egg at Siddaramaiah’s car : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್​ ಕಾರ್ಯಕರ್ತ : ಹಿಂದೂ ವಿರೋಧಿ ಹೇಳಿಕೆ ಸಹಿಸದೇ ಕೃತ್ಯ

ಕೊಡಗು :egg at Siddaramaiah’s car : ನೆರೆ ಪೀಡಿತ ಸ್ಥಳಕ್ಕೆ ಭೇಡಿ ನೀಡಿದ್ದ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಹನಕ್ಕೆ ಮೊಟ್ಟೆ ಎಸೆತ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್​ ಎದುರಾಗಿದೆ. ಕುಶಾಲನಗರ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಆರೋಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತ ಸಂಪತ್​​ ಎಂಬಾತನನ್ನು ಬಂಧಿಸಿದ್ದಾರೆ. ಸೋಮವಾರ ಪೇಟೆ ನಿವಾಸಿಯಾಗಿರುವ ಸಂಪತ್​ ಕಾಂಗ್ರೆಸ್​ ಕಾರ್ಯಕರ್ತನೇ ಆಗಿದ್ದಾರೆ.

ಆರೋಪಿ ಸಂಪತ್​​​ ನ್ಯಾಯಾಲಯಕ್ಕೆ ಶರಣಾಗಲು ಬಂದ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಬಂಧನಕ್ಕೂ ಮುನ್ನ ಕಾಂಗ್ರೆಸ್​ ಕಾರ್ಯಕರ್ತ ನಾಗಿ ಸಿದ್ದರಾಮಯ್ಯ ಕಾರಿಗೆ ಏಕೆ ಮೊಟ್ಟೆ ಹೊಡೆದೆ ಎಂಬ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಸುಲ್ತಾನರ ವಿಚಾರವಾಗಿ ಕೊಡಗಿನವರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದರು. ಇದರಿಂದಾಗಿ ನಾನು ಈ ರೀತಿ ಮಾಡಿದೆ ಎಂದು ಹೇಳಿದ್ದಾನೆ.

ಕಾಂಗ್ರೆಸ್​​​ನಲ್ಲಿಯೂ ಹಿಂದೂಗಳಿದ್ದಾರೆ. ಆದರೆ ಸಿದ್ದರಾಮಯ್ಯ ಕೊಡಗು ಜಿಲ್ಲೆಯವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿದ್ದು ತಪ್ಪಿದೆ. ಟಿಪ್ಪು ಸುಲ್ತಾನನ ವಿಚಾರಕ್ಕೆ ಕೊಡಗು ಜನತೆಯ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಸಿದ್ದರಾಮಯ್ಯರ ಹೇಳಿಕೆಗಳಿಂದ ನೊಂದಿದ್ದ ನಾನು ಅವರು ಕೊಡಗಿಗೆ ಬರುತ್ತಿದ್ದಂತೆಯೇ ಕಾರಿಗೆ ಮೊಟ್ಟೆ ಹೊಡೆದಿದ್ದೇನೆ ಎಂದು ಆರೋಪಿ ಸಂಪತ್​ ಹೇಳಿದ್ದಾನೆ .

ಶಿವಮೊಗ್ಗದಲ್ಲಿ ವೀರ ಸಾವರ್ಕರ್​ ಫ್ಲೆಕ್ಸ್​ ಗಲಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​ ಫೋಟೋ ಯಾಕೆ ಅಳವಡಿಸಬೇಕು ಎಂದು ಪ್ರಶ್ನಿಸಿದ್ದರು. ಇದು ಬಿಜೆಪಿಗರ ಕಣ್ಣು ಕೆಂಪಗಾಗಿಸಿತ್ತು. ಈ ಹೇಳಿಕೆ ಬಳಿಕ ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಬೀಳುತ್ತಿದ್ದಂತೆಯೇ ಇದು ಬಿಜೆಪಿ ಕಾರ್ಯಕರ್ತರ ಕಾರ್ಯ ಎಂದೇ ಹೇಳಲಾಗಿತ್ತು. ಈ ಮಾತಿಗೆ ಪುಷ್ಠಿ ಎಂಬಂತೆ ಆರೋಪಿ ಸಂಪತ್​​ ಅಪ್ಪಚ್ಚು ರಂಜನ್​ ಜೊತೆಯಲ್ಲಿ ಇರುವ ಫೋಟೋ ಕೂಡ ವೈರಲ್​ ಆಗಿತ್ತು.ಹೀಗಾಗಿ ಇದು ಬಿಜೆಪಿ ಕಾರ್ಯಕರ್ತರ ಕಾರ್ಯ ಎಂದೇ ಭಾವಿಸಲಾಗಿತ್ತು.

ಇದನ್ನು ಓದಿ : Pramod Muthalik : ಕುಂಕುಮ, ಕೇಸರಿ ಬಣ್ಣ ಕಂಡರೆ ಉರಿಯುವ ಸಿದ್ದರಾಮಯ್ಯ ಮಠಕ್ಕೆ ಹೋಗೋದು ಮತದಾಹಕ್ಕೆ : ಪ್ರಮೋದ್​ ಮುತಾಲಿಕ್​ ಕಿಡಿ

ಇದನ್ನೂ ಓದಿ : Govinda Karajola : ‘ಮುಪ್ಪಿನಲ್ಲಿ ಸಿದ್ದರಾಮಯ್ಯಗೆ ಮಠ-ಮಾನ್ಯಗಳ ಬಗ್ಗೆ ಜ್ಞಾನೋದವಾಗಿದೆ’ : ಗೋವಿಂದ ಕಾರಜೋಳ ವ್ಯಂಗ್ಯ

A Congress worker threw an egg at Siddaramaiah’s car

Comments are closed.