ತಡೇ ಬೇಡ ಎಂದ ಧ್ರುವ ಸರ್ಜಾ

ಸ್ಯಾಂಡಲ್ ವುಡ್ ನ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ (Dhruva Sarja)ಮನೆಯಲ್ಲಿಗ ಸುಖ ಮತ್ತು ದುಃಖದ ಮಿಕ್ಸ್ ಎಮೋಶನ್ ತುಂಬಿದೆ. ಒಂದೆಡೆ ಧ್ರುವ್ ಸರ್ಜಾ ಹಾಗೂ ಪ್ರೇರಣಾ ದಂಪತಿ ಪೋಷಕರಾಗಿ ಭಡ್ತಿ ಪಡೆದಿದ್ದು ಈ ದಂಪತಿಗಳಿಗೆ ಮುದ್ದಾದ ಮಗಳು ಜನಿಸಿದ್ದಾಳೆ. ಆದರೆ ಅಗಲಿದ ಚಿರು ಸರ್ಜಾ ಹಾಗೂ ಧ್ರುವ್ ಅಜ್ಜಿ ಲಕ್ಷ್ಮೀದೇವಮ್ಮ ನೆನಪು ಧ್ರುವ್ ಸರ್ಜಾ ಕುಟುಂಬವನ್ನು ಕಾಡುತ್ತಲೇ ಇದೆ. ಹೀಗಾಗಿ ಧ್ರುವ್ ಸರ್ಜಾ ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ದಾರೆ. ಇನ್ನಷ್ಟು ಓದಿ

Kantara Movie leaks : ಕಾಂತಾರಕ್ಕೂ ಪೈರಸಿ ಕಾಟ

ಒಂದೆಡೆ ಸ್ಯಾಂಡಲ್ ವುಡ್ ನಲ್ಲಿ ಕಾಂತಾರ ಸಿನಿಮಾ ಸಖತ್ ಸದ್ದು‌ಮಾಡುತ್ತಿದೆ. ಈಗಾಗಲೇ ಕೋಟಿ ಕ್ಲಬ್ ಸೇರಿರೋ ಸಿನಿಮಾ ಇನ್ನಷ್ಟು ದಾಖಲೆ ಬರೆಯೋ ಮುನ್ಸೂಚನೆ ನೀಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಂತೂ ಕಾಂತಾರ ಸಿನಿಮಾದ್ದೇ ಸದ್ದು.‌ಕಾಂತಾರಾ ಸಿನಿಮಾ, ತುಳುನಾಡಿನ ನಂಬಿಕೆ, ಭೂತ ಕೋಲ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಇದೆಲ್ಲದರ ಮಧ್ಯೆ ಎಲ್ಲ ಯಶಸ್ವಿ ಸಿನಿಮಾಗಳಂತೆ ಕಾಂತಾರಕ್ಕೂ ಪೈರಸಿ ಕಾಟ‌ ಎದುರಾಗಿದ್ದು ಸಿನಿಮಾ ತಂಡ ಆಘಾತ ಎದುರಿಸುತ್ತಿದೆ. ಶುಕ್ರವಾರ ತೆರೆಕಂಡ ಕಾಂತಾರ ಸಿನಿಮಾ ಸಖತ್ ಹಿಟ್ ಹಾದಿಯತ್ತ ಸಾಗಿದೆ. ಪರಂಪರೆ, ಸಂಸ್ಕೃತಿ, ಕಾಡುಗಳ್ಳತನದ ಹೋರಾಟ, ನಂಬಿಕೆ, ತುಳುವ ಸಂಸ್ಕೃತಿ ಹೀಗೆ ನಾನಾ ಆಯಾಮಗಳಲ್ಲಿ ಸಾಗುವ ಕಥಾಹಂದರ ಪ್ರೇಕ್ಷರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಆದರೆ ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಪೈರಸಿ ಕಾಟವೂ ಜೋರಾಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಯಲ್ಲಿ ತೆರೆ ಕಂಡಿರೋ ಸಿನಿಮಾದ ಥಿಯೇಟರ್ ಪ್ರಿಂಟ್ ಈಗ ಎಲ್ಲೆಡೆ ಹರಿದಾಡಲಾರಂಭಿಸಿದೆ. ಇನ್ನಷ್ಟು ಓದಿ

Yellow alert announced : ಕರ್ನಾಟಕದಲ್ಲಿ ಮಳೆ ಮುಂದುವರಿಕೆ : ಯೆಲ್ಲೋ ಅಲರ್ಟ್‌ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನಲೆಯಲ್ಲಿ ಕರ್ನಾಟಕರ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆಯಿದೆ. ಹಾಸನ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಇಂದು ʼಯೆಲ್ಲೋ ಅಲರ್ಟ್‌ʼ ಘೋಷಿಸಲಾಗಿದೆ. ಬೆಂಗಳೂರು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆಯಾಗಲಿದ್ದು, ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಚಳಿಯ ವಾತಾವರಣ ಹೆಚ್ಚಾಗಿದೆ. ಬೆಣಗಳೂರು , ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊಂಚ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವೊಂದು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಇನ್ನಷ್ಟು ಓದಿ

Dubai Hindu Temple : ದುಬೈನಲ್ಲಿ ಹಿಂದೂ ದೇವಾಲಯ ಉದ್ಘಾಟನೆ : ದೇವರ ದರ್ಶನಕ್ಕೆ ಬೇಕು ಅಪಾಯಿಂಟ್‌ಮೆಂಟ್‌

ದುಬೈ : ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ವಿಜಯ ದಶಮಿಗೆ ಒಂದು ದಿನದ ಮೊದಲು ಉದ್ಘಾಟನೆಗೊಂಡಿದೆ. ದುಬೈನ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಈ ದೇವಾಲಯದಲ್ಲಿ ಹಲವು ಚರ್ಚ್‌ ಹಾಗೂ ಗುರುದ್ವಾರಗಳಿಗೆ. ದುಬೈನಲ್ಲಿ ಹಿಂದೂ ದೇವಾಲಯ (Dubai Hindu Temple) ನಿರ್ಮಾಣವಾಗುವ ಮೂಲಕ ಹಿಂದೂಗಳ ಹಲವು ವರ್ಷದ ಬೇಡಿಕೆ ಈಡೇರಿದಂತಾಗಿದೆ.ಇದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಅಕ್ಟೋಬರ್ 5 ರಿಂದ ದೇವಾಲಯವು ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ. ಹಿಂದೂಗಳ ಹಲವು ವರ್ಷದ ಬೇಡಿಕೆಯಂತೆ 2020 ರಲ್ಲಿ ದೇವಾಲಯಕ್ಕೆ ಅಡಿಪಾಯ ಹಾಕಲಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಇನ್ನಷ್ಟು ಓದಿ

5 Latest News Headlines Today

Comments are closed.